ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಸುದ್ದಿ
ಉಪಚುನಾವಣಾ ಹಿನ್ನೆಲೆ ದಿಗ್ವಿಜಯ ಸಾಧಿಸಿ ಸ್ವಕೇತ್ರಕ್ಕೆ ಆಗಮಿಸಬೇಕಾಗಿದ್ದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಬರದೇ ಇದ್ದ ಸಮಯದಲ್ಲಿ ಮಗ ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಕಾಗವಾಡದಲ್ಲಿ ಅದ್ದೂರಿಯಿಂದ ಅಭಿಮಾನಿಗಳು ಸ್ವಾಗತಿಸಿದರು.
ಕಾಗವಾಡದ ಚನ್ನಮ್ಮ ಸರ್ಕಲ್ ನಲ್ಲಿ ಶ್ರೀಮಂತ ಪಾಟೀಲ್ ಪ್ಲೇಕ್ಸಗಳು ರಾರಾಜುಸುತ್ತಿವೆ.
ಮುಂಜಾನೆಯಿಂದ ಕಾದು ಕುಳಿತಿದ್ದ
ಕಾರ್ಯಕರ್ತರು ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಅಭಿಮಾನಗಳ ಜೈಕಾರ ಕೂಗು ಜೋರಾಯಿತು.
ಚನ್ನಮ್ಮ ಸರ್ಕಲ್ ನಲ್ಲಿ ಸುಮಾರು 6 ಗಂಟೆಯಿಂದ ಶ್ರೀಮಂತ ಪಾಟೀಲ್ ಗಾಗಿ ಕಾದು ಕುಳಿತಿದ್ದ ಕಾರ್ಯಕರ್ತರು
ಏಳು ಗಂಟೆಗೆ ಆಗಮಿಸಿ ವಿಜಯೋತ್ಸವದಲ್ಲಿ ಭಾಗಿಯಾದ ಶ್ರೀನಿವಾಸ ಪಾಟೀಲ್
ನಗರದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿದ ಶ್ರೀಮಂತ ಪಾಟೀಲ್ ಮಗ ಶ್ರೀನಿವಾಸ ಪಾಟೀಲ್
ಮಾಧ್ಯಮದವರ ಜೊತೆ ಮಾತನಾಡಿದ ಶ್ರೀನಿವಾಸ ಪಾಟೀಲ್ ನನ್ನ ತಂದೆ ಗೆಲುವು ಪ್ರತಿಯೊಬ್ಬ ಮತದಾರರ ಗೆಲುವು ನಮ್ಮ ತಂದೆಯವರ ಗೆಲುವಿಗೆ ಶ್ರಮಿಸಿದ ಮಾನ್ಯ ಸಿಎಂ ಯಡಿಯೂರಪ್ಪ ,ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅನೆಕ ನಾಯಕರುಗಕಳಿಗೆ ಧನ್ಯವಾದ ಅರ್ಪಿಸಿದರು.
ನಮ್ಮ ತಂದೆಗೆ ಮಂತ್ರಿ ಪದವಿ ಅವಶ್ಯಕತೆ ಇಲ್ಲ ಅವರು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿ ಜನಪರ ಕೆಲಸ ಮಾಡುವದಾಗಿದೆ.ಮುಂದಿನ ತೀರ್ಮಾನ ಪಕ್ಷ ಏನು ನಿರ್ಣಯ ತೆಗೆದುಕೊಳ್ಳುತ್ತೊ ಅದಕ್ಕೆ ನಾವು ಬದ್ದ ಎಂದು ತಿಳಿಸಿದರು.