
ಬೆಳಿಗ್ಗೆ 8:00 25 ನಿಮಿಷಕ್ಕೆ ನಕ್ಷತ್ರ ಲೋಕಕ್ಕೆ ಪಯಣ ಬೆಳೆಸಿದ ವಾಕ್ ಸಿದ್ಧಿ ಮಾನವ 105 ವರ್ಷವಾಗಿದ್ದ ಮರುಳಾರಾಧ್ಯ ಶ್ರೀ ಐಕ್ಯರಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಹಿರೇಮಠದ ನಡೆದಾಡುವ ದೇವರು ಎಂದೆ ಪ್ರಸಿದ್ಧರಾದ ಶ್ರೀ ಮರುಳಾರಾಧ್ಯ ಶ್ರೀಗಳು ಇಂದು ಬೆಳಗಿನ ಜಾವ 8:00 ಗಂಟೆ 25 ನಿಮಿಷಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮುಂದಿನ ಕಾರ್ಯದ ಸಿದ್ಧತೆ ಶ್ರೀ ಮಠದಲ್ಲಿ ನಡೆದಿವೆ.
ಅಂತಿಮದರ್ಶನಕ್ಕೆ ಶ್ರೀಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಸ್ಥಿತಿ ಚಿಂತಾಜನಕ ಆದಾಗಿನ ಪರಿಸ್ಥಿತಿಯಿಂದ ಸಿಂದಗಿಯ ಸಾರಂಗ ಮಠದ ಶ್ರೀಗಳಾದ ಪ್ರಭು ಸಾರಂಗದೇವ ಶಿವಾಚಾರ್ಯರು ಹಿರೇಮಠದ ಭಕ್ತವೃಂದದ ಜೊತೆಗಿದ್ದು ಮುಂದಿನ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts