ಬಡಜನರಿಗಾಗಿ ದಾಸೋಹಕ್ಕೆ ಚಾಲನೆ ನೀಡಿದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಕುಟುಂಬ

ವಿಜಯಪುರ:ಕೊರೋನ ಸೋಂಕು ತಗುಲಿ ಲಾಕ್ ಡೌನ್ ನಿಂದಾಗಿ ರಾಜ್ಯದ ಜನತೆ ಹಸಿವಿನಿಂದ ಅನೇಕರು ಚಟಪಡಿಸುತ್ತಿದ್ದಾರೆ,ಇನ್ನೂ ಎಷ್ಟೋ ಜನರು ಅನೇಕ ಬಡ ಜನರಿಗೆ ಆಹಾರ ಧಾನ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ.ಹೀಗಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ1 ಕೋಟಿ ವೆಚ್ಚದಷ್ಟು ಆಹಾರ ದಾನ್ಯ,ಸೇರಿದಂತೆ ಊಟಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಂದು ಸ್ವತಃ ಮುಂದೆ ನಿಂತು ತಾವು ಅದರಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕಿಟ್ ತಯಾರಿಸಿ ಮುದ್ದೇಬಿಹಾಳದ ಸ್ಲಂ

ನಿವಾಸಿಗಳಿಗೆ ಕುಟುಂಬ ಸಮೇತವಾಗಿ ನಿಜವಾದ ಬಡವರಿಗೆ ತಲುಪಿಸುವಲ್ಲಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ, ಧರ್ಮಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ ದಾಸೋಹದಲ್ಲಿ ಪಾಲ್ಗೊಳ್ಳುವ ಮೂಲಕ ಬಡವರ ಪಾಲಿಗೆ ಆಶಾ ಕಿರಣ ವಾದರು,

ಇನ್ನೂ ಈ ಕಾರ್ಯವನ್ನು ಇಡಿ ಮುದ್ದೇಬಿಹಾಳ ವಿಧಾನ ಸಭಾ ವ್ಯಾಪ್ತಿಯಲ್ಲಿನ ಬಡ ಜನರಿಗೆ ಹಂಚಲು ಕಾರ್ಯಾರಂಭ ಸುರುವಾಗಿದೆ.

ಇದೆ ಸಂದರ್ಭದಲ್ಲಿ ಮುದ್ದೇಬಿಹಾಳ ಪೋಲಿಸ್ ಠಾಣೆಯ ಸಿಪಿಐ ಆನಂದ ವಾಗ್ಮೋಡೆ ಹಾಗೂ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರ ಕೈಗಳಿಂದಲು ಕಿಟ್ ವಿತರಿಸಲು ಮಾನ್ಯ ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತರವಲಯವು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಾಗಿ ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started