ಸಾವಯವ ಕೃಷಿಯಿಂದ ಭರ್ಜರಿ ಬೆಳೆ ತೆಗೆದ ರೈತ – ಶಿವಾನಂದ ಕುಂಬಾರ

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ರೆವೂರ ಬಿ ಯಲ್ಲಿ ಕಾವೇರಿ ಸೀಡ್ ಕಂಪನಿ ಲಿಮಿಟೆಡ್ ವತಿಯಿಂದ ಕ್ಷೇತ್ರ ವೀಕ್ಷಣೆ ಕಾರ್ಯಕ್ರಮ ನಡೆಯಿತು ಷ.ಬ್ರ.ಶ್ರೀಕಂಠ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕಲಬುರ್ಗಿ ಪ್ರಮುಖ ರಾಮಚಂದ್ರ ಸುತಾರ:

ರೈತರಿಗೆ ಸರಿಯಾಗಿ ಮಳೆ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆಯು ಸರಿಯಾದ ಮಾಹಿತಿ ನೀಡದೆ ಅವ್ಯವಹಾರ ದಲ್ಲಿ ತೊಡಗಿದ್ದಾರೆ ವಿದ್ಯುತ್ ಇಲಾಖೆ ಅಧಿಕಾರಿಗಳು ಸರಿಯಾಗಿ ಕರೆಂಟ್ ಕೊಡದೆ ರೈತರಿಗೆ ಸತಾಯಿಸಿ ಬೆಳೆ ಬೆಳೆಯುವ ಸಮಯದಲ್ಲಿ ವಿದ್ಯುತ್ ಕಡಿತ ಮಾಡುವುದನ್ನು ನಿಲ್ಲಿಸಬೇಕು. ಎಂದು ತರಾಟೆಗೆ ತೆಗೆದುಕೊಂಡರು ಸಾವಯವ ಕೃಷಿಯಿಂದ ಸಮೃದ್ಧಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡುವ ಮೂಲಕ ಭಾರತದ ಬದಲಾವಣೆಗೆ ಹೆಚ್ಚು ಶಕ್ತಿ ಕೊಡಬೇಕು ಎಂದು ತಿಳಿಸಿದರು.

ಮೃತ್ಯುಂಜಯ ಅಗ್ರೊ ಕಲಬುರ್ಗಿಯ ಪಂಡಿತರಾವ ಪಾಟಿಲ್ ಮಾತನಾಡಿ:

ಕಾವೇರಿ ಸಂಪದ ತೊಗರಿ ಬೀಜವು ಒಣ ಬೆಸಾಯದಲ್ಲಿ ಎಕರೆಗೆ ಸುಮಾರು 8-10 ಕ್ವಿಂಟಾಲ್ ಇಳುವರಿ ಬರುತ್ತದೆ. ನೀರಾವರಿಯಲ್ಲಿ ಎಕರೆಗೆ ಸುಮಾರು 12-14 ಕ್ವಿಂಟಾಲ್ ಇಳುವರಿ ಪಡೆಯಬಹುದು. ರೈತರು ದೇವರ ಸಮಾನ ಅವರಿಗೆ ಮೋಸ ಮಾಡಿದರೆ ಹೆತ್ತ ತಾಯಿ ತಂದೆಗೆ ಮೋಸ ಮಾಡಿದಂತೆ ಎಂದು ತಿಳಿಸಿದರು.

ಶ್ರೀಗಳು ಮಾತನಾಡಿ:

ಮೊದಲು ರೈತರು ಒಂದಾಗಬೇಕು ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು ಅಂದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಶಿವಾನಂದ ಕುಂಬಾರ ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಜೊತೆಗೆ ಸಾವಯವ ಕೃಷಿಯಿಂದ ಭರ್ಜರಿ ತೊಗರಿ ಬೆಳೆದ ರೈತ ಎಂದು ತಿಳಿಸಿದರು .

ಅಧ್ಯಕ್ಷ ಸ್ಥಾನವಹಿಸಿದ ಚಿತ್ರಶೇಕರ ಮಾತನಾಡಿ:

ಕಾವೇರಿ ಸಂಪದ ತೊಗರಿ ಬೇಳೆ ಬೆಳೆಯಬೇಕು ಅದು ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ

ಶಿವಲಿಂಗಪ್ಪ ,ಮಾಂತು ಉಡುಗಿ, ರಾಮಲಿಂಗ ವಡ್ಡರ್, ಯಶ್ವಂತರಾವ ಪಾಟಿಲ್, ಬಸವರಾಜ ಬಸೆಟ್ಟಿ, ನಿಂಗನಗೌಡ ಅಂಕಲಗಿ ,ರಾಜು ಪಾಟೀಲ್,ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಕಾರ್ಯವನ್ನು ವಿಜಯಕುಮಾರ್ ನಿರೂಪಿಸಿದರು. ಶಿವರಾಜ್ ಘಾಣೂರ ಪ್ರಾರ್ಥಿಸಿದರು. ಚಂದ್ರಕಾಂತ ಪೂಜಾರಿ ಸ್ವಾಗತಿಸಿದರು. ರೈತ ಶಿವಾನಂದ ಕುಂಬಾರ ವಂದಿಸಿದರು.

ರಾಯಲ್ ಟಿವಿ ನ್ಯೂಸ್ ಗುಲಬರ್ಗಾ

Published by Royal TV

Royal tv Kannada news online website channel

Leave a comment

Design a site like this with WordPress.com
Get started