ಸಿದ್ದೇಶ್ವರ ಜಾತ್ರಾ ನಿಮಿತ್ತ ಆಕರ್ಷಕ ಜಾನುವಾರುಗಳಿಗೆ ಬಹುಮಾನ ವಿತರಣೆ

ಸುಪ್ರಸಿದ್ಧ ವಿಜಯಪುರ ದ ಸಿದ್ದೇಶ್ವರ ಜಾತ್ರಾ ನಿಮಿತ್ತ ಜಾತ್ರಾ ಕಮಿಟಿ ಸಹಯೋಗ ಹಾಗೂ ಎ ಪಿ ಎಮ್ ಸಿ ವಿಜಯಪುರ ಇವರ ಸಹಯೋಗ ದೊಂದಿಗೆ ವಿವಿಧ ತಳಿಯ ಜಾನುವಾರುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ.

ವಿಜಯಪುರದ ಮಹಿಳಾ ಯೂನಿವರ್ಸಿಟಿ ಹತ್ತಿರ ಇರುವ ಎ ಪಿ ಎಮ ಸಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಕಳು ಮತ್ತು ನಾನಾ ತಳಿಯ ಹೋರಿಗಳು ಆಗಮಿಸಿದ್ದವು. ಅದರಲ್ಲಿ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ವಿಜಯಪುರ ಎ ಪಿ ಎಮ್ ಸಿ ಅಧ್ಯಕ್ಷ ಸುರೇಶ್ ಗೌಡ ಪಾಟೀಲ, ಉಪಾಧ್ಯಕ್ಷ ಸುರೇಶ ತಳವಾರ, ಕೃಷಿ ಮಾರಾಟ ಮಂಡಳಿ ಬೆಂಗಳೂರದ ಸದಸ್ಯರಾದ ಗುರು ತಾರನಾಳ, ಸಾಹೇಬಗೌಡ ಪಾಟೀಲ, ಸಿ ಪಿ ಪಾಟೀಲ, ಕಾರ್ಯದರ್ಶಿ ಕುಮಾರಸ್ವಾಮಿ,ಸೇರಿದಂತೆ ಬಹುಮಾನ ವಿತರಣೆ ಮಾಡಿದರು

ಬಹುಮಾನವನ್ನು ಎ ಪಿ ಎಮ ಸಿ ಬೋರ್ಡನಿಂದ 10 ಸಾವಿರ ,7,500,5500 ನೀಡಿದರು.

ಸಿದ್ದೇಶ್ವರ ಸಂಸ್ಥೆಯಿಂದ ಒಂದು ತೊಲೆ ಬಂಗಾರ, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಅವರಿಂದ ಒಂದು ತೊಲೆ ಬಂಗಾರ ಹೀಗೆ ಹಲವರಿಂದ ಬಹುಮಾನ ವಿತರಣೆ ಮಾಡಿದರು.ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ರೈತರು ಸಾರ್ವಜನಿಕರು ಅಪಾರ ಪ್ರಮಾಣದಲ್ಲಿ ಆಗಮಿಸಿದ್ದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started