
ಗದಗ/ಉಡುಪಿ :
ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿ ಮನೆಯ ಶ್ರೀಯುತ ಜಗನ್ನಾಥ್ ಶೆಟ್ಟಿ ಮತ್ತು ವಸಂತಿ ಶೆಟ್ಟಿ ಅವರ ಪುತ್ರನಾದ
ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರು ಈ ಬಾರಿಯ “ರಾಷ್ಟ್ರೀಯ ಮಾಧ್ಯಮ ಭೂಷಣ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಕಟಣೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಂಸ್ಥೆಯ ಆಡಳಿತ ವರ್ಗ ಪ್ರಕಟಣೆ ಹೊರಡಿಸಿದೆ.ಇವರು ಹಲವಾರು ವರ್ಷಗಳಿಂದ ವಿವಿಧ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ಪತ್ರಿಕೆಗಳಿಗೆ ಅಂಕಣಗಳು ಹಾಗೂ ಬರಹಗಳನ್ನು ವಿಶೇಷವಾಗಿ ನೀಡುತ್ತಿದ್ದು ಇವರನ್ನು ಈ ಬಾರಿ ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕರ್ನಾಟಕ ರಾಜ್ಯದ ಹುಬ್ಬಳ್ಳಿಯ ಕರ್ನಾಟಕ ದರ್ಶನ ಮಾಧ್ಯಮ ಸಂಸ್ಥೆ ನೀಡುತ್ತಿರುವ ರಾಜ್ಯದ ಮೂವತ್ತ ಮೂರು ಕ್ಷೇತ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ಪ್ರಾರಂಭಿಪ್ರಾರಂಭಿಸಿದ್ದು ,ಅದರಲ್ಲಿ ಸಾಮಾಜಿಕ ಚಿಂತನೆ, ಉತ್ತಮ ವರದಿಗಳ ಪ್ರಸಾರ, ಸಂಗ್ರಹ ಯೋಗ್ಯ ಅಂಕಣಗಳ ಬರಹ ಹಾಗೂ ಸಮಾಜ ಕಟ್ಟುವಲ್ಲಿ , ಧಾರ್ಮಿಕ ದರ್ಶನ ಹಾಗೆಯೇ, ಸಮಾಜಕ್ಕೆ ಅತಿ ಮುಖ್ಯವಾಗಿರುವ ವಿಷಯಗಳನ್ನು ಪತ್ರಿಕೋದ್ಯಮದ ಮೂಲಕ ನಾಡಿನ ಸಮಸ್ತ ಓದುಗರಿಗೆ ತಿಳಿಸಿದ ಅರ್ಹ
-
ದೃಶ್ಯ ಮಾಧ್ಯಮ
-
ಪತ್ರಿಕೋದ್ಯಮ,
-
ಕಿರುತೆರೆ,
-
ಬಯಲಾಟ ,
-
ಚಿತ್ರಕಲೆ ,
-
ಯಕ್ಷಗಾನ ,
-
ಕ್ರೀಡೆ,
-
ಸಮಾಜ ಸೇವೆ,
-
ಸಾಹಿತ್ಯ ,
-
ಶಿಕ್ಷಣ ,
-
ಕಾನೂನು ,
-
ರಾಜಕೀಯ,
-
ಸರಕಾರಿ ಸೇವೆ ,
-
ಜ್ಯೋತಿಷ್ಯ ,
-
ಸಂಘ ಸಂಸ್ಥೆ ,
-
ಯುವ ಪ್ರತಿಭೆ,
ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ .ಅದೇ ರೀತಿ ಕಾರ್ಯನಿರತ ಪತ್ರಕರ್ತರಿಗೆ ರಾಜ್ಯದ ಮೂವತ್ತ ಮೂರು ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .ಅದೇ ರೀತಿ ಕರಾವಳಿಯ ಇಬ್ಬರೂ ಕಣ್ಮಣಿಗಳಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ .ಯಕ್ಷಗಾನ ವಿಭಾಗದಲ್ಲಿ “ಮಂಕಿ ಈಶ್ವರ ನಾಯಕ್” ಹೊನ್ನಾವರ ಹಾಗೂ ಕರಾವಳಿಯ ಇನ್ನೋರ್ವ ನಿರೂಪಕ ,ಅಂಕಣಕಾರ, ಬರಹಗಾರ ,ಪತ್ರಕರ್ತರಾದ ಉಡುಪಿ ಜಿಲ್ಲೆಯ
ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ಕಳೆದ ಬಾರಿ 2013ರಲ್ಲಿ ಕರ್ನಾಟಕ ರಾಜ್ಯದ “ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕ (ರಿ.)” ಕೊಡಮಾಡಿದ ಮಾಧ್ಯಮ ಪ್ರಶಸ್ತಿ , 2015 ರಲ್ಲಿ ದೆಹಲಿಯ ಕಾರ್ಯನಿರತ ಪತ್ರಕರ್ತರ ಸಂಘದಿಂದ “ಬೆಸ್ಟ್ ರಿಪೋರ್ಟರ್ ಅವಾರ್ಡ್” ಹಾಗೂ
2019 ರಲ್ಲಿ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ದರ್ಶನ ಮಾಧ್ಯಮ ಸಂಸ್ಥೆ ಘೋಷಿಸಿದ “ರಾಷ್ಟ್ರೀಯ ಮಾಧ್ಯಮ ಲೋಕ ಪ್ರಶಸ್ತಿ “ಲಭಿಸಿದೆ. ಆಯ್ಕೆಯಾದ ಕಾರ್ಯನಿರತ ಪತ್ರಕರ್ತರಿಗೆ ಈ ಬಾರಿ ಗದಗ ಜಿಲ್ಲೆಯಲ್ಲಿ ನಡೆಯುವ ಬೃಹತ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗದಗದ ಕೆ. ಎಚ್ . ಸಭಾಭವನದಲ್ಲಿ (ಎಪಿಎಂಸಿ ಯಾರ್ಡ್ ಸಂಕಿರಣ ) ದಿನಾಂಕ 02-02 -2020 ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ತನಕ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ್ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯಕಾರಿಣಿ ಯುವ ಮೋರ್ಚಾ ಬಿ.ವೈ ವಿಜಯೇಂದ್ರ ,ಉಚ್ಚ ನ್ಯಾಯಾಧೀಶರಾದ ಅರಳಿ ನಾಗರಾಜ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.,ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀನಾಥ್ ಜೋಶಿ ಪೊಲೀಸ್ ವರಿಷ್ಠಾಧಿಕಾರಿಗಳು ಗದಗ ಜಿಲ್ಲೆ ,ಕರ್ನಾಟಕ ಸರ್ಕಾರದ ಅಧಿಕಾರಿಗಳು ಹಾಗೂ ಪತ್ರಿಕೋದ್ಯಮಿಗಳು, ವಿವಿಧ ಮಠದ ಮಠಾಧೀಶರು ,ಚಿಂತಕರು, ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವರದಿ:ಸಾಗರ ಉಕ್ಕಲಿ