
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎ.ಎಸ ಐ.ಆಗಿ ಸೇವೆಸಲ್ಲಿಸಿ 2017ರ ಜನವರಿಯಲ್ಲಿ ನಿವೃತ್ತಿಹೊಂದಿದ್ದ.ಶಿರಾ ತಾಲ್ಲೂಕಿನ ಜುಂಜರಾಮನಹಳ್ಳಿ ಗ್ರಾಮದವರಾದ ಜೆ.ಹೆಚ್.ರಾಮಚಂದ್ರಪ್ಪ(62)ಜ15ರಂದು ಬುಧವಾರ ಬೆಳಗಿನ ಜಾವ ಸ್ವಗ್ರಾಮದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಅವರು ಸುಮಾರು 3 ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರು. ಸಾರ್ವಜನಿಕ ವಲದಲ್ಲಿ ಉತ್ತಮ ಭಾಂದವ್ಯ ಹೊಂದಿ ಜನಸ್ನೇಹಿ ಪೊಲೀಸ್ ಎಂದು ಗುರುತಿಸಿಕೊಂಡವರಾಗಿದ್ದರು.
ಪೊಲೀಸ್ ಪೇದೆಯಾಗಿ ಬಳ್ಳಾರಿ ಠಾಣೆ.ತೆಕ್ಕಲಕೋಟೆ.ಹೊಸಪೇಟೆ.ತೋರಣಗಲ್ಲು.ಮುಖ್ಯಪೇದೆಯಾಗಿ ಕುರುಗೋಡು.ಇಟಗಿ
ಗುಡೇಕೋಟೆ.ಖಾನಾಹೊಸಹಳ್ಳಿಠಾಣೆಗಳಲ್ಲಿ ಮುಖ್ಯಪೇದೆಯಾಗಿ ಸೇವೆ.ಕೂಡ್ಲಿಗಿಯಲ್ಲಿ ಎ ಎಸ ಐ ಆಗಿ ಮುಂಬಡ್ತಿಹೊಂದಿ ವರ್ಷ ಕಾಲ ಸೇವೆಸಲ್ಲಿಸಿದ್ದರು.2017ರ ಜನವರಿಯಲ್ಲಿ ವಯೋನಿವೃತ್ತಿಹೊಂದಿದ್ದರು.ನಂತರ ಅವರ ಸ್ವಗ್ರಾಮದಲ್ಲಿ ನೆಲಸಿದ್ದರು.ಅವರು ತಾಯಿ.ಮಡದಿ ಮಕ್ಕಳು.ಮೂವರು ಸಹೋದರರು.ಇಬ್ಬರು ಸಹೋದರಿಯರು.ಅಪಾರ ಬಂದು ಬಳಗವನ್ನು ಹೊಂದಿದ್ದರು.ಮೃತರ ಅಂತ್ಯಕ್ರಿಯೆಯನ್ನು ಅವರ ಜಮೀನಿನಲ್ಲಿಯೇ ಬುಧವಾರದಂದು ಸಾಯಂಕಾಲ ಜರುಗಿಸಲಾಗಿದೆ.
ಸಂತಾಪ:ನಿವೃತ್ತ ಎ ಎಸ್ ಐ ರಾಮಚಂದ್ರಪ್ಪರವರ ನಿಧನಕ್ಕೆ ಬಳ್ಳಾರಿ ಜಿಲ್ಲೆಯ ಪೊಲೀಸ್ ಇಲಾಖೆಯ ಜಿಲ್ಲಾವರಿಷ್ಠಾಧಿಕಾರಿಗಳು.ಜಿಲ್ಲೆಯ ವಿವಿದ ಪೊಲೀಸ್ ಠಾಣೆಗಳ ಅಧಿಕಾರಿಗಳು. ಸಿಬ್ಬಂದಿ.ಕೂಡ್ಲಿಗಿ ಡಿವೈಎಸ್ಪಿ. ಸಿಪಿಐ.ಪಿಎಸ್ಐ.ಕೂಡ್ಲಿಗಿ ಠಾಣೆ ಸಿಬ್ಬಂದಿಗಳು ಹಾಗೂ ಹಿರಿಯನಾಗರೀಕರು.ಜನಪ್ರತಿನಿಧಿಗಳು.ವಿವಿದ ಸಂಘಟನೆಗಳ ಪದಾಧಿಕಾರಿಗಳು.ಸಂತಾಪ ವ್ಯಕ್ತಪಡಿಸಿದ್ದಾರೆ.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Published by Royal TV
Royal tv Kannada news online website channel
View more posts