
ಬೆಂಗಳೂರಿನ ವೈದಿಕ ಚಾರಿಟಬಲ್ ಟ್ರಸ್ಟ್ ಮಹಾಲಕ್ಷ್ಮಿ ಗುರುಕುಲ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ತೃತೀಯ ರಾಷ್ಟ್ರಮಟ್ಟದ ಅರ್ಚಕರ ಮತ್ತು ಪುರೋಹಿತರ ಆಗಮಿಕರ ಗಿರಿಜಾ ಕಲ್ಯಾಣ ಪ್ರಯೋಗಿಕ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಪಟ್ಟಣದ ಗುರುಗಳಾದ “ಲಾಲಪ್ಪ ಗದ್ದೆಪ್ಪ ಹವಾಲ್ದಾರ” ಅವರನ್ನು ಗುರುತಿಸಿ ಜ್ಯೋತಿಷ್ಯ ಮತ್ತು ವೈದ್ಯ ಪಂಡಿತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ “ಜಗದ್ಗುರು ಶ್ರೀ 1008 ಡಾ ” ವೀರಸೋಮೇಶ್ವರ ಶಿವಾಚಾರ್ಯ ಭಗವತ ಪಾದರು ರಂಭಾಪುರಿ ಪೀಠ ಅವರು ಆಯುರ್ವೇದಿಕ್ ಪಂಡಿತರು “ವೈದಿಕ ಸಂಪನ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ವರದಿ:ಸಾಗರ ಉಕ್ಕಲಿ
Published by Royal TV
Royal tv Kannada news online website channel
View more posts