
ಈಜಲು ಹೋದ ಬಾಲಕರಿಬ್ಬರು ಮೃತ ಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಹೊರವಲಯದಲ್ಲಿರುವ ಕುಮಾರಪ್ಪ ಮಡಿವಾಳಪ್ಪ ಕೋರಿ ಅವರ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಘಟನೆ ಸಂಭವಿಸಿದೆ.
ಶಾಲೆ ರಜೆ ಇದ್ದ ಕಾರಣ ಐದು ಮಕ್ಕಳು ಸೇರಿಕೊಂಡು ಈಜಲು ಈ ಕೃಷಿ ಹೊಂಡಕ್ಕೆ ಹೋಗಿದ್ದಾರೆ,ಎನ್ನಲಾಗಿದೆ ಇವರಲ್ಲಿ ಇಬ್ಬರು ಹೊರಗಡೆ ಬಂದಿದ್ದು ಒಬ್ಬ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಇಬ್ಬರು ಬಾಲಕರು ಸಾವನ್ನಪ್ಪಿದ್ದು ಅಮಿತ್ ಟಕ್ಕಳಕಿ (11 ವರ್ಷ ಸಿದ್ದರಾಮಪ್ಪ ಗೌಡ ಮುದುಕಪ್ಪ ಬಿರಾದಾರ್ (12) ವರ್ಷ ದ ಮೃತ ದುರ್ದೈವಿ ಗಳಾಗಿದ್ದಾರೆ. ಇತ್ತ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ ಘಟನೆಗೆ ಢವಳಗಿ ಗ್ರಾಮವೇ ಮೌನವಾಗಿದೆ.
ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts