
ರಾಜ್ಯ ಆರ್ಥಿ ಸಂಕಷ್ಟದಲ್ಲಿದೆ ಎಂಬುದು ತಿಳಿದಿದ್ದರೂ ಜನಪರ ಯೋಜನೆಗಳಿಗೆ ಜಾಸ್ತಿ ಒತ್ತು ನೀಡುವ ಬದಲು ಮೋದಿ ಮಾದರಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದು, ರಾಜ್ಯ ಬಿಜೆಪಿಗೆ ಜನಪರ ಕಾಳಜಿ ಇಲ್ಲ ಎಂಬುದರ ಸೂಚಕ ತೋರಿಸುತ್ತದೆ. ಇಂದು ಮಂಡಿಸಿದ ಬಜೆಟ್ ಜನವಿರೋಧಿ ಬಜೆಟ್ ಆಗಿದೆ.
ಕೇಂದ್ರದಿಂದ ಬರಬೇಕಿದ್ದ ಸುಮಾರು ₹11 ಸಾವಿರ ಕೋಟಿ ಜಿ.ಎಸ್.ಟಿ ಪಾಲು ರಾಜ್ಯಕ್ಕೆ ಸಿಕ್ಕಿಲ್ಲ, ಅನುದಾನದಲ್ಲಿ ಸುಮಾರು ₹8 ಕೋಟಿ ಕಡಿಮೆಯಾಗಿದ್ದರಿಂದ ಬಜೆಟ್ ಗೆ ಸಮಸ್ಯೆಯಾಗುತ್ತಿದೆ ಎಂದು ಪರೋಕ್ಷವಾಗಿ ಹೇಳಿದ್ದೀರಿ. ಕೇಂದ್ರದಲ್ಲಿ ಇರುವುದು ತಮ್ಮ ಸರ್ಕಾರ ಅಲ್ಲವೆ ?
ಮಹದಾಯಿ ಯೋಜನೆಗೆ ₹2,000 ಕೋಟಿ ಅನುದಾನ ಅವಶ್ಯಕತೆ ಇದೆ ಎಂದು ತಿಳಿದಿದ್ದರೂ, ಬಜೆಟ್ ನಲ್ಲಿ ₹500 ಕೋಟಿ ಮಾತ್ರ ಮೀಸಲಿಟ್ಟಿದ್ದು ಉತ್ತರ ಕರ್ನಾಟಕದ ಜನತೆಗೆ ರಾಜ್ಯ ಬಿಜೆಪಿ ಅನ್ಯಾಯ ಮಾಡುತ್ತಿರುವುದನ್ನು ತೋರಿಸುತ್ತಿದೆ.
BSYBJP ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ಪೆಟ್ರೋಲ್ ಬೆಲೆ ₹1.60 ಮತ್ತು ಡೀಸೆಲ್ ಬೆಲೆ ₹1.59 ಏರಿಕೆ ಮಾಡಿದೆ.
ಹದಗೆಟ್ಟ ಆರ್ಥಿಕ ಪರಿಸ್ಥಿತಿ ಮತ್ತು ಬೆಲೆ ಏರಿಕೆಯಿಂದ ಜನರು ತತ್ತರಿಸಿರುವಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವುದು ಖಂಡನೀಯ. ಬೆಲೆ ಏರಿಕೆಯನ್ನು ಹಿಂಪಡೆಯಿರಿ.
ಇದು ಜನ ವಿರೋಧಿ ಬಜೆಟ್ ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಎನ್ ಎಸ್ ಯು ಐ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ, ನಿಮ್ಮ ಯಾವುದೇ ಸುದ್ದಿಗಳನ್ನು ನಮಗೆ ನೀಡಿ-8792900064
Published by Royal TV
Royal tv Kannada news online website channel
View more posts