ಅನುದಾನಿತ ಶಾಲಾ ಕಾಲೇಜು ನೌಕರರಿಂದ ರಾಜ್ಯಮಟ್ಟದ ಹೋರಾಟ ಕುರಿತು ಪತ್ರಿಕಾಗೋಷ್ಠಿ

ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಜನವರಿ 10ರಿಂದ ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಮಾಡಲು ಕರೆ ನೀಡಿದ್ದಾರೆ.

ಜನವರಿ 10ರಿಂದ ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದಿಂದ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದು.

ಜನವರಿ 10ರಿಂದ ಅನುದಾನಿತ ಸಂಸ್ಥೆಗಳ ನೌಕರರಿಂದ ಅಹೋರಾತ್ರಿ ಪ್ರಾಣ ಬಿಟ್ಟೆವು ಪಿಂಚಣಿ ಬಿಡೆವು ಹೋರಾಟ.

2006 ಇಸ್ವಿಯ ನಂತರ ನೇಮಕವಾದ ಅನುದಾನಿತ ಶಾಲೆಯ ಶಿಕ್ಷಕರು ಈ ಪ್ರತಿಭಟನೆ ಧರಣಿಯಲ್ಲಿ ಪಾಲ್ಗೊಳ್ಳಲು ಹೇಳಿದ್ದಾರೆ.

ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರ ನಿವೃತ್ತಿ ಜೀವನದ ಆಸರೆಯಾದ ಪಿಂಚಣಿ ಸೌಲಭ್ಯದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಜನವರಿ ಹತ್ತರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಅಂತಿಮವಾಗಿ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಕಾರಣ ವಿಜಯಪುರ ಜಿಲ್ಲೆಯ ಎಲ್ಲ ನೌಕರರು ಭಾಗಿಯಾಗಲು ಅನುದಾನಿತ ಶಾಲಾ ಕಾಲೇಜು ಪಿಂಚಣಿ ವಂಚಿತ ನೌಕರರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಬಸಯ್ಯ ಹಿರೇಮಠ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಶೋಕ ಕಟ್ಟಿ ಮಹಾಂತೇಶ ಮೆರೆಖೋರ, ನಾಗಯ್ಯ ಸ್ಥಾವರಮಠ ಪ್ರಭುಗೌಡ ಕುಂಟರೆಡ್ಡಿ ಉಪಸ್ಥಿತರಿದ್ದರು

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started