ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಸ್ಥಾಪಿಸಲು ಒತ್ತಾಯ

ಭಾರತದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಬ್ರಿಟಿಷರ ವಿರುದ್ದ ಹೋರಾಡಿದ ಪ್ರಥಮ ವೀರ ಮಹಿಳೆ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆ ಸ್ಥಾಪನೆ ಮಾಡಬೇಕು. ಮತ್ತು ಶಾಲಾ ಕಾಲೇಜು ಪಠ್ಯ ಪುಸ್ತಕದಲ್ಲಿ ಕಿತ್ತೂರ ಚನ್ನಮ್ಮನ ಸಂಪೂರ್ಣ ಇತಿಹಾಸ ಹಾಕಲು ಆಗ್ರಹ.

ಧಾರವಾಡ ಜಿಲ್ಲೆಯಲ್ಲಿ ಎಲ್ಲಾ ಮಹನೀಯರ ಪ್ರತಿಮೆ ಇವೆ ಆದರೆ ಬ್ರಿಟಿಷರ ವಿರುದ್ದ ಹೋರಾಡಿದ ಪ್ರಥಮ ವೀರ ಮಹಿಳೆ ಭಾರತದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆ ಧಾರವಾಡ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ ಕಿತ್ತೂರ ಚನ್ನಮ್ಮನ ಪಾರ್ಕ ಇದೆ ಆದರೆ ಅಲ್ಲಿ ಠ್ಯಾಕೆರೆ ಸಮಾಧಿ ಇದೆ. ಧಾರವಾಡ ಜಿಲ್ಲೆಯಲ್ಲಿ ಕಿತ್ತೂರು ಚನ್ನಮ್ಮನ ಪ್ರತಿಮೆ ಇಲ್ಲದಿರುವುದು ದುರಂತದ ವಿಷಯ. ಕೊಡಲೇ ರಾಜ್ಯ ಸರ್ಕಾರ ವೀರ ಕಿತ್ತೂರು ಚನ್ನಮ್ಮನ ಪ್ರತಿಮೆಯನ್ನು ಧಾರವಾಡ ಜಿಲ್ಲೆಯ ನಿಮ್ಯಾನ್ಸ ಆಸ್ಪತ್ರೆ ಹತ್ತಿರ ಒಂದು ಕಡೆ ಗೋವಾ ಹೋಗುವ ಮಾರ್ಗ ಇನ್ನೂಂದು ಕಡೆ ಬೆಳಗಾವಿ ಹೋಗುವ ಮಾರ್ಗ ನಡುವೆ ಇರುವ ಸರ್ಕಲನಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆ ಸ್ಥಾಪನೆ ಮಾಡಬೇಕು. ಎಂದು ರಾಣಿ ಚನ್ನಮ್ಮ ನವಭಾರತ ಸೇನೆಯ

ಜಗದೀಶ ಕಡೋಲಿ

ರಾಣಿ ಚನ್ನಮ್ಮ ನವಭಾರತ ಸೇನೆ

ಉತ್ತರ ಕರ್ನಾಟಕ ಪ್ರದಾನ ಸಂಚಾಲಕ ಒತ್ತಾಯಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ ಬೆಳಗಾವಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started