
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಇರುವ ಆರ್ ಎಮ್ ಎಸ್ ಎ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡ ಚಿನ್ನರ ಕನ್ನಡ ಭಾಷಾ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು.

ಪ್ರಾಸ್ತಾವಿಕವಾಗಿ ಕಾರ್ಯಕ್ರಮದಲ್ಲಿ ಚಿನ್ನರ ಭಾಷೆಯ ಕುರಿತು ಇಂದಿನ ದಿನಗಳಲ್ಲಿ ಎಷ್ಟೊಂದು ಮುಖ್ಯವಾಗಿದೆ, ಎಂಬುದನ್ನು ಶಿಕ್ಷಕರಾದ ಈರಯ್ಯ ಮಠ ಮಾತನಾಡಿದರು.

ಇನ್ನೂ ಭಾಷೆಯ ಕುರಿತು ಕನ್ನಡ ವಚನಗಳಲ್ಲಿ ಬರುವ ತಾತ್ಪರ್ಯವನ್ನು ಆದರ್ಶ ವಿಧ್ಯಾಲಯದ ಮಕ್ಕಳು ಒಬ್ಬೊಬ್ಬರಾಗಿ ವಿಸ್ತರಿಸಿದರು.
ಕಾರ್ಯಕ್ರಮದಲ್ಲಿ ಆದರ್ಶ ವಿಧ್ಯಾಲಯದ ಶಿಕ್ಷಕ ಶಿಕ್ಷಕಿಯರು ವರ್ಗಾವಣೆ ಗೊಂಡ ಹಿನ್ನೆಲೆಯಲ್ಲಿ ಅವರನ್ನು ಎಲ್ಲರೂ ಕೂಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಅತಿಥಿಗಳಾಗಿದ್ದ ಅಶೋಕ ಹಂಚಲಿ ಅವರು ಮಾತನಾಡಿದರು:

ವಚನ ಸಾಹಿತ್ಯಕ್ಕೆ ಜೀವ ತುಂಬಿದ ಕೆಲಸ ಮಾಡುತ್ತಿದ್ದ ಈ ವಿಧ್ಯಾಲಯದ ಮಕ್ಕಳಿಗೆ ಹಾಗೂ ಅವರನ್ನು ಮಾರ್ಗದರ್ಶನ ನೀಡಿದವರಿಗೆ ಅಭಿನಂದನೆ,ವಚನಗಳು ವ್ಯಕ್ತಿತ್ವ ವಿಕಸನದ ಮೆಟ್ಟಿಲುಗಳು ಆಗುತ್ತವೆ.
ಕಾಯಕ ಜೀವಿಗಳು ನಾಯಕ ಜೀವಿಗಳಾಗುತ್ತವೆ.ವಚನಗಳು ಗೊತ್ತಿಲ್ಲದ ಸಮಯದಲ್ಲಿ ವಚನ ಗುರುತಿಸುವ ಕೆಲಸ ಅಂದಿನ ವಚನಕಾರರು ಮಾಡಿದ್ದಾರೆ.ಕಾರಣ ಇಂದಿಗೂ ವಚನಗಳು ಜೀವಂತವಾಗಿವೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ವಚನ ಸಾಹಿತ್ಯದಲ್ಲಿ ಇಷ್ಟೋಂದು ತಿಳುವಳಿಕೆ ಮಾಡಿಕೊಂಡು ಈ ರೀತಿಯಲ್ಲಿ ಮುಂದು ವರೆದಿದ್ದು ನನಗೆ ತುಂಬ ಹರ್ಷ ವೆನಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಶ್ರೀಮತಿ ಎಮ್ ಡಿ ತೆಗ್ಗಿನಮಠ ವಹಿಸಿದ್ದರು,ಎಸ್ ಚಿಲ್ಲಾಳಶೆಟ್ಟರ,ಶ್ರೀಮತಿ ಎಸ್ ಎಸ್ ಬಿರಾದಾರ, ಕವಡಿಮಟ್ಟಿ ಶಿಕ್ಷಕರು,ಟಿ ಎನ್ ರೂಡಗಿ,ಸವಿತಾ ವಿ,ಲಕ್ಷ್ಮಣ ಲಮಾಣಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಎಸ್ ಎಸ್ ಸಜ್ಜನ,ವಂದನಾರ್ಪನೆ ಹಂಚಲಿ ಶಿಕ್ಷಕರು ಮಾಡಿದರು.
ವರದಿ:ಸಾಗರ ಉಕ್ಕಲಿ ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts