
ಬೆಂಗಳೂರಿನಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಬಿ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಕವಚ ೧೦೮ ನೌಕರರ ಸಭೆ ಜರುಗಿತು.
ಸಚಿವರು ಮಾತನಾಡಿ:
ಆರೋಗ್ಯ ಕವಚ ನೌಕರರ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ ಕೋಡುವದು ಹಾಗೂ ನೌಕರರನ್ನು ಕಾರ್ಮಿಕ ಕಾಯ್ದೆಯಡಿಯಲ್ಲಿ ವಿಲಿನಗೋಳಿಸುವದು,ಮೂಲಭೂತ ಸೌಲಭ್ಯ ಒದಗಿಸುವುದು,ವಜಾಗೊಂಡ ನೌಕರರನ್ನು ವಾಪಾಸ ಕೆಲಸಕ್ಕೆ ತೆಗೆದುಕೊಳ್ಳುವದರ ಬಗ್ಗೆ ಸುಧೀರ್ಘ ಚರ್ಚೆ ಮಾಡಿದರು ಒಟ್ಟಾರೆ ನೌಕರರ ಪರವಾಗಿ ಸರಕಾರ ಇದೆ ನಮಗೆಲ್ಲಾರಿತಿಯ ಒಳ್ಳೆಯದು ಮಾಡುವ ಜವಾಬ್ದಾರಿ ಸರಕಾರದ್ದು ಎಂದು ಹೇಳಿದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು,ಆಯುಕ್ತರು, ಆರ್ಥಿಕ ಇಲಾಖೆಯ ಅಧಿಕಾರಿಗಳು,DDEMRI officer’s,Gvk EMRI ಕಂಪನಿಯ ಮೇಲಾಧಿಕಾರಿಗಳು,ಆರೋಗ್ಯ ಕವಚ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀಶೈಲ ಹಳ್ಳೂರ,ಪ್ರಧಾನ ಕಾರ್ಯದರ್ಶಿ ಸುನೀಲ್ ಮಂಡ್ಯ,ಎಲ್ಲಾ ರಾಜ್ಯ ಪದಾಧಿಕಾರಿಗಳು ಉಪಸ್ಥಿತಿ ಇದ್ದು ನೌಕರರ ಸಮಸ್ಯೆಯನ್ನು ಎಳೆ-ಎಳೆಯಾಗಿ ಸಚಿವರ ಗಮನಕ್ಕೆ ತಂದರು.ಸಚಿವರು ಸಂಪೂರ್ಣ ಬರವಸೆ ನಿಡಿದ್ದು ಆದಷ್ಟು ಬೇಗ ನ್ಯಾಯ ಸಿಗುವ ಭರವಸೆ ಇದೆ.ನಮ್ಮ ಪರವಾಗಿ ಮಾತನಾಡಿದ ಮಾನ್ಯ ಸಚಿವರಿಗೂ,ಆರೋಗ್ಯ ಇಲಾಖೆಯ ಅಧಿಕಾರಿಗಳಿಗೂ ಎಲ್ಲಾ ನೌಕರರ ಪರವಾಗಿ ಹೃದಯ ತುಂಬಿದ ಧನ್ಯವಾದಗಳು, ಎಲ್ಲಾ ರಾಜ್ಯ ಪದಾಧಿಕಾರಿಗಳ,ಹಾಗೂ ಎಲ್ಲಾ ಜಿಲ್ಲಾ ಅಧ್ಯಕ್ಷರ,ಜಿಲ್ಲಾ ಪದಾಧಿಕಾರಿಗಳ ಬೆಂಬಲ ಸದಾ ಕಾಲ ಇದೆ ರೀತಿ ಇರಲಿ ಎಂದು ಶ್ರೀಶೈಲ ಹೂಗಾರ ರಾಜ್ಯ ಉಪಾಧ್ಯಕ್ಷರು ಆರೋಗ್ಯ ಕವಚ (೧೦೮) ನೌಕರರ ಸಂಘ ಬೆಂಗಳೂರು, ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸರೂರ ಹೇಳಿದ್ದಾರೆ.
ವರದಿ:ಸಾಗರ ಉಕ್ಕಲಿ
