
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನಾಭಿವೃದ್ದಿ ಬಿಸಿ ಟ್ರಸ್ಟ್ ನಾಗಮಂಗಲ ವತಿಯಿಂದ
ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ರವರ ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆ ರವರ ಮಾರ್ಗದರ್ಶನಲ್ಲಿ ತಾಜ್ಯ ವಿಲೇವಾರಿ ಬುಟ್ಟಿ ವಿತರಣೆ ಹಾಗೂ ಸೃಜನಶೀಲತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಈ ಕಾರ್ಯಕ್ರಮವನ್ನು ನಾಗಮಂಗಲ ಪಟ್ಟಣದ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವೈ.ಕೆ. ರಾಮು ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಯೋಜನಾಧಿಕಾರಿ ಹೇಮಲತಾ ಹೆಗ್ಗಡೆ ಅವರು ಪ್ರಾಸ್ತಾವಿಕ ನುಡಿಯನ್ನು ನುಡಿದರು.
ತಾಲ್ಲೂಕಿನ ವಿವಿಧ ದೇವಾಲಯ,ಮಸೀದಿ,ಚರ್ಚ್ ಗಳಿಗೆ ತಾಜ್ಯ ವಿಲೇವಾರಿ ಬುಟ್ಟಿಯನ್ನು ವಿತರಣೆ ಮಾಡಿದರು.
ಇದೆ ಸಂದರ್ಭದಲ್ಲಿ ಖ್ಯಾತ ಯೋಗ ಶಿಕ್ಷಕ ಬದ್ರಿಕೊಪ್ಪಲು ನಾರಾಯಣ್. ASI ವೈ. ಕೆ ರಾಮುರವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿಯ ಯೋಜನಾಧಿಕಾರಿ ಹೇಮಲತಾ ಹೆಗ್ಗಡೆರವರು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಸಾಕ್ಷರತಾ ಶ್ರೀನಿವಾಸ, ಚನ್ನಯ್ಯ ಭಾಸ್ಕರ್ ಭಟ್, ಕಲೀಮ್ ಉಲ್ಲಾ, ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳ ಅರ್ಚಕರು ಮಸೀದಿಯ ಮುಖ್ಯಸ್ಥರು ಭಾಗವಹಿಸಿದ್ದರು.
ವರದಿ:ಜಗದೀಶ ನಾಗಮಂಗಲ
Published by Royal TV
Royal tv Kannada news online website channel
View more posts