
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಕಂಪ್ಯೂಟರ್ ಶಿಕ್ಷಣ ಸಂಸ್ಥೆ(KEONICS) ಯಲ್ಲಿ ಹಿರಿಯ ಸಾಹಿತಿ,ಲೇಖಕ,ಡಾ.ಎಂ ಚಿದಾನಂದಮೂರ್ತಿ ಯವರಿಗೆ ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಸಿದರು.
ಆರೋಗ್ಯ ಕವಚ ೧೦೮ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರು,ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಮಾತನಾಡಿ:
ಡಾ.ಚಿದಾನಂದಮೂರ್ತಿ ಯವರು,ಕನ್ನಡವನ್ನು ಬೆಳೆಸುವದಕ್ಕಾಗಿ ಬೆಂಗಳೂರು ದಿಂದ ಹಂಪಿಯವರೆಗೆ ಪಾದಯಾತ್ರೆ ಮಾಡಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ ಕಿರ್ತಿ ಅವರಿಗೆ ಸಲ್ಲುತ್ತದೆ,ಸರಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ,ಅವರ ಆತ್ಮಕ್ಕೆ ಶಾಂತಿ ಸಿಗಲಿ,ಕನ್ನಡ ನಾಡಿನ ಹಿರಿಯ ಚೇತನನ್ನು ಕಳೆದುಕೊಂಡ ಇಂದು ಕನ್ನಡ ತಾಯಿ ಬಡವಳಾಗಿದ್ದಾಳೆ,ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ತಪ್ಪಾಗಲಾರದು, ಮತ್ತೋಮ್ಮೆ ಕನ್ನಡನಾಡಿನಲ್ಲಿ ಹುಟ್ಟಿ ಬನ್ನಿ ಎಂದು ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಸಿದರು.
ಹಿರಿಯ ಸಾಹಿತಿಗಳು,ದಲಿತ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಶೀವಪುತ್ರ ಅಜಮನಿ ಮಾತನಾಡಿ:
ಡಾ.ಚಿಮು ಅವರು ಎಡಪಂಥೀಯ ಹೋರಾಟಗಾರರಾಗಿದ್ದರು,ಮುಡನಂಬಿಕೆಗಳನ್ನು,ದೇವರು,ದ್ಯೆವ ಇವಗಳನ್ನು ನಂಬುತ್ತಿರಲಿಲ್ಲಾ,ಗೋಕಾಕ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ ಅನ್ಯಾಯದ ವಿರುದ್ಧ ದ್ವನಿಯಾಗುತಿದ್ದರು,ಕನ್ನಡ ವನ್ನು ಉಳಿಸಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಹೇಳಿದರು.
ಕಂಪ್ಯೂಟರ್ ಕೇಂದ್ರದ ಮುಖ್ಯಸ್ಥ ನಾಗರಾಜ ಬಿರಾದಾರ,ಶ್ರೀಮತಿ ಶಿವನಿಲಾ ನಾಗರಾಜ ಬಿರಾದಾರ, ಗಾಯಕಿ ದೀಪಾರತ್ನಶ್ರೀ,ಗಾಯಕರಾದ ಚಂದ್ರಶೇಖರ ಪ್ಯಾಟೆಗೌಡರ್,ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ
Published by Royal TV
Royal tv Kannada news online website channel
View more posts