ಪ್ರೌಢಶಾಲಾ ಹಳೇ ವಿಧ್ಯಾರ್ಥಿಗಳಿಂದ ಗುರುವಂದನ ನಡೆಸುವ ಕುರಿತು ಸಮಾಲೋಚನೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದಡಿ ನಡೆಯುತ್ತಿರುವ ವೀಬಿಸಿ ಪ್ರೌಢಶಾಲೆಯಲ್ಲಿ 1994-95ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪೂರೈಸಿದ ವಿದ್ಯಾರ್ಥಿಗಳೆಲ್ಲ ಸೇರಿ ಏಪ್ರೀಲ್, ಮೇ ತಿಂಗಳಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದಾರೆ.

ರವಿವಾರ ಶಾಲೆಯ ಆವರಣದಲ್ಲಿ ಸಭೆ ಸೇರಿ ಚರ್ಚಿಸಿದ ಹಳೇಯ ವಿದ್ಯಾರ್ಥಿಗಳು, ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರೌಢಶಾಲೆ ವಿದ್ಯಾಭ್ಯಾಸ ಭವಿಷ್ಯ ರೂಪಿಸುವಂಥದ್ದು. ಇಂಥ ಪ್ರೌಢಶಾಲೆ ಹಂತದಲ್ಲಿ ವಿದ್ಯೆ ಕಲಿಸಿ ಬದುಕಿಗೆ ದಾರಿ ತೋರಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಅಭಿಲಾಷೆ ಆಗಿರುತ್ತದೆ. ಮಾತ್ರವಲ್ಲದೆ ವಿದ್ಯೆ ಕೊಟ್ಟ ಗುರುವಿಗೆ ಸತ್ಕರಿಸುವುದು ಗುರುವಿನ ಋಣ ತೀರಿಸುವ ಒಂದು ಸಣ್ಣ ಪ್ರಯತ್ನವೂ ಆಗಿರುತ್ತದೆ. ಹೀಗಾಗಿ ಆ ಸಾಲಿನ ಎಸ್‍ಎಸ್‍ಎಲ್‍ಸಿ ಬ್ಯಾಚ್‍ನ ಎಲ್ಲ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಉದ್ಯೋಗ, ನೌಕರಿ, ವ್ಯಾಪಾರ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರೆಲ್ಲ ಒಂದೆಡೆ ಸೇರಿ ತಮ್ಮ ಕಲಿಕೆಯ ದಿನಗಳನ್ನು ನೆನಪಿಸಿಕೊಳ್ಳುವುದಕ್ಕೂ ಇದು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಲಾಯಿತು.

ಮುಂಬರುವ ಫೆಬ್ರವರಿ ತಿಂಗಳಲ್ಲಿ ಇನ್ನೊಮ್ಮೆ ಹಳೇಯ ವಿದ್ಯಾರ್ಥಿಗಳೆಲ್ಲ ಸೇರಿ ಸಭೆ ನಡೆಸಬೇಕು. ಪ್ರತಿ 3 ವರ್ಷಕ್ಕೊಮ್ಮೆ ಪಟ್ಟಣದಲ್ಲಿ ನಡೆಯುವ ದ್ಯಾಮವ್ವದೇವಿ ಜಾತ್ರೆ ಈ ವರ್ಷ ಏಪ್ರೀಲ್ ಇಲ್ಲವೇ ಮೇ ತಿಂಗಳಲ್ಲಿ ನಡೆಯಲಿದೆ. ಆ ಜಾತ್ರೆಗೆ ಬೇರೆ ಕಡೆ ನೆಲೆಸಿರುವ ಹಳೇಯ ವಿದ್ಯಾರ್ಥಿಗಳೆಲ್ಲ ಆಗಮಿಸುತ್ತಾರೆ. ಆಗ ಗುರುವಂದನೆ ಕಾರ್ಯಕ್ರಮ ನಡೆಸಿದಲ್ಲಿ ಅದು ಹೆಚ್ಚು ಜನರನ್ನು ತಲುಪಿ ಸಾರ್ಥಕ ಕಾರ್ಯ ಮಾಡಿದಂತಾಗುತ್ತದೆ ಎಂದು ತೀರ್ಮಾನಿಸಲಾಯಿತು.

ವೀವಿವ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ, ಶಾಲೆಯ ಹಿರಿಯ ಶಿಕ್ಷಕರೂ ಆಗಿರುವ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಹೊಕ್ರಾಣಿ, 1992-95ನೇ ಸಾಲಿನಲ್ಲಿ 8 ರಿಂದ 10ನೇ ತರಗತಿವರೆಗೆ ಕಲಿತ ಶಾಲೆಯ ಹಳೇಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ:ಸಾಗರ ಎಂ ಉಕ್ಕಲಿ

Published by Royal TV

Royal tv Kannada news online website channel

One thought on “ಪ್ರೌಢಶಾಲಾ ಹಳೇ ವಿಧ್ಯಾರ್ಥಿಗಳಿಂದ ಗುರುವಂದನ ನಡೆಸುವ ಕುರಿತು ಸಮಾಲೋಚನೆ

Leave a comment

Design a site like this with WordPress.com
Get started