ರಾಜ್ಯ ಸುದ್ದಿ-ಬೆಂಗಳೂರು ಕರ್ನಾಟಕ ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆದ ರಾಜ್ಯ ವಿಧಾನಸಭೆಯ ಕ್ಷೇತ್ರಗಳ ಉಪಚುನಾವನೆಯ ಫಲಿತಾಂಶ ಮತ ಎಣಿಕೆ ಕಾರ್ಯ ಮುಗಿದಿದೆ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ರಾಜ್ಯದಲ್ಲಿ ಬಿಜೆಪಿ ಪಾಲಿಗೆ ನಿರ್ಣಾಯಕ ಚುನಾವಣೆಯಾಗಿದ್ದ ಉಪಚುನಾವಣೆ ಫಲಿತಾಂಶದಲ್ಲಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿದ್ದು, ಕೇವಲ 2 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ.
15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಗೋಕಾಕ್ – ರಮೇಶ್ ಜಾರಕಿಹೊಳಿ (ಬಿಜೆಪಿ)ರಾಣೆಬೆನ್ನೂರು-ಅರುಣ್ ಕುಮಾರ್ ಪೂಜಾರ (ಬಿಜೆಪಿ)ವಿಜಯನಗರ- ಆನಂದ್ ಸಿಂಗ್ (ಬಿಜಪಿ)ಕೆ.ಆರ್.ಪುರ-ಭೈರತಿ ಬಸವರಾಜ (ಬಿಜೆಪಿ)ಯಶವಂತಪುರ-ಸೋಮಶೇಖರ್ (ಬಿಜೆಪಿ)ಕೆ.ಆರ್. ಪೇಟೆ-ನಾರಾಯಣಗೌಡ (ಬಿಜೆಪಿ)ಮಹಾಲಕ್ಷ್ಮೀ ಲೇಔಟ್ -ಗೋಪಾಲಯ್ಯ (ಬಿಜೆಪಿ)ಚಿಕ್ಕಬಳ್ಳಾಪುರ- ಕೆ. ಸುಧಾಕರ್ (ಬಿಜೆಪಿ)ಅಥಣಿ-ಮಹೇಶ್ ಕುಮಟಳ್ಳಿ (ಬಿಜೆಪಿ)ಹಿರೇಕೆರೂರು -ಬಿ.ಸಿ. ಪಾಟೀಲ್ (ಬಿಜೆಪಿ)ಕಾಗವಾಡ-ಶ್ರೀಮಂತ ಪಾಟೀಲ್ (ಬಿಜೆಪಿ)ಯಲ್ಲಾಪುರ -ಶಿವರಾಜ್ ಹೆಬ್ಬಾರ್ (ಬಿಜೆಪಿ)ಶಿವಾಜಿನಗರ -ರಿಜ್ವಾನ್ ಅರ್ಷಾದ್ (ಕಾಂಗ್ರೆಸ್)ಹುಣಸೂರು-ಹೆಚ್.ಪಿ.ಮಂಜುನಾಥ್ (ಕಾಂಗ್ರೆಸ್)ಹೊಸಕೋಟೆ -ಶರತ್ ಬಚ್ಚೇಗೌಡ (ಪಕ್ಷೇತರ ಅಭ್ಯರ್ಥಿ)

ಒಟ್ಟಾರೆಯಾಗಿ ರಾಜ್ಯದ ಹದಿನೈದು ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.