
ವಿಜಯಪುರ:ನೋವೆಲ್ ಕೊರೋನಾ ವೈರಸ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಆರೋಗ್ಯ ಇಲಾಖೆಯ ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರನ್ನು ಮುದ್ದೇಬಿಹಾಳ ನಗರದ ಎಸ್ ವ್ಹಿ ಎಮ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಹರೀಶ ಹವಲ್ದಾರಮಠ ಅವರು ಉಚಿತವಾಗಿ ವಿತರಣೆ ಮಾಡಿದರು. ನಂತರ ಮಾತನಾಡಿದರು. ಕೋವಿಡ್ 19 ನಿಯಂತ್ರಣದಲ್ಲಿ ವಿಜಯಪುರ ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಶ್ಲ್ಯಾಘನೀಯ ಮುಖ್ಯವಾಗಿ ಕ್ಷೇತ್ರ ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡಿ ಹೋಂ ಕ್ವಾರೆಂಟೇನ್ ಶಂಕಿತ ರೋಗಿಗಳ ಆರೋಗ್ಯ ತಪಾಸಣೆ ಮತ್ತು ಕೋವಿಡ್ ನಿಯಂತ್ರಣ ಕುರಿತು ಮಾಹಿತಿಯನ್ನು ನೀಡುತ್ತಿದ್ದು ಈ ಸಿಬ್ಬಂದಿಗಳಿಗೆ ಸ್ವಯಂ ರಕ್ಷಣೆ ಬಹಳ ಅವಶ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಎಮ್ ಎಸ್ ಗೌಡರ ತಾಲೂಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕರು ತಾಲೂಕಿನ ಎಲ್ಲಾ ಆರೋಗ್ಯ ಇಲಾಖೆಯ ನೌಕರರ ಪರವಾಗಿ ಎಸ್ ವ್ಹಿ ಎಮ್ ಕಾಲೇಜಿನ ಪ್ರಾಂಶುಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ತಾಲೂಕಾ ಆರೋಗ್ಯ ಸಹಾಯಕರ ಹಾಗೂ ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ಯಲ್ಲಪ್ಪ ಚಲವಾದಿ ಹಾಗೂ ಅನುಸೂಯ ತೇರದಾಳ ಟಿಎಚ್ಈಓ ಈರಣ್ಣ ಚಿನಿವಾರ ಸೀನಿಯರ್ ಲ್ಯಾಬ್ ಟೆಕ್ನಾಲಾಜಿಸ್ಟ್ ಎಸ್ ಸಿ ರುದ್ರವಾಡಿ ಎಮ್ ಟಿ ಎಸ್ ಬಸವರಾಜ್ ಬಿಪಿಎಮ್ ಎಸ್ ಐ ಕಮಲಪ್ಪನವರ ಪ್ರವೀಣ್ ಬಿದರಿ ಚೇತನ್ ಕಲ್ಲುಂಡಿ ವೀರೇಶ್ ಭಜಂತ್ರಿ ಶ್ರೀಕಾಂತ್ ಸಜ್ಜನ ರಫೀಕ್ ರಂಜಣಗಿ ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನಮಗೆ ನೀಡಿ-8792900064
Published by Royal TV
Royal tv Kannada news online website channel
View more posts