3rd ಕ್ಲಾಸ್ ಚಿತ್ರ ತಂಡದಿಂದ ಗ್ರಾಮ ದತ್ತು ಪಡೆದು ಗ್ರಾಮ ವಾಸ್ತವ್ಯ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲನೆಯ ಬಾರಿಗೆ 3rd ಕ್ಲಾಸ್ ಚಿತ್ರ ತಂಡದಿಂದ ಗ್ರಾಮವನ್ನು ದತ್ತು ಪಡೆದು ಗ್ರಾಮ ವಾಸ್ತವ್ಯ.

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಳುಕೊಪ್ಪ ಗ್ರಾಮವನ್ನು ದತ್ತು ಪಡೆದ 3rd ಕ್ಲಾಸ್ ಚಿತ್ರದ ನಾಯಕ ನಟ- ಜಗದೀಶ್ ನಾಯಕ ನಟಿ- ರೂಪಿಕಾ,ನಂದನಕುಮಾರ ಒಳಗೊಂಡ ಚಿತ್ರದ ತಂಡ.

ಅದೆ ಗ್ರಾಮದ ಶಿಥಿಲಾವಸ್ಥೆಗೊಂಡ ಸರ್ಕಾರಿ ಶಾಲೆಯ ಪುನರ್ ಕಟ್ಟಡ ನಿರ್ಮಾಣಕ್ಕೆ ಈ ಚಿತ್ರ ತಂಡ ಮುಂದಾಗಿದ್ದು ಅದಕ್ಕಾಗಿ ಶ್ರೀಗಳು, ಬಾಗಲಕೋಟ ಜಿಲ್ಲಾ ವರಿಷ್ಠಾಧಿಕಾರಿಗಳು , ಬಾಗಲಕೋಟ ಎಸಿ, ತಾಲ್ಲೂಕು ದಂಡಾದಿಕಾರಿಗಳು, ಹಿರಿಯರು ಗ್ರಾಮದ ಗಣ್ಯರ ಸಮ್ಮುಖದಲ್ಲಿ ದಿನಾಂಕ 20-1-2020 ರಂದು ಸರ್ಕಾರಿ ಶಾಲೆಯ ಭೋಮಿ ಪೂಜೆ ಹಾಗೂ ಕಟ್ಟದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಚಿತ್ರ ತಂಡದಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started