ವಿಜಯಪುರ ಜಿಲ್ಲೆಯ ಸುದ್ದಿ:

ಗೊಳಸಂಗಿ ಕ್ರಾಸ್ ಹತ್ತಿರ ಭೀಕರ ಅಪಘಾತ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೆ ಮೂರು ಸಾವು ಇಬ್ಬರ ಸ್ಥಿತಿ ಚಿಂತಾಜನಕ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಇನ್ನೊಂದು ಸಾವು.ಮೃತರು ಆಂದ್ರ ಪ್ರದೇಶದವರು ಎಂದು ತಿಳಿದು ಬಂದಿದೆ. ಇನ್ನೂ ಅಪಘಾತ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಾರಣ ಆಲಮಟ್ಟಿ, ನಿಡಗುಂದಿ, ಬಾಗೇವಾಡಿ,ಕೂಡಗಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆಯ ಮೇಲೆ ಇದ್ದ ಟ್ರಾಫಿಕ್ ನಿಯಂತ್ರಣ ಮಾಡಿದರು.

ಘಟನೆ ವಿವರ:ವಿಜಯಪುರ ಕಡೆಯಿಂದ ಬರುತ್ತಿದ್ದ ಮಾರುತಿ ಸುಜುಕಿ KA-34 P 0880 ನಂಬರಿನ ಕಾರು ವಿಜಯಪುರ ಕಡೆ ಹೊರಟಿದ್ದ GJ-03-BV-3777 ನಂಬರಿನ ಲಾರಿ ರಸ್ತೆ ರಿಪೇರಿಗಾಗಿ ಬ್ಯಾರಿಕೆಡ್ ಹಾಕಿದ್ದರಿಂದ ಒಂದೇ ಬದಿಯಲ್ಲಿ

ಚಲಿಸಬೇಕಾಗಿತ್ತು,ಆದರೆ ಕಾರು ಹಾಗೂ ಲಾರಿ ವೇಗವಾಗಿ ಇದ್ದ ಕಾರಣ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.ಈ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಅಡಿಶನಲ್ ಎಸ್ಪಿ ಅರಸಿದ್ದಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ. ಕೂಡಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts