ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷರಾದ ಪ್ರೊಫೆಸರ್ ವಸಂತಮ್ಮನವರು ಸಹೋದ್ಯೋಗಿಗಳು ಹಾಗೂ ಶಿಷ್ಯ ವೃಂದದ ಕೂಡಿಕೊಂಡು
ಮೈಸೂರಿನಲ್ಲಿ ಲಾಕ್ ಡೌನ್ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳ ಮೌಲ್ಯದ 600 ಅಹಾರ ಕಿಟ್ ವಿತರಣೆ ಮಾಡಿದರು.
ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಮೈಸೂರಿನ
600 ಕುಟುಂಬಗಳಿಗೆ ಪ್ರೊಫೆಸರ ವಸಂತಮತ್ಮನವರು ಸಹೋದ್ಯೋಗಿಗಳು
ಶಿಷ್ಯರು ಸೇರಿಕೊಂಡು
1) 18 ಕ್ವಿಂಟಾಲ್ ಅಕ್ಕಿ
2) 600 ಲೀಟರ್ ಅಡುಗೆ ಎಣ್ಣೆ
3) 600 K.G ಬೆಳೆ
4) ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ
ಕಾರ್ಯಕರ್ತರಿಗಾಗಿ 2 ಸಾವಿರ ಸ್ಯಾನಿಟೇರಿ ನ್ಯಾಪ್ಕಿನುಗಳನ್ನು ವಿತರಿಸಿದ್ದಾರೆ.
ಲಾಕ್ ಡೌನ್ ಮುಗಿಯುವವರೆಗೆ ಸೇವಾ ಕಾರ್ಯ ಮುಂದುವರಿಸಲಿದ್ದಾರೆ
ಪ್ರೊಫೆಸರ್ ವಸಂತಮ್ಮನವರು ಅವರ 50 ನೇ ವಿವಾಹ ವಾರ್ಷಿಕೋತ್ಸವದ ಖರ್ಚಿಗಾಗಿ ಇಟ್ಟುಕೊಂಡಿದ್ದ ಹಣವನ್ನು ಪರಿಹಾರ ಕಾರ್ಯಕ್ಕೆ ನೀಡಿ ಅದರ್ಶದೊಂದಿಗೆ ಮಾನವೀಯತೆ ಮೆರೆದಿದ್ದಾರೆ.
ಈ ಒಂದು ಮಾನವೀಯತೆ ಕಾರ್ಯಕ್ಕೆ ಸಮಸ್ತ ಕೋಲಿ ಗಂಗಾಮತಸ್ಥ ಬಾಂಧವರಿಂದ ಪ್ರೊಫೆಸರ್ ವಸಂತಮ್ಮನವರ, ಸಹೋದ್ಯೋಗಿಗಳ
ಶಿಷ್ಯರ ತಂಡಕ್ಕೆ
ಅಭಿನಂದನೆಗಳು
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯ ಉಪಾಧ್ಯಕ್ಷರಾದ
ನಾಗರಾಜ ಮಣ್ಣೂರ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.