
ವಿಜಯಪುರ:ಕೊರೋನ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಆದೇಶದಂತೆ ಲಾಕ್ ಡೌನ್ ಆಗಿ ಜನ ಜೀವನ ಅಸ್ತವ್ಯಸ್ತವಾಗಿದೆ.ಇನ್ನೂ ಅನೇಕ ಹಿರಿಯ ಜೀವಗಳು ಹೊಟ್ಟೆಗೆ ಅಣ್ಣ ನೀರು ಇಲ್ಲದೆ ಪರದಾಡುತ್ತಿದ್ದಾರೆ.
ವಾಸ್ತವ ಹೀಗಿರುವಾಗ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲಪ್ಪ ಮಡ್ಡಿ ಮಾನವೀಯತೆ ಮೆರೆದಿದ್ದಾರೆ,ದಾರಿಯಲ್ಲಿ ಹೋಗುವಾಗ ವೈಯಸ್ಸಾದ ಹಿರಿಯ ಜೀವ ಕಂಡು ತಮ್ಮ ವಾಹನ ನಿಲ್ಲಿಸಿ ಅವರಿಗೆ ಬಿಸ್ಕತ್ತು ಹಾಗೂ ನೀರನ್ನು ಕೊಟ್ಟು ಹೃದಯವಂತರಾಗಿದ್ದಾರೆ.ಅವರು ಇಂತಹ ಹತ್ತು ಹಲವಾರು ಕಾರ್ಯಗಳು ದಿನ ನಿತ್ಯ ಮಾಡುತ್ತ ತಾಲ್ಲೂಕಿನ ಜನರ ಪ್ರೀತಿ ಪಾತ್ರರಾಗಿದ್ದಾರೆ.ಜನರು ಕೂಡ ಅವರಿಗೆ ನೆಚ್ಚಿನ ಸಿಂಗಂ ಎಂದೆ ಬಿರುದನ್ನು ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸಂಗನಗೌಡ ಬಿರಾದಾರ, ಶಿವಾನಂದ ಮಟ್ಯಾಳ,ಮಾನವೀಯತೆಗೆ ಸಾಕ್ಷಿಯಾದರು.
ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts