
ಮುದ್ದೇಬಿಹಾಳ: ಪಟ್ಟಣದಲ್ಲಿ ಪೊಲೀಸ್ ಠಾಣೆಯ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಯಿತು.ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಸರ್ಕಲ್ ಇನ್ಸ್ಪೆಕ್ಟರ್ ಆನಂದ ವಾಗ್ಮೋಡೆ ರಸ್ತೆ ಸುರಕ್ಷತಾ ಕ್ರಮದ ಬಗ್ಗೆ ಮಾತನಾಡಿದರು:
ಸಾರ್ವಜನಿಕರಲ್ಲಿ ರಸ್ತೆಯಲ್ಲಿ ನಡೆದಂತ ಅಪಘಾತಗಳು ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಲ್ಲಿ ಹೇಳಿದರು, ಅಲ್ಲದೆ ತಾಲೂಕಿನ ಆದಂತ ನಡೆಯುವ ಅಪರಾಧಗಳ ಬಗ್ಗೆ ಕೂಲಂಕುಶವಾಗಿ ಪರೀಕ್ಷಿಸಿ ಅಪರಾಧ ನಡೆಯದ ರೀತಿಯಲ್ಲಿ ಸಂಚಾರ ಮಾಡುವಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಹೇಳಿದರು.
ಪಿಎಸ್ಐ ಮಲ್ಲಪ್ಪ ಮಡ್ಡಿ ಮಾತನಾಡಿ:
ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅಜಾಗರೂಕತೆಯಿಂದ ಇರುವುದರಿಂದ ಅಪಘಾತಗಳು ಸಂಭವಿಸುತ್ತಿರುತ್ತವೆ ಕಾರಣ ರಸ್ತೆಯ ಮೇಲೆ ಸಂಚರಿಸುವಾಗ ನಿಯಮಗಳನ್ನು ಪಾಲಿಸಿ ಸಾರ್ವಜನಿಕರು ಅಪಘಾತವಾಗದೆ ಸುರಕ್ಷಿತ ರೀತಿಯಲ್ಲಿ ಸಂಚಾರವನ್ನು ಮಾಡಬೇಕು. ಅಲ್ಲದೆ ಅಪರಾಧ ಆಗುವದರಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ಅಪರಾಧದ ಬಗ್ಗೆ ಇರುವುದಿಲ್ಲ ಅಪರಾಧಗಳು ನಡೆಯುವಂತ ಸಂದರ್ಭದಲ್ಲಿ ನಮಗೆ ಮಾಹಿತಿಯನ್ನು ನೀಡಿ ಆಗಬಹುದಾದ ಅಪರಾಧವನ್ನು ತಪ್ಪಿಸುವಲ್ಲಿ ನಮಗೆ ಮಾಹಿತಿ ನೀಡಿದರೆ ನಾವು ನೀವು ಸೇರಿಕೊಂಡು ಅಪರಾಧ ತಡೆಯಲು ಕ್ರಮ ಕೈಗೊಳ್ಳಬಹುದು. ಆದ್ದರಿಂದ ಸಾರ್ವಜನಿಕರು ರಸ್ತೆ ನಿಯಮದ ಬಗ್ಗೆ ತಿಳುವಳಿಕೆ ಪಡೆದುಕೊಂಡು ಅಲ್ಲದೆ ನಿಮ್ಮ ನಿಮ್ಮ ಲೈಸೆನ್ಸ್ ಅನ್ನು ವಾಹನದ ಪರವಾನಿಗೆಗಳನ್ನು ಕಾನೂನಿನ ನಿಯಮದಂತೆ ತೆಗೆದುಕೊಂಡು ವಾಹನ ಸಂಚಾರ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗಲಾರವು ಅಲ್ಲದೆ ರಸ್ತೆ ನಿಯಮಗಳನ್ನು ಮೀರಿ ಅಪರಾಧವನ್ನೂ ಸೃಷ್ಟಿಸುವ ಬದಲು ನೀವು ಕೂಡ ನಮ್ಮೊಂದಿಗೆ ಕೈಜೋಡಿಸುವ ಮುಖಾಂತರ ಅಪಘಾತ ರಹಿತ ಸುಗಮ ಸಂಚಾರಕ್ಕೆ ಅನುವು ಮಾಡೋನ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಡಿ ಗಾಂಜಿ ಮಾತನಾಡಿ:
ಅಪರಾಧಗಳು ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಆದರೆ ಮನುಷ್ಯನಿಗೆ ಎಲ್ಲದಕ್ಕಿಂತ ಪ್ರಾಣ ಮುಖ್ಯ ರಸ್ತೆ ಮೇಲೆ ಸಂಚರಿಸುವಾಗ ಎಚ್ಚರದಿಂದ ಸಂಚರಿಸಿದರೆ ವಾಹನ ಜೊತೆಗೆ ನಮ್ಮ ಜೀವ ಕೂಡ ರಕ್ಷಣೆಯಾಗುತ್ತದೆ ಮನೆಯಲ್ಲಿ ನಮ್ಮನ್ನು ನಂಬಿಕೊಂಡ ಕುಟುಂಬವೇ ಇರುತ್ತದೆ ಕಾರಣ ರಸ್ತೆ ನಿಯಮವನ್ನು ಪಾಲಿಸಿ ಅಪರಾಧವನ್ನು ತಡೆಗಟ್ಟಬೇಕು ಎಂದು ಹೇಳಿದರು.
ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಮಾತನಾಡಿ:
ಸಂಚಾರ ನಿಯಮವನ್ನು ಪಾಲಿಸದೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ ಕಾರಣ ಸಾರ್ವಜನಿಕರು ವಾಹನ ಸವಾರರು ತಮ್ಮ ಜವಾಬ್ದಾರಿಯುತವಾಗಿ ನಿಯಮವನ್ನು ಪಾಲಿಸಿ ಸಂಚಾರ ಮಾಡಬೇಕು ಮನುಷ್ಯನಿಗೆ ಪ್ರಾಣ ಎನ್ನುವುದು ಅಮೂಲ್ಯವಾದದ್ದು ಅದನ್ನು ಅರಿತು ವಾಹನ ಸಂಚಾರವನ್ನು ಮಾಡಬೇಕು ಅದರಿಂದ ಅಪರಾಧ ಮುಕ್ತ ಅಪಘಾತ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರು ವಾಹನ ಚಾಲಕರು ಹಾಗೂ ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ