ಭಾರತೀಯ ಬಂಜಾರ ಸಂಘಟನಾ ಸಮಿತಿ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಭಾರತೀಯ ಬಂಜಾರ ಸಂಘಟನಾ ಸಮಿತಿ(ರಿ) ಬೆಂಗಳೂರು ವತಿಯಿಂದ ವಿಚಾರ ಸಂಕಿರಣ:

ಬೆಂಗಳೂರಿನ ನಯನ ರಂಗ ಮಂದಿರದ ಕನ್ನಡ ಭವನದಲ್ಲಿ ಭಾರತೀಯ ಬಂಜಾರಾ ಸೇವಾ ಸಂಘಟನೆ ವತಿಯಿಂದ ವಿಚಾರ ಸಂಕಿರಣ ಹಮ್ಮಿಕೊಂಡರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಂಜಾರಾ ಸಮಾಜದ ಸ್ವಾಮೀಜಿಗಳು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ:

ಬಂಜಾರ ಸಮಾಜದ ವಿರುದ್ದ ರಾಜ್ಯದಲ್ಲಿ ನಡೆಯುತ್ತಿರುವ ದೌರ್ಜನ್ಯ ಕ್ಕೆ ಹಾಗೊ ಸಮಾಜದವರು ಮತಾಂತರ ಗೊಳ್ಳುತ್ತಿರುವ ಹಾಗೂ ಗುಳೇ ಹೋಗುವ ಕುರಿತು ಮಾತನಾಡಿದರು. ಅಲ್ಲದೆ ಕಲಾಪದಲ್ಲಿ ಇದರ ಸಲುವಾಗಿ ಧ್ವನಿ ಎತ್ತಿ ಮಾತನಾಡುತ್ತೇನೆ ಬಂಜಾರಾ ಸಮಾಜದ ಉಳುವಿಗಾಗಿ ಹೋರಾಟಕ್ಕೆ ಸಿದ್ದನಿರುತ್ತೇನೆ ಎಂದರು.

ಜಯರಾಜ ನಾಯಕ IAS ಅಧಿಕಾರಿ ಮಾತನಾಡಿ:

ಸಮಾಜದಲ್ಲಿ ಅನೇಕ ರೀತಿಯಲ್ಲಿ ಜನರು ಇನ್ನೂ ಅಭಿವೃದ್ಧಿ ಹೊಂದಿಕೊಳ್ಳುತ್ತಿದ್ದು ಅದಕ್ಕೆ ಪ್ರೋತ್ಸಾಹ ಇಲ್ಲದಂತಾಗಿದೆ ಸಂಘಟನೆಯವರು ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿದ್ದು ಅದು ತುಂಬ ಮೆಚ್ಚುವಂತ ಕಾರ್ಯ ರಾಜಕೀಯ ಯಾವುದೇ ಸಮಾಜದಲ್ಲಿ ಸಮಾಜದವರು ಇದ್ದರು ಸಮಾಜ ಬಂದಾಗ ಎಲ್ಲರೂ ಸಂಘಟಿತರಾಗಿ ಒಂದಾಗಿ ಇರಬೇಕು ಎಂದರು.

ಸೋಮಲಿಂಗ ಮಹಾರಾಜ ಕೆಸರಟ್ಟಿ ಮಾತನಾಡಿ:

ಸಮಾಜದ ಜನ ಮೂಡನಂಬಿಕೆಯ ಹೆಸರಿನಲ್ಲಿ ಬಂಜಾರ ಸಮಾಜದ ಸಂಪ್ರದಾಯವನ್ನು ಮರೆಯುತ್ತಿದೆ.ಅಲ್ಲದೆ ನಮ್ಮ ಸಮಾಜದ ಜನ ಕೆಲಸಗೋಸ್ಕರ ಬೇರೊಂದು ರಾಜ್ಯಕ್ಕೆ ಗುಳೇ ಹೋಗುತ್ತಿದ್ದು ಅಲ್ಲದೇ ಕ್ರಿಶ್ಚಿಯನ್ ಸಮುದಾಯಕ್ಕೆ ಮಂತಾರ ಗೊಳ್ಳುತ್ತಿದ್ದು ಅದರಿಂದ ಸಮುದಾಯದ ಜನರು ಕೆಡುತ್ತಿದ್ದು ಸಂಪ್ರದಾಯ ಮರೆತು ಬದುಕುತ್ತಿದ್ದಾರೆ ಅದನ್ನು ಬಿಟ್ಟು ಸರಿಯಾದ ಮಾರ್ಗದಲ್ಲಿ ಹೋಗಬೇಕು ಅಲ್ಲದೇ ಸಮಾಜದ ಮೇಲೆ ಅನೇಕ ರೀತಿಯಲ್ಲಿ ದಬ್ಬಾಳಿಕೆ ಆಗುತ್ತಿವೆ ಅದನ್ನು ಸರಿ ಪಡಿದಸೆ ಹೋದರೆ ಸಮಾಜದ ಪರವಾಗಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

ಬಿ.ಟಿ.ಲಲಿತಾ ನಾಯಕ ಸಾಹಿತಿಗಳು ಮಾತನಾಡಿ:

ಸಮಾಜದ ಜನರು ಮುಡನಂಬಿಕೆ ಬಿಡುತ್ತಿದ್ದಾರೆ ಎಂಬ ಮಾತಿಗಿ ಅವರು ಮಾತನಾಡಿ ಸಮಾಜದಲ್ಲಿ ಆಧುನಿಕ ಯುಗದಲ್ಲಿ ತಕ್ಕಂತೆ ಮಹಿಳೆಯರು ಇರಬೇಕಾಗುತ್ತದೆ ಸಮಾಜದಲ್ಲಿ ಬಂಜಾರ ಸಮಾಜದ ಸಂಪ್ರದಾಯವನ್ನು ಮರೆಯುತ್ತಿಲ್ಲ ಆದರೆ ಇವತ್ತಿನ ಸಂಪ್ರದಾಯಕ್ಕೆ ತಕ್ಕಂತೆ ಉಡುಪು ದರಿಸುತ್ತಿದ್ದಾರೆ ಹೊರತು ಅದರಿಂದ ಸಮಾಜದ ಹಳೆಯ ಪದ್ದತಿಯನ್ನು ಸುಧಾರಿಸುತ್ತಿದ್ದಾರೆ ಅದೆ ಹಳೆಯ ಸಂಪ್ರದಾಯದಲ್ಲಿ ಮುಂದುವರಿದರೆ ಇನ್ನಿತರ ಸಮಾಜದಲ್ಲಿ ಶೋಷಣೆಗೆ ಒಳಪಡುವಂತಾಗುತ್ತದೆ.ಅದನ್ನು ಬಿಟ್ಟು ಸುಧಾರಣೆ ಯಾಗಬೇಕು.ಸ್ವಾಮಿಗಳು ಸಂಘಟನೆಗಳು ಸಮಾಜದಲ್ಲಿ ಒಳ್ಳೆಯದನ್ನು ಮಾಡುವದನ್ನು ಹೇಳಬೇಕು ಹೊರತು ಸಮಾಜದ ಜನರಲ್ಲಿ ಜಗಳ ಹಚ್ಚುವ ಕಾರ್ಯ ಮಾಡಬಾರದು ಎಂದರು.

ರಾಜಪಾಲ ಚವ್ಹಾನ ಬಂಜಾರಾ ಸಮಾಜದ ಮುಖಂಡರು ವಿಜಯಪುರ ಮಾತನಾಡಿ:

ನಮ್ಮ ಸಮಾಜದ ಜನರು ಮತಾಂತರ ಗೊಳ್ಳುತ್ತಿದ್ದು ಈಗಾಗಲೇ ಮತಾಂತರ ಆದವರನ್ನು ಬಿಟ್ಟು ಈಗಾಗಲೇ ಮತಾಂತರ ಹೋಗುತ್ತಿರುವವರನ್ನು ನಾವು ನಾವೆಲ್ಲರೂ ಸೇರಿ ತಡೆಯೋನ.ಹಾಗೆ ಸಮುದಾಯದ ಮೇಲೆ ಸಮಾಜದಲ್ಲಿ ಅನೇಕ ರೀತಿಯ ದೌರ್ಜನ್ಯ ನಡೆಯುತ್ತಿದ್ದ ಸಮಾಜದ ಎಲ್ಲರೂ ಸೇರಿಕೊಂಡು ಹೋರಾಟ ಮಾಡೋನ ಎಂದರು.

ಸಂಘಟನೆ ರಾಜ್ಯ ಅಧ್ಯಕ್ಷ ಪುಂಡಲೀಕ ಪವಾರ ಮಾತನಾಡಿ:

ಬಂಜಾರಾ ಸಮಾಜದಲ್ಲಿನ ಬಡ ಜನರ ಇಂದಿನ ಪರಿಸ್ಥಿತಿ ತುಂಬಾ ಕೆಡುತ್ತಿದ್ದು ಅದಕ್ಕೆ ಸರ್ಕಾರ ಆಗಲೀ ಸಮಾಜದ ರಾಜಕೀಯ ನಾಯಕರಾಗಲಿ ಮುಖಂಡರಾಗಲಿ ಅದನ್ನು ಸರಿ ಪಡಿಸಲು ಮುಂದೆ ಬರುತ್ತಿಲ್ಲ ಕೇವಲ ಮಾತನಾಡುತ್ತಾರೆ ಹೋಗುತ್ತಾರೆ ಹೊರತು ಸಮಾಜದ ಬೆಳವಣಿಗೆ ಮಾಡಲು ಮುಂದು ಬರುತ್ತಿಲ್ಲ ಅದಕ್ಕಾಗಿ ಸಂಘಟನೆಯ ರೂಪದಲ್ಲಿ ಸಮಾಜದ ಹಿಂದುಳಿದ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದು ಅದಕ್ಕೆ ಎಲ್ಲ ರೀತಿಯಲ್ಲಿ ಸಮಾಜದವರು ಒಗ್ಗೂಡಬೇಕು ಇಲ್ಲವಾದಲ್ಲಿ ಸಮಾಜದ ಮೇಲೆ ಆಗುತ್ತಿರುವ ಪರಿಣಾಮದ ವಿರುದ್ದ ಉಗ್ರವಾಗ ಹೋರಾಟ ಮಾಡಬೇಕಾಗುತ್ತದೆ ಎಂದರು.

ರಾಜ್ಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಶಾರದಾ ನಾಯಕ ಮಾತನಾಡಿ:

ಸಮಾಜದ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡುವಲ್ಲಿ ಬಂಜಾರ ನಿಗಮ ಮುಂದೆ ಬರುತ್ತಿಲ್ಲ ಕೆಲವೊಂದು ಬಡ ಕುಟುಂಬದಲ್ಲಿ ಹುಟ್ಟಿದ ಸಮಾಜದವರು ಹೊಟ್ಟೆ ಪಾಡಿಗಾಗಿ ಗುಳೇ ಹೋಗುವುದು ಅತ್ಯಂತ ವಿಪರ್ಯಾಸ ಅಲ್ಲದೆ ಸಮಾಜದವರು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಗೊಳ್ಳುತ್ತಿದ್ದು ಅದನ್ನು ಸಮಾಜದ ಮುಖಂಡರು ನಾವು ನೀವೆಲ್ಲ ಕೂಡಿ ಬಂಜಾರ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡೋನ ಅಲ್ಲದೆ ಸರ್ಕಾರ ಸಮಾಜದ ಪರವಾಗಿ ಕೆಲಸ ಮಾಡದೇ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದರು.

ಬಂಜಾರ ಸಮಾಜದ ವಿಚಾರ ಸಂಕಿರಣ ಕುರಿತು ಪರಮಪೂಜ್ಯರಾದ ಸಿದ್ಧಲಿಂಗ ಸ್ವಾಮಿಗಳು ಲಿಂಗಸೂರ,ಬಳಿರಾಮ ಮಹಾರಾಜ ಗಬ್ಬೂರವಾಡ,ಕುಮಾರ ಮಹರಾಜ ಸೇರಿದಂತೆ ಹಲವು ಮುಖಂಡರು ಈ ಬಂಜಾರ ಸಮಾಜದ ವಿಚಾರ ಸಂಕಿರಣದಲ್ಲಿ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಂಡು ಮಾತನಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಪಿ.ಕೆ ಖಂಡೋಬಾ ವಿಶ್ರಾಂತ ಪ್ರಾಧ್ಯಾಪಕರು,ರಾಜಪಾಲ ಚವ್ಹಾನ ಮಾಜಿ ಜಿ.ಪ ಸದಸ್ಯ ವಿಜಯಪುರ, ಭಾರತೀಯ ಬಂಜಾರ ಸಂಘಟನಾ ಸಮಿತಿಯ ರಾಜ್ಯ ಅಧ್ಯಕ್ಷ ಪುಂಡಲೀಕ ಪವಾರ,ಮಹಿಳಾ ರಾಜ್ಯದ್ಯಕ್ಷೆ ಶ್ರೀಮತಿ ಶಾರದಾ ಕೆ ನಾಯಕ,ರಾಜ್ಯ ಉಪಾಧ್ಯಕ್ಷ ಶಿವರಾಜ ನಾಯಕ,ಮಹಿಳಾ ಉಪಾಧ್ಯಕ್ಷೆ ಲಲಿತಾ ಜಾಧವ,ಕೃಷ್ಣಾ ಜಾಧವ,ಮಹಾಂತೇಶ ಪವಾರ,ಶಾರದಾ ಚವ್ಹಾನ,ಸೇರಿದಂತೆ ಹಲವು ಜಿಲ್ಲೆಯ ಸಂಘಟನೆಯ ಪದಾಧಿಕಾರಿಗಳು ಸಮಾಜಬಾಂಧವರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started