ನಾಳೆ ಕರ್ನಾಟಕ ಸಂಪುರ್ಣ ಲಾಕ್ ಡೌನ್, ನಿರ್ಲಕ್ಷ್ಯಿಸಿದರೆ ಕೆಸ್ ಗ್ಯಾರಂಟಿ

ಬೆಂಗಳೂರು: ನಾಳೆಯಿಂದ ಕರ್ನಾಟಕ ರಾಜ್ಯ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಆದೇಶ ಹೊರಡಿಸಿದ ಸರ್ಕಾರ.ಕಾರಣ ಈ ಸಲುವಾಗಿ ಜನರು ಮನೆಯಿಂದ ಹೊರಗಡೆ ಬರುವಂತೆ ಇಲ್ಲ.

ಎನಾದರೂ ನೆಪ ಹೇಳಿ ಅನಗತ್ಯವಾಗಿ ಹೊರಗಡೆ ಜನರು ತಿರುಗಾಟ ನಡೆಸಿದರೆ ಪೊಲೀಸ್ ಇಲಾಖೆಯು ಅಂಥವರ ಮೇಲೆ ಕೇಸು ದಾಖಲಿಸುವಂತೆ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ. ಕೊರೋನ ವೈರಸ್ ಸೋಂಕು ಬಹಳಷ್ಟು ಆತಂಕಕಾರಿಯಾದದ್ದು. ಅದು ಈಗಾಗಲೇ ದೇಶದಲ್ಲಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಹೆಚ್ಚಿನ ಅಪಾಯ ಆಗದಿರಲಿ ಎಂಬ ಮುಂಜಾಗೃತ ಕ್ರಮಕ್ಕಾಗಿ ರಾಜ್ಯಸರ್ಕಾರ ಈ ರೀತಿಯ ಕ್ರಮ ಕೈಗೊಂಡಿದೆ.

ಈ ಸಂದರ್ಭದಲ್ಲಿ ಏನೇನು ಸಿಗುತ್ತೆ:

ಆಸ್ಪತ್ರೆ ,ಹಾಲು-ಹಣ್ಣು ,ತರಕಾರಿಗಳು ಸೇರಿದಂತೆ ತುರ್ತು ಸೇವೆಗಳು ಮಾತ್ರ ಲಭ್ಯವಾಗಲಿವೆ.

ಏನೇನು ಸಿಗಲ್ಲ:

  • ಕೆಎಸ್ಆರ್ ಟಿಸಿ ಬಸ್ ಸೇರಿದಂತೆ ಸರಕಾರಿ ಸಾರಿಗೆ ಸೇವೆಗಳು ಸೌಲಭ್ಯ ಇಲ್ಲ.

  • ಅಂಗಡಿ ಬಾರ್ ರೆಸ್ಟೋರೆಂಟ್ ಹೋಟೆಲ್ ಮಾಲ್ ಚಿತ್ರಮಂದಿರಗಳು ಬಂದ ಇರುತ್ತವೆ.

  • ಗುಂಪುಗುಂಪಾಗಿ ಓಡಾಡುವುದಕ್ಕೆ ನಿರ್ಬಂಧ ಹಾಕಲಾಗಿದೆ.

  • ಯಾವುದೇ ಸಭೆ ಸಮಾರಂಭ ಮಾಡುವಂತಿಲ್ಲ.

  • ಬಟ್ಟೆ ಅಂಗಡಿ, ಜ್ಯುವೆಲ್ಲರಿ ,ಹೂವು, ಪುಸ್ತಕದಂಗಡಿಗಳು ಬಂದಿರುತ್ತವೆ.

  • ಶಾಲಾ ಕಾಲೇಜುಗಳು ರಜೆ

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started