ಬೆಳಗಾವಿ ಜಿಲ್ಲೆಯ ಅಥಣಿ ವರದಿ
ಚುನಾವಣೆ ಫಲಿತಾಂಶ ಬರುತ್ತಿದ್ದಂತೆಯೆ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಇಂದು ಅಥಣಿ ಮತಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದು ಅಥಣಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಭಿಂದನೆಯ ಮಹಾಪೂರ ಹರಿಸಿದರು.
ಅಥಣಿ ಉಪ ಚುನಾವಣೆ ಉಸ್ತುವಾರಿಯಾಗಿದ್ದ ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಕುಟುಂಬ ಸಮೇತ ಆಗಮಿಸಿ ಮಹೇಶ ಕುಮಠಳ್ಳಿ ಅವರನ್ನ ಸತ್ಕರಿಸಿದರು
ನಂತರ ಮಾದ್ಯಮ ದವರೊಂದಿಗೆ ಮಾತನಾಡಿದ ಅವರು ಇನ್ನು ಮುಂದೆ ಅಥಣಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಆದ್ಯತೆ ಕೊಡುವದಾಗಿ ಹೇಳಿದ ಮಹೇಶ ಕುಮಠಳ್ಳಿ ಸವಳು ಜವಳು,ನೀರಾವರಿ ಸೇರಿದಂತೆ ಅಥಣಿ ತಾಲೂಕಿನ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ ಎಂದರು
ಸದ್ಯ ಗೆದ್ದ ಅಬ್ಯರ್ಥಿಗಳನ್ನು ಬೆಂಗಳೂರಿಗೆ ಕರೆದಿದ್ದಾರೆ ಇಂದು ಹೊರಡಬೇಕಿದೆ ಎಂದಷ್ಟೇ ಹೇಳುವ ಮೂಲಕ ಯಾವ ಸಚೀವ ಸ್ಥಾನದ ಆಕಾಂಕ್ಷಿ ಎಂದು ಹೇಳದೆ ಜಾರಿಕೊಂಡರಲ್ಲದೆ ರಮೆಶ್ ಜಾರಕಿಹೋಳಿ ಅವರು ನೀರಾವರಿ ಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದ ಕುಮಠಳ್ಳಿ ಅದರಿಂದ ಅಥಣಿ ತಾಲೂಕಿನ ಹಲವು ಕಾಮಗಾರಿಗಳಿಗೆ ಆದ್ಯತೆ ಸಿಗಲಿದೆ ಎಂದರು.