
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪ್ರಾರ್ಥನಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವಿಜಯಪುರ ಘಟಕದ ವತಿಯಿಂದ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಜರುಗಿತು.

ವೇದಿಕೆ ಮೇಲೆ ಅಧ್ಯಕ್ಷರಾದ ಪ್ರಭುದೇವ, ಕಲಬುರ್ಗಿ.ಜಿಲ್ಲಾ ಘಟಕದ ಅಧ್ಯಕ್ಷ ರಾಜು ಬಂಡೆಪ್ಪ ತೇಲಿ ಹಾಗೂ ಮುಖ್ಯ ಅತಿಥಿಗಳಾಗಿ ಎಂ ಬಿ ನಾವದಗಿ . ಮಹಾಬಲೇಶ್ವರ ಗಡೇದ. ಕೆ.ಜಿ ಭದ್ರಣ್ಣವರ ಉಪಸ್ಥಿತರಿದ್ದರು . ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷರಾದ ಬಂಡೆಪ್ಪ ತೇಲಿ ಹಾಗೂ ಎಲ್ಲ ಮುಖ್ಯ ಅತಿಥಿಗಳು ಕನ್ನಡನಾಡು ನೆಲ -ಜಲ -ನುಡಿಯ ಹಿತಕ್ಕಾಗಿ ಶ್ರಮಿಸೋಣ ಎಂದರು.ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಪ್ರಕಾಶ ಮಠ ರವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಬಂಡೆಪ್ಪ ತೇಲಿ ಧ್ವಜ ಹಸ್ತಾಂತರಿಸುವ ಮೂಲಕ ನೂತನ ಘಟಕ ಮತ್ತು ಪದಗ್ರಹಣಕ್ಕೆ ಅವಕಾಶ ಮಾಡಿಕೊಟ್ಟರು.ಹದಿನೇಳು ನೂತನ ಪದಾಧಿಕಾರಿಗಳ ಪದಗ್ರಹಣ ಮಾಡಿ ಸನ್ಮಾನಿಸಿದರು. ಪ್ರಾರ್ಥನಾ ವಿದ್ಯಾ ಮಂದಿರದ ವಿದ್ಯಾರ್ಥಿನಿ ಯರು ಪ್ರಾರ್ಥನೆ, ಸ್ವಾಗತ ಗೀತೆ ಹಾಡಿದರು.ಪ್ರಕಾಶ ಕರೇಕಲ್ಲ ನಿರೂಪಿಸಿದರು.ಸುನೀಲ ಮನಗೂಳಿ ಸ್ವಾಗತಿಸಿದರು.ಗೀತಾ ರಾಂಪೂರ ವಂದಿಸಿದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts