
ಚಿಕ್ಕೋಡಿ ವರದಿ:
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಮೌಡ್ಯಕ್ಕೆ ಸೆಡ್ಡು ಹೊಡೆದು ಮಗಳ ಹುಟ್ಟುಹಬ್ಬ ಆಚರಣೆ ಮಾಡಿದ ದಂಪತಿಗಳು.
ಇಂಗಳಿ ಗ್ರಾಮದ ಮಹೇಶ ಅಶೋಕ ಶಿಂಗೆ ಅವರ ಸುಪುತ್ರಿಯಾದ ಜೀಜಾ ಎಂಬ ಹೆಸರಿನ ಮಗುವಿನ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿ ಎಲ್ಲರನ್ನು ಕಣ್ಣು ನಿಬ್ಬೆರಿಸುವಂತ ಮಾಡಿದ್ದಾರೆ.
ಸ್ಮಶಾನದಲ್ಲಿ ಹುಟ್ಟುಹಬ್ಬದ ಸಂಭ್ರಮವನ್ನು ಸಂತಸ ವ್ಯಕ್ತಪಡಿಸಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ರವೀಂದ್ರ ನಾಯ್ಕರ್ ಬುದ್ದ,ಬಸವ,ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಮೌಡ್ಯತೆಯಿಂದ ಹೊರಬರಲು ಸಾಧ್ಯವಾಗುತ್ತದೆ.
ಸ್ಮಶಾನದಲ್ಲಿ ಮಕ್ಕಳ ಹುಟ್ಟುಹಬ್ಬದ ಆಚರಿಸುತ್ತಿರುವದು ಮಾನವ ಸಮುದಾಯದಲ್ಲಿ ಜಾಗೃತಿಗೊಂಡು ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಳ್ಳುತ್ತಿರುವದು ವೈಚಾರಿಕ ಕ್ರಾಂತಿಗೆ ನಾಂದಿಯಾಗಿದೆ.ಜೀಜಾಬಾಯಿ ಹುಟ್ಟುಹಬ್ಬ ೧೨ ನೇ ಶತಮಾನದ ಬಸವಣ್ಣನವರ ಮೌಡ್ಯದ ವಿರುದ್ದ ಸಾರಿದ್ದ ಕ್ರಾಂತಿ ನೆನಪಿಸಿಕೊಳ್ಳುವಂತೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಹೂವಣ್ಣ ಚೌಗಲೆ,ಹಿರಿಯ ಪತ್ರಕರ್ತ ಮುನ್ನಾ ಬಾಗಬಾನ,ಜೀವನ ಮಾಂಜರೇಕರ,ಗಾಯತ್ರಿ ಮಾಳಗಿ,ಆನಂದ ಗೋಕಾಕ ,ಪುಂಡಲೀಕ ದನವಾಡೆ,ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ವರದಿ:ಸಚೀನ ಕಾಂಬಳೆ