
ಬೆಂಗಳೂರು: ಶುಕ್ರವಾರ ದಿನಾಂಕ 27ನೇ ಮಾರ್ಚ್ 2020 ರಂದು ಸಾಯಂಕಾಲ 5 ಘಂಟೆಗೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಂಭಾಂಗಣದಲ್ಲಿ ಆಚರಿಸಲಿರುವ ಗಾಂಧೀವಾದಿ, ನಾಡಿನ ಮಹಾನ್ ಚೇತನ, ಸಹಕಾರಿ ಹಾಗೂ ಶಿಕ್ಷಣ ಧುರೀಣ ಮತ್ತು ರಾಜಕೀಯ ಹಿರಿಯ ಮುತ್ಸದ್ದಿ ದಿ।। ಶ್ರೀ ಪಿ.ಎಮ್ ನಾಡಗೌಡರ ಜನ್ಮಶತಮಾನೋತ್ಸವದ ಕಾರ್ಯಕ್ರಮಕ್ಕೆ ಲೋಕಸಭೆಯ ವಿರೋಧಪಕ್ಷದ ಮಾಜಿ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪಿ. ಎಮ್. ನಾಡಗೌಡರ ಶತಮಾನೋತ್ಸವ ಗ್ರಂಥ ಬಿಡುಗಡೆ ಮಾಡಲು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಾ” ಎಮ್. ಪಿ. ನಾಡಗೌಡರ ನೇತ್ರುತ್ವದ ನಿಯೋಗ ಖುದ್ದು ಭೇಟಿಯಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಸವರಾಜ ದಿಂಡೂರ, ಶ್ರೀ ಸಂಗನಗೌಡ ಪಿ ನಾಡಗೌಡ, ಶ್ರೀ ಮಲ್ಲನಗೌಡ ಎಸ್ ಬಿರಾದಾರ ಕೋರವಾರ, ಶ್ರೀ ಡಾ. ಬಿ. ಎಸ್. ಪಾಟೀಲ ನಾಗರಾಳಹುಲಿ, ಶ್ರೀ ಶಿವನಗೌಡ ಪಾಟೀಲ ಶಿಕಾರಿಪುರ, ಶ್ರೀ ಶಿವಾನಂದ ಬಿರಾದಾರ, ಶ್ರೀ ದಯಾನಂದ ಪಾಟೀಲ, ಶ್ರೀ ಸಂಗಮೇಶ ಗೌಡಪ್ಪನವರ ನಾಡಗೌಡ ಕುಟುಂಬದ ಹಿತೈಸಿಗಳು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ -8792900064
Published by Royal TV
Royal tv Kannada news online website channel
View more posts