ಮಾನ್ಯ ಮುಖ್ಯಮಂತ್ರಿಗಳೇ ಯಾರಿಗೂ ಅನ್ವಯಿಸದ ಮಾನದಂಡಗಳು ಕುಮಟಳ್ಳಿ ಯವರಿಗೆ ಏಕೆ..?

ವಿಜಯಪುರ ಜಿಲ್ಲೆಯ ಸುದ್ದಿ:

ಸನ್ಮಾನ್ಯ ಯಡಿಯೂರಪ್ಪನವರೆ ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಾದರೆ ಕುಮಟಳ್ಳಿ ಅವರ ತ್ಯಾಗವೂ ಇದೆ ಎನ್ನುವುದನ್ನು ಮರೆಯಬೇಡಿ…? ಈ ಹಿಂದೆ ಉಪಚುನಾವಣೆಯಲ್ಲಿ ತಾವೇ ಹೇಳಿದಂತೆ ಗೆದ್ದ ಎಲ್ಲಾ ಶಾಸಕರಿಗೂ ನಾನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಕುಮಟಳ್ಳಿ ಅವರಿಗೆ ಮಾತ್ರ ಬಿಟ್ಟು ಬೇರೆ ಎಲ್ಲ ಶಾಸಕರಿಗೂ ಇಂದು ಮಂತ್ರಿ ಮಾಡಿದ್ದೀರಾ ಅದಕ್ಕೆ ಕಾರಣವೇನು.?

ನಮ್ಮ ಸಮಾಜದ ಶಾಸಕರು ಮಾಡಿದ ತಪ್ಪೇನು..? ವಿವೇಚನೆಯಿಲ್ಲದೆ ತಮ್ಮ ಮೇಲಿನ ಅಂದಾಭಿಮಾನದಿಂದ ಲಿಂಗಾಯತ ಒಳಪಂಗಡಗಳು ಎಲ್ಲವೂ ಒಂದೇ ಎಂದು ಭಾವಿಸಿ ತಮ್ಮ ನಾಯಕತ್ವವನ್ನು ಪ್ರಶ್ನಾತೀತವಾಗಿ ಬೆಂಬಲಿಸಿದ್ದು ತಪ್ಪಾಯಿತೆ…? ನಮ್ಮ ಸಮಾಜದಲ್ಲಿ ಮುಖ್ಯಮಂತ್ರಿಗಳಾಗುವ ಯೋಗ್ಯತೆಯುಳ್ಳವರು ಅನೇಕರಿದ್ದಾರೆ. ಆದರೆ ತಾವು ತುಂಬಾ ಹಿರಿಯರು ಹಾಗೂ ಅನುಭವವುಳ್ಳವರು ಎಂದು ಭಾವಿಸಿ ತಮಗೆ ಷರತ್ತು ರಹಿತ ಬೆಂಬಲ ಸೂಚಿಸಿದ್ದು ತಪ್ಪಾಯಿತೇ…? ಬಹುದಿನಗಳಿಂದ ನಮ್ಮ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ವಾಗುತ್ತಿದೆ ಎಂಬುದು ನಮ್ಮ ಜನರಿಂದ ಕೇಳಿ ಬರುತ್ತಿತ್ತು ಇಂದು ಅದನ್ನು ತಾವು ಸಾಬೀತು ಮಾಡಿ ತೋರಿಸಿದ್ದೀರಾ ಇದೇ ರೀತಿ ನೀವು ಸ್ವಾಭಿಮಾನಿ ಪಂಚಮಸಾಲಿ ಸಮುದಾಯವನ್ನು ತುಳಿಯಲು ಪ್ರಯತ್ನಪಟ್ಟರೆ ಮುಂದೆ ಬರತಕ್ಕಂತಹ ದಿನಮಾನದಲ್ಲಿ ಬೆಲೆ ತೆರಬೇಕಾಗುತ್ತದೆ.ಎಂದು ಈ ಮೂಲಕ ಬೆಂಬಲಿಗರಾದ ಮಾಜಿ ಯುವ ಘಟಕ ರಾಜ್ಯ ಉಪಾಧ್ಯಕ್ಷರು ಪಂಚಮಸಾಲಿ ಡಾಕ್ಟರ್ ಬಸನಗೌಡ ಪಾಟೀಲ್ ನಾಗರಾಳ ಹುಲಿ, ಡಾಕ್ಟರ್ ಸಿಎಸ್ ಸೋಲಾಪುರ್, ರವಿ ಖಾನಾಪುರ್, ರಾಯನಗೌಡ ಆರ್ ಪಾಟೀಲ್ ಗುಣಕಿ, ಮಲ್ಲನಗೌಡ ಎಸ್ ಬಿರಾದಾರ್ ಕೋರವಾರ, ಶ್ರೀ ಸಂತೋಷ ಬಿರಾದಾರ್, ಕಲ್ಲು ಬಳ್ಳಾರಿ ಮುಂತಾದವರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ

Published by Royal TV

Royal tv Kannada news online website channel

Leave a comment

Design a site like this with WordPress.com
Get started