ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಕೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ:

ಮುದ್ದೇಬಿಹಾಳ: ಉಡುಪಿಯಲ್ಲಿ ಭಾನುವಾರ ನಿಧನರಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಪಾದಂಗಳಿಗೆ ಪಟ್ಟಣದ ರಾಘವೇಂದ್ರ ದೇಗುಲದಲ್ಲಿ ಸೇರಿದ್ದ ವಿಪ್ರ ಸಮಾಜ ಬಾಂಧವರು ಶ್ರದ್ಧಾಂಜಲಿ ಸಲ್ಲಿಸಿದರು.

ಸಭೆಯಲ್ಲಿ ಮಾತನಾಡಿದ ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಸಂಗಣ್ಣ ಕುಲಕರ್ಣಿ, ಪೇಜಾವರ ಶ್ರೀಗಳು ಮುದ್ದೇಬಿಹಾಳ ಪಟ್ಟಣಕ್ಕೆ ಹಲವು ಸಾರಿ ಬಂದು ಹೋಗಿದ್ದರು. ಹಿಂದು ದೇಶದ ಅಖಂಡತೆ, ಹಿಂದು ಸಂಸ್ಕೃತಿ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಶ್ರೀಗಳು ವಿದೇಶಗಳಲ್ಲಿ ಭಾರತದ ಘನತೆ, ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದ್ದರು. ಅವರ ಸರಳತೆ, ಸರ್ವ ಜನರನ್ನೂ ಪ್ರೀತಿಸುವ ಅವರ ಮಾನವೀಯತೆ ಎಲ್ಲರಿಗೂ ಆದರ್ಶಪ್ರಾಯ ಎಂದರು. ಪೇಜಾವರ ಸ್ವಾಮೀಜಿಗಳನ್ನು ಕುರಿತು ಎಂ.ಸಿ.ಕುಲಕರ್ಣಿ, ಸುರೇಶ ಕುಲಕರ್ಣಿ ಮಾತನಾಡಿದರು. ಸಭೆಯಲ್ಲಿ ರಾಜು ಪದಕಿ, ರಾಘವೇಂದ್ರ ಕುಲಕರ್ಣಿ, ಆರ್.ಎಸ್.ದೇಶಪಾಂಡೆ, ಅಶೋಕ ಸರಾಫ, ಪ್ರಕಾಶ ಕುಲಕರ್ಣಿ, ರವಿ ಕುಲಕರ್ಣಿ, ಅರುಣಕುಮಾರ ಪದಕಿ, ಕೃಷ್ಣ ಬಳಬಟ್ಟಿ, ವಿ.ಎಸ್. ಕುಲಕರ್ಣಿ, ಸುಭಾಸ ಕುಲಕರ್ಣಿ, ಬಾಳು ಗಿಂಡಿ ಸೇರಿದಂತೆ ಸಮಾಜದ ಗಣ್ಯರು ಇದ್ದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started