ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ
ಸರ್ಕಾರದ ಸಹಯೋಗದಲ್ಲಿ ಉಪ ನಿರ್ದೇಶಕರು (ಖಾಗ್ರಾ) ಜಿ.ಪಂ ಕೈಗಾರಿಕಾ ವಿಭಾಗ ಇಲಾಖೆಯಲ್ಲಿ ಸನ್ 2018-19 ನೇ ಸಾಲಿನ ಉಚಿತ_ಉಪಕರಣಗಳ ಸರಬರಾಜು ಯೋಜನೆಯ ಅಡಿಯಲ್ಲಿ ಬಸರಕೋಡ ಜಿ.ಪಂ ವ್ಯಾಪ್ತಿಯಲ್ಲಿ ವಿವಿಧ ವೃತ್ತಿಯ ಕುಶಲ ಕರ್ಮಿಗಳಿಗೆ ಉಚಿತ ಉಪಕರಣಗಳನ್ನು ನೀಡಿದರು.
ವಿಜಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಪ್ರಭುಗೌಡ ಚ ದೇಸಾಯಿ ಅವರು ಇಂದು ಮುದ್ದೇಬಿಹಾಳದ ತಾಲ್ಲೂಕು ಪಂಚಾಯತ ನಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಶಿಕಾಂತ ಶಿವಪೂರೆ, ತಾಲೂಕಾ ಕೈಗಾರಿಕಾ ಅಧಿಕಾರಿಗಳಾದ ಎಸ್ ಎಸ್ ಸಜ್ಜನ, ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಎಮ್ ಡಿ ಕುಂಬಾರ, ಢವಳಗಿ ಗ್ರಾ.ಪಂ ಸದಸ್ಯರಾದ ಸುರೇಶ ಪಾಟೀಲ, ಪ್ರಕಾಶ ಹೂಗಾರ, ಆದೇಶ ಕೊಳೂರ ಬಿದರಕುಂದಿ ಉಪಸ್ಥಿತರಿದ್ದರು.


