ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್ಸಿ, ಎಸ್ಟಿ ಮುಖಂಡರ ಸಭೆ

ವಿಜಯಪುರ ಜಿಲ್ಲೆಯಲ್ಲಿ ಮುದ್ದೇಬಿಹಾಳ ಸುದ್ದಿ

ಮುದ್ದೇಬಿಹಾಳ:ಮೀಸಲಾತಿಯಲ್ಲಿ ಹೊಸದಾಗಿ ಸೇರ್ಪಡೆ ಆಗಿರುವ ಜಾತಿಗಳು ಮುಂದುವರೆಯಬೇಕೆ, ಬೇಡವೇ ಎನ್ನುವುದೇ ಒಂದು ದೊಡ್ಡ ಸಮಸ್ಯೆ ಆಗಿದೆ ಎಂದು ಎಪಿಎಂಸಿ ನಿರ್ದೇಶಕ ವೈ.ಎಚ್.ವಿಜಯಕರ್ ಹೇಳಿದ್ದಾರೆ.

ಇಲ್ಲಿನ ಹುಡ್ಕೋದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವೈ ಎಚ್ ವಿಜಯಕರ ಅವರು, ಪ್ರಧಾನಿ ಮೋದಿ ಅವರು ಯಾವ ಗೊತ್ತು ಗುರಿ ಇಲ್ಲದೆ ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಕೊಟ್ಟರು. ಆದರೆ ಒಟ್ಟಾರೆ ಮೀಸಲಾತಿ ಶೇ.50ಕ್ಕಿಂತ ಹೆಚ್ಚಾಗಬಾರದು ಎಂದು ಸುಪ್ರೀಂಕೋರ್ಟ ಆದೇಶ ನೀಡಿದೆ. ಎಸ್ಸಿ, ಎಸ್ಟಿಯವರು ಮೀಸಲಾತಿ ಹೆಚ್ಚಿಸಿ ಎಂದರೆ ಸುಪ್ರೀಂ ಆದೇಶದ ನೆಪ ಒಡ್ಡುವ ಸರ್ಕಾರಗಳಿಗೆ ಶೇ.10 ಮೀಸಲಾತಿ ಕೊಡುವಾಗ ಆದೇಶ ನೆನಪಾಗಲಿಲ್ಲವೆ, ಇದು ಆದೇಶ ಉಲ್ಲಂಘನೆ ಅಲ್ಲವೇ ಎಂದು ಹರಿಹಾಯ್ದರು

ಡಿಎಸ್‍ಎಸ್ ಮುಖಂಡ ಡಿ.ಬಿ.ಮುದೂರ ಮಾತನಾಡಿ:

ಎಸ್ಸಿ, ಎಸ್ಟಿ ಜನರಿಗೆ ಹೆಚ್ಚಿನ ಮೀಸಲಾತಿ ಕೂಗು ಪ್ರಬಲವಾಗಿದೆ. ಬೇರೆ ಜಾತಿಯನ್ನು ಎಸ್ಸಿ, ಎಸ್ಟಿ ಪಟ್ಟಿಯಲ್ಲಿ ಸೇರಿಸಿದ್ದು ಇವರನ್ನು ತೆಗೆಯಲು ಉಗ್ರ ಹೋರಾಟ ನಡೆಸುವ ಸಂದೇಶವನ್ನು ಸರ್ಕಾರಗಳಿಗೆ ಕೊಡಬೇಕು ಎಂದರು.

ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಹರೀಶ ನಾಟಿಕಾರ ಮಾತನಾಡಿ, ಸರ್ಕಾರ, ರಾಜಕೀ ಪಕ್ಷಗಳು ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡಿವೆ. ಮೂಲ ಅಸ್ಪೃಶ್ಯರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಎಸ್ಸಿ ಪಟ್ಟಿಯಲ್ಲಿ ಸೇರಿರುವ ಮೂಲ ಅಸ್ಪೃಶ್ಯರಲ್ಲದೆ ಜಾತಿಯವರು ರಾಜಕೀಯ ಬಲ, ಹಣ ಬಲ ಬಳಸಿಕೊಂಡು ಸೌಲಭ್ಯ ಪಡೆಯುತ್ತಿದ್ದಾರೆ. ಮೂಲ ಅಸ್ಪೃಶ್ಯರಲ್ಲದವರನ್ನು ಮೀಸಲಾತಿಯಿಂದ ಕೈಬಿಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲು ಉಗ್ರ ಹೋರಾಟ ನಡೆಯಬೇಕು ಎಂದರು.

ಎಸ್ಸಿ ಮೀಸಲಾತಿ ಪಟ್ಟಿಯಲ್ಲಿ 65 ಜಾತಿ ಇದ್ದದ್ದು ನಂತರ 101ಕ್ಕೆ ಏರಿಕೆಯಾಗಿ ಇದೀಗ 140ಕ್ಕೆ ಬಂದಿದೆ. ಎಸ್ಟಿ ಪಟ್ಟಿಯಲ್ಲಿ 4 ಜಾತಿ ಇದ್ದದ್ದು ಇದೀಗ 40ಕ್ಕೆ ಬಂದಿದೆ. ಆದರೆ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳ ಆಗಿಲ್ಲ. ಕಳೆದ 25 ವರ್ಷದಿಂದಲೂ ಎಸ್ಸಿಗೆ ಶೇ.15, ಎಸ್ಟಿಗೆ ಶೇ.3 ಮೀಸಲಾತಿ ಉಳಿದುಕೊಂಡಿದೆ. ಇದರಿಂದ ನಿಜವಾದ ಅರ್ಹರಿಗೆ ಮೀಸಲಾತಿ ಪ್ರಯೋಜನ ದೊರಕುತ್ತಿಲ್ಲ. ಎಸ್ಸಿ ಮೀಸಲಾತಿ ಶೇ.21ಕ್ಕೆ, ಎಸ್ಟಿ ಮೀಸಲಾತಿ ಶೇ.7.5 ಹೆಚ್ಚಿಸುವ ಚರ್ಚೆ ನಡೆದಿದ್ದರೂ ಇದನ್ನು ಇನ್ನೂ ಹೆಚ್ಚಿಸಬೇಕು ಎಂದು ಅಂದಿನ ಸಭೆಯಲ್ಲಿ ಅಹವಾಲು ಸಲ್ಲಿಸಬೇಕು ಎಂದು ಕೋರಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ(ಗ್ರೇಡ್-2) ಎನ್.ಆರ್.ಉಂಡಿಗೇರಿ ಮಾತನಾಡಿ ಜ.10ರಂದು ಬೆಳಿಗ್ಗೆ 10-30ಕ್ಕೆ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎನ್.ನಾಗಮೋಹನದಾಸ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಎಸ್ಪಿ ಕಚೇರಿ ಹತ್ತಿರ ಇರುವ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಎಸ್ಸಿ, ಎಸ್ಟಿ ಜನರ ಸಮಾಲೋಚನಾ ಸಭೆ ಏರ್ಪಡಿಸಿದ್ದು ಎಲ್ಲರೂ ಆಯೋಗದ ಮುಂದೆ ಅಹವಾಲು ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಚನ್ನಪ್ಪ ವಿಜಯಕರ್, ನಾನಪ್ಪ ನಾಯಕ, ಅಶೋಕ ಇಲಕಲ್ಲ, ಪರಶುರಾಮ ಕೊಣ್ಣೂರ, ಸಿದ್ದು ಚಲವಾದಿ, ಪ್ರಕಾಶ ಸರೂರ, ದೇವರಾಜ ಹಂಗರಗಿ, ರಾಮಣ್ಣ ರಾಜನಾಳ, ಎಪಿಎಂಸಿ ಉಪಾಧ್ಯಕ್ಷ ಹಣಮಂತ ನಾಯಕಮಕ್ಕಳ, ತಿಪ್ಪಣ್ಣ ಗೋನಾಳ, ರಾಜು ವಾಲಿಕಾರ, ಸಿದ್ದು ತಳ್ಳಳ್ಳಿ, ದೇವೇಂದ್ರ ಹುನಕುಂಟಿ ಮತ್ತಿತರರು ಪಾಲ್ಗೊಂಡಿದ್ದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started