ಜೂನ್ನಲ್ಲಿ SSLC ಪರೀಕ್ಷೆ ನಡೆಸುವುದು ಆತುರದ ನಿರ್ಧಾರ-ಸದ್ದಾಂ ಕುಂಟೋಜಿ

ವಿಜಯಪುರ:ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ ನಿನ್ನೆ ಬಿಡುಗಡೆಗೊಳಿಸಿದ ಹೇಳಿಕೆ ಪ್ರಕಾರ, ಕೋವಿಡ್-19 ಜೂನ್ ಮತ್ತು ಜುಲೈನಲ್ಲಿ ಉತ್ತುಂಗಕ್ಕೆ ಏರುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜೂನ್ ತಿಂಗಳು ನಡೆಸುವುದು ಬೇಡವೆಂದು ವಿಜಯಪುರ NSUI ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದ್ದಾರೆ.

ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಮೇ ಮತ್ತು ಜೂನ್ ತಿಂಗಳ ಮೊದಲ ವಾರ ಬಹಳ ನಿರ್ಣಾಯಕವೆಂದು ಹಲವು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. ಕೊರೊನಾಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಮತ್ತು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಸೇರಿದಂತೆ ಸುಮಾರು 75,000 ಮಂದಿ ಕನ್ನಡಿಗರು ಮೇ ತಿಂಗಳ ಅಂತ್ಯದೊಳಗೆ ಬರಲಿದ್ದಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ.ಕೊರೊನಾ ಹೋರಾಟ ದೀರ್ಘಕಾಲಿನವಾಗಿದ್ದು, ವಾಸ್ತವಿಕತೆಯನ್ನು ಅರಿತು ಸರ್ಕಾರ ಹೆಜ್ಜೆ ಇಡಬೇಕು. ವಲಸೆ ಕಾರ್ಮಿಕರ ವಿಚಾರದಲ್ಲಿ ಆದ ತಪ್ಪನ್ನು ಇಲ್ಲಿ ಪುನರಾವರ್ತನೆ ಮಾಡಬಾರದು. ಪರೀಕ್ಷೆಯನ್ನು ಮುಂದೂಡುವುದು ಒಳ್ಳೆಯದು ಎಂದು ಸದ್ದಾಂ ಕುಂಟೋಜಿ ತಿಳಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಾಗಿ ಸಂಪರ್ಕಿಸಿ-8792900064

ಗಂಗಾಮತಸ್ಥ ಸಂಘದ ಗೌರವ ಅಧ್ಯಕ್ಷರಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷರಾದ ಪ್ರೊಫೆಸರ್ ವಸಂತಮ್ಮನವರು ಸಹೋದ್ಯೋಗಿಗಳು ಹಾಗೂ ಶಿಷ್ಯ ವೃಂದದ ಕೂಡಿಕೊಂಡು

ಮೈಸೂರಿನಲ್ಲಿ ಲಾಕ್ ಡೌನ್ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳ ಮೌಲ್ಯದ 600 ಅಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಮೈಸೂರಿನ

600 ಕುಟುಂಬಗಳಿಗೆ ಪ್ರೊಫೆಸರ ವಸಂತಮತ್ಮನವರು ಸಹೋದ್ಯೋಗಿಗಳು

ಶಿಷ್ಯರು ಸೇರಿಕೊಂಡು

  • 18 ಕ್ವಿಂಟಾಲ್ ಅಕ್ಕಿ

  • 600 ಲೀಟರ್ ಅಡುಗೆ ಎಣ್ಣೆ

  • 600 K.G ಬೆಳೆ

  • ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ

ಕಾರ್ಯಕರ್ತರಿಗಾಗಿ 2 ಸಾವಿರ ಸ್ಯಾನಿಟೇರಿ ನ್ಯಾಪ್ಕಿನುಗಳನ್ನು ವಿತರಿಸಿದ್ದಾರೆ.

ಲಾಕ್ ಡೌನ್ ಮುಗಿಯುವವರೆಗೆ ಸೇವಾ ಕಾರ್ಯ ಮುಂದುವರಿಸಲಿದ್ದಾರೆ

ಪ್ರೊಫೆಸರ್ ವಸಂತಮ್ಮನವರು ಅವರ 50 ನೇ ವಿವಾಹ ವಾರ್ಷಿಕೋತ್ಸವದ ಖರ್ಚಿಗಾಗಿ ಇಟ್ಟುಕೊಂಡಿದ್ದ ಹಣವನ್ನು ಪರಿಹಾರ ಕಾರ್ಯಕ್ಕೆ ನೀಡಿ ಅದರ್ಶದೊಂದಿಗೆ ಮಾನವೀಯತೆ ಮೆರೆದಿದ್ದಾರೆ.

ಈ ಒಂದು ಮಾನವೀಯತೆ ಕಾರ್ಯಕ್ಕೆ ಸಮಸ್ತ ಕೋಲಿ ಗಂಗಾಮತಸ್ಥ ಬಾಂಧವರಿಂದ ಪ್ರೊಫೆಸರ್ ವಸಂತಮ್ಮನವರ, ಸಹೋದ್ಯೋಗಿಗಳ

ಶಿಷ್ಯರ ತಂಡಕ್ಕೆ

ಅಭಿನಂದನೆಗಳು

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯ ಉಪಾಧ್ಯಕ್ಷರಾದ

ನಾಗರಾಜ ಮಣ್ಣೂರ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ ಮೈಸೂರ- ಸುದ್ದಿಗಾಗಿ ಸಂಪರ್ಕಿಸಿ-8792900064

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷರಾದ ಪ್ರೊಫೆಸರ್ ವಸಂತಮ್ಮನವರು ಸಹೋದ್ಯೋಗಿಗಳು ಹಾಗೂ ಶಿಷ್ಯ ವೃಂದದ ಕೂಡಿಕೊಂಡು
ಮೈಸೂರಿನಲ್ಲಿ ಲಾಕ್ ಡೌನ್ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳ ಮೌಲ್ಯದ 600 ಅಹಾರ ಕಿಟ್ ವಿತರಣೆ ಮಾಡಿದರು.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಮೈಸೂರಿನ
600 ಕುಟುಂಬಗಳಿಗೆ ಪ್ರೊಫೆಸರ ವಸಂತಮತ್ಮನವರು ಸಹೋದ್ಯೋಗಿಗಳು

ಶಿಷ್ಯರು ಸೇರಿಕೊಂಡು

1) 18 ಕ್ವಿಂಟಾಲ್ ಅಕ್ಕಿ
2) 600 ಲೀಟರ್ ಅಡುಗೆ ಎಣ್ಣೆ
3) 600 K.G ಬೆಳೆ
4) ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ
ಕಾರ್ಯಕರ್ತರಿಗಾಗಿ 2 ಸಾವಿರ ಸ್ಯಾನಿಟೇರಿ ನ್ಯಾಪ್ಕಿನುಗಳನ್ನು ವಿತರಿಸಿದ್ದಾರೆ.

ಲಾಕ್ ಡೌನ್ ಮುಗಿಯುವವರೆಗೆ ಸೇವಾ ಕಾರ್ಯ ಮುಂದುವರಿಸಲಿದ್ದಾರೆ
ಪ್ರೊಫೆಸರ್ ವಸಂತಮ್ಮನವರು ಅವರ 50 ನೇ ವಿವಾಹ ವಾರ್ಷಿಕೋತ್ಸವದ ಖರ್ಚಿಗಾಗಿ ಇಟ್ಟುಕೊಂಡಿದ್ದ ಹಣವನ್ನು ಪರಿಹಾರ ಕಾರ್ಯಕ್ಕೆ ನೀಡಿ ಅದರ್ಶದೊಂದಿಗೆ ಮಾನವೀಯತೆ ಮೆರೆದಿದ್ದಾರೆ.

ಈ ಒಂದು ಮಾನವೀಯತೆ ಕಾರ್ಯಕ್ಕೆ ಸಮಸ್ತ ಕೋಲಿ ಗಂಗಾಮತಸ್ಥ ಬಾಂಧವರಿಂದ ಪ್ರೊಫೆಸರ್ ವಸಂತಮ್ಮನವರ, ಸಹೋದ್ಯೋಗಿಗಳ
ಶಿಷ್ಯರ ತಂಡಕ್ಕೆ
ಅಭಿನಂದನೆಗಳು
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯ ಉಪಾಧ್ಯಕ್ಷರಾದ
ನಾಗರಾಜ ಮಣ್ಣೂರ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ದಕ್ಷತೆ ಹಾಗೂ ಪ್ರಾಮಾಣಿಕತೆ ಯಿಂದ ಮುದ್ದೇಬಿಹಾಳ ತಾಲ್ಲೂಕಿನ ಜನರ ಪ್ರೀತಿಗೆ ಪಾತ್ರರಾದ ಪಿಎಸ್ಐ ಮಲ್ಲಪ್ಪ ಮಡ್ಡಿ

ಮುದ್ದೇಬಿಹಾಳ:ಸಾರ್ವಜನಿಕರ ರಕ್ಷಣೆಗೆ ನಿಂತ ಹಾಗೂ ದಕ್ಷತೆಗೆ ಸದಾಕಾಲ ಹೆಸರಾಗಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಆರಕ್ಷಕ ಸಿಬ್ಬಂದಿಗಳು ತಮ್ಮ ಜೀವವನ್ನು ತಮ್ಮ ಆಸೆಯನ್ನು ಲೆಕ್ಕಿಸದೆ,ತಮ್ಮ ಕುಟುಂಬದಿಂದ ದೂರ ಉಳಿದು ತಮ್ಮ ಹೊಟ್ಟೆಗೆ ಸರಿಯಾಗಿ ಆಹಾರ, ನೀರಿಲ್ಲದೆ ಸರಿಯಾದ ಸಮಯಕ್ಕೆ ಆಹಾರ ಸಿಗದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯು. ಈ ಮಹಾಮಾರಿ ಕೊರೋನ ವೈರಸ್ ನಿಯಂತ್ರಣಕ್ಕೆ ಹಗಲಿರುಳು ತಮ್ಮ ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯದ ಅನೇಕ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರ ಕಾರ್ಯ ಹಾಗೂ ಕರ್ತವ್ಯ ಮೆಚ್ಚುವಂತದ್ದಾಗಿದೆ.ಮೊನ್ನೆಯ ದಿನ ಮುಗಿದ 21ದಿನಗಳ ಲಾಕ್ ಡೌನ್ ನಲ್ಲಿ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಮುದ್ದೇಬಿಹಾಳ ತಾಲೂಕಿನಲ್ಲಿ ತಮ್ಮ ದಕ್ಷತೆಯಿಂದ ಸರ್ಕಾರ ಹೇಳಿದ ಆಜ್ಞೆಯಂತೆ ಕಟ್ಟುನಿಟ್ಟಾಗಿ ಶಿಸ್ತು ಕ್ರಮದಿಂದ ಜನದಟ್ಟಣೆಯು ಸೇರದಂತೆ ಕರ್ತವ್ಯವನ್ನು ನಿರ್ವಹಿಸಿದರು.

ಅಲ್ಲದೆ ಅನಗತ್ಯವಾಗಿ ತಿರುಗಾಡುತ್ತಿರುವ ಮೋಟರ್ ಸೈಕಲ್ ಸವಾರರಿಗೆ ಮೊದಲು ವಿನಂತಿಸಿಕೊಂಡು ಅವರು ಕೇಳದಿದ್ದ ಪಕ್ಷದಲ್ಲಿ ಅಂತಹ ಮೋಟರ್ ಸೈಕಲ್ ನಲ್ಲಿ ಸಂಚರಿಸುವವರನ್ನು ಸದೆಬಡೆದು ಯಾವುದೇ ಒತ್ತಡಕ್ಕೂ ಮನೆಯದೇ ನಿಯಮ ಮೀರಿ ಓಡಾಡುವ ಬೈಕುಗಳನ್ನು ಹಿಡಿದು ಠಾಣೆಯಲ್ಲಿ ನಿಲ್ಲಿಸಿ ಕೇಸ್‌ ದಾಖಲಿಸಿದ್ದಾರೆ. ಅಲ್ಲದೆ ಎಷ್ಟು ಹೇಳಿದರು ಬೇಕಾಬಿಟ್ಟಿ ತಿರುಗಾಡುವ ಜನರಿಗೆ ಬಿಸಿ ಮುಟ್ಟಿಸುವ ಕಾರ್ಯ ಎಗ್ಗಿಲ್ಲದೆ ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೂ ಅಬಕಾರಿ ಇಲಾಖೆಯವರು ಮಾಡಬೇಕಾಗಿದ್ದ ಕಾರ್ಯ ಕಳ್ಳಬಟ್ಟಿ ಸಾರಾಯಿ ದಂಧೆ ನಡೆಸುತ್ತಿರುವ ತಾಲೂಕಿನ ತಾಂಡಾಗಳ ಮೇಲೆ ದಾಳಿ ನಡೆಸಿ ಸುಮಾರು 2000ಕ್ಕೂ ಅಧಿಕ ಲೀಟರ್ ಕಳ್ಳಭಟ್ಟಿ ಸಾರಾಯಿ ಯನ್ನು ಸಿಬ್ಬಂದಿಗಳ ಸಹಾಯದಿಂದ ನಾಶಮಾಡಿದ್ದಾರೆ.

ಅಲ್ಲದೆ ಇತರೆ ತಾಲ್ಲೂಕಿನಲ್ಲಿ ನಡೆಯುವ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿ ತಮ್ಮ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಯಾವುದೇ ರೀತಿಯ ಕೋಮು ಸೌಹಾರ್ದತೆಗೆ ಅವಕಾಶ ನೀಡದೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

ಇಷ್ಟೇ ಅಲ್ಲದೆ ಮುದ್ದೇಬಿಹಾಳ ತಾಲೂಕಿನಲ್ಲಿ ಜಾತ್ರೆ ಸಮಾರಂಭ ಗಳಲ್ಲಿ ತಮ್ಮ ಕಂಠದಿಂದ ಹಾಡನ್ನು ಹಾಡುವ ಮೂಲಕ ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿ ಸ್ನೇಹಮಯ ಜೀವಿ ಎಂದು ಖ್ಯಾತಿಯನ್ನು ಪಡೆದಿದ್ದಾರೆ.

ಇವರು ಮೂಲತಹ ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮದವರಾಗಿದ್ದು ಮೊದಲಿಗೆ ವಿಜಯಪುರ ಜಿಲ್ಲೆಯಲ್ಲಿ ಕಾನ್ಸ್ಟೇಬಲ್ ಆಗಿ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಅಂದಿಗೂ ಕೂಡ ಅವರ ಸಹೋದ್ಯೋಗಿಗಳ ಜೊತೆಗೆ ಪ್ರೀತಿಯಿಂದ ಕಾರ್ಯನಿರ್ವಹಿಸಿ ನಂತರ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಪಾಸಾಗಿ ಕರ್ತವ್ಯಕ್ಕೆ ಹಾಜರಾಗಿ ಅವರು ಕಾರ್ಯನಿರ್ವಹಿಸಿದರು ಮಂಗಳೂರು ಹಾಗೂ ಗದಗ್ ಠಾಣೆಯಲ್ಲೂ ಸಹ ಅತ್ಯಂತ ದಕ್ಷತೆಯಿಂದ ಹಾಗೂ ಸಾರ್ವಜನಿಕರ ಪ್ರೀತಿಯನ್ನು ಗಳಿಸುವುದರ ಮೂಲಕ ಜನರ ಮನವನ್ನು ಗೆದ್ದಿರುವ ಅಧಿಕಾರಿಯಾದರು.

ಹಾಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು. ಅದಾಗಲೇ ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅದರ ಜೊತೆಯಲ್ಲಿ ದಕ್ಷತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.ಈ ಕೋವಿಡ್-19 ಕಾರ್ಯಾಚರಣೆಯಲ್ಲಿ ದಕ್ಷತೆ ಯೊಂದಿಗೆ ಮಾನವೀಯತೆಗೂ ಸಾಕ್ಷಿಯಾಗಿದ್ದಾರೆ. ಇವರೊಂದಿಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ಬೆರೆತು ಅವರನ್ನು ಜೊತೆಗೂಡಿಸಿಕೊಂಡು ಸ್ನೇಹ ಮಯದಿಂದ ಇವತ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

ಈ ಕೊರೋನ ಸೋಂಕನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರು ಸರಕಾರದ ನಿಯಮದಂತೆ ಮುದ್ದೇಬಿಹಾಳ ಠಾಣೆಯ ವ್ಯಾಪ್ತಿಯಲ್ಲಿ ಅನೇಕ ರೀತಿಯ ಕಠಿಣ ಕ್ರಮಗಳನ್ನು ಕೈಗೊಂಡಿದ್ದು. ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ತಿರುಗಾಡಿ ನಿಯಮವನ್ನು ಮೀರಿ ಅವರಿಂದ ಶಿಕ್ಷೆಗೆ ಒಳಗಾಗಬೇಡಿ ಪೊಲೀಸ್ ಇಲಾಖೆಯು ತಮ್ಮ ಕುಟುಂಬವನ್ನು ಲೆಕ್ಕಿಸದೆ ನಮ್ಮ-ನಿಮ್ಮೆಲ್ಲರ ಪ್ರಾಣರಕ್ಷಣೆಗಾಗಿ ಸರ್ಕಾರ ಹೇಳಿದ ನಿಯಮದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ದಕ್ಷತೆಯ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸಹಕರಿಸುವುದರ ಜೊತೆಯಲ್ಲಿ ಅವರಿಗೆ ಸಹಕಾರವನ್ನು ನೀಡಿ ಅವರನ್ನು ಬೆಂಬಲಿಸಿ ಗೌರವಿಸಿ ಅವರ ಆದ್ಯತೆ ಹಾಗು ನಿಮ್ಮ ಪ್ರಾಣರಕ್ಷಣೆಗಾಗಿ ದಯವಿಟ್ಟು ಮನೆಯಲ್ಲಿ ಇರಿ.ಈ ಕೊರೋನ ಮಹಾಮಾರಿಯನ್ನು ತಡೆಗಟ್ಟಲು ದಾರಿಯಾಗಿ.

ರಾಯಲ್ ಟಿವಿ ನ್ಯೂಸ್ ವಿಜಯಪುರ-8792900064

ಕಾರ್ಮಿಕರಿಗೆ ಸ್ವಾಗತಿಸಿ ನೆರವು ನೀಡಿದ ಶಾಸಕರ ಧರ್ಮಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ

ವಿಜಯಪುರ:ರಾಜ್ಯದ ವಿವಿಧ ಜಿಲ್ಲೆಗಳಿಂದ ಬಸ್‌ಗಳ ಮೂಲಕ ಮುದ್ದೇಬಿಹಾಳಕ್ಕೆ ಆಗಮಿಸಿದ ಮುದ್ದೇಬಿಹಾಳ ಇಂಡಿ. ಸಿಂದಗಿ, ಬಸವನ ಬಾಗೇವಾಡಿ ತಾಲೂಕಿನ ವಿವಿಧ ಗ್ರಾಮಗಳ ಕಾರ್ಮಿಕರನ್ನು ಬೆಳಿಗ್ಗೆ ಮುದ್ದೇಬಿಹಾಳ ಮತ ಕ್ಷೇತ್ರದ ಮಾನ್ಯ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರ ಧರ್ಮಪತ್ನಿ ಶ್ರೀಮತಿ ಮಹಾದೇವಿ ಎ ಪಾಟೀಲ ನಡಹಳ್ಳಿ ಅವರು ಸ್ವಾಗತಿಸಿ

ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಿ ಬಸ್ ಚಾಲಕ ನಿರ್ವಾಹಕರು ಹಾಗೂ ಆಗಮಿಸಿದ ಪ್ರತಿ ಕುಟುಂಬಕ್ಕೆ ಒಂದು ಆಹಾರದ ಕಿಟ್ಟನ್ನು ನೀಡಿ ಅವರಿಗೆ ಗೌರವಿಸಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಸಹಕಾರಿ ಯಾದರು.ಈ ಸಂದರ್ಭದಲ್ಲಿ ಸಿಪಿಐ ಆನಂದ ವಾಗ್ಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ,ಸಂಗಮ್ಮ ದೇವರಹಳ್ಳಿ, ಸಿದ್ದಮ್ಮ ಸಿದರೆಡ್ಡಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ-8792900064

ಮದ್ಯ ಕೊಂಡವರಿಗೆ ಶಾಯೆ ಗುರುತು ಹಾಕಿ-ಸದ್ದಾಂ ಕುಂಟೋಜಿ

ರಾಜ್ಯ ಸರಕಾರ ಮೇ4 ರಿಂದ ಮದ್ಯ ಖರೀದಿಸಲು ಅವಕಾಶ ನೀಡಿದ್ದು ಮದ್ಯ ಖರೀದಿಸಲು ಬರುವ ಪ್ರತಿಯೊಬ್ಬರಿಗೊ ಕೈಗೆ ಶಾಯಿ ಗುರುತು ಹಾಕಬೇಕೆಂದು ವಿಜಯಪುರ ಜಿಲ್ಲಾ NSUI ಅದ್ಯಕ್ಷರಾದ ಸದ್ದಾಂ ಕುಂಟೊಜಿ ಹೇಳಿದ್ದಾರೆ.

ಮದ್ಯ ಖರೀದಿಸಲು ಆಗಮಿಸುವವರಿಗೆ ಶಾಯಿ ಗುರುತು ಹಾಕಬೇಕು ನಂತರ ಶಾಯಿ ಗುರುತು ಇದ್ದವರಿಗೆ ಸರಕಾರವಾಗಲಿ ಸಂಘ ಸಂಸ್ಥೆಗಳಾಗಲಿ ದಾನಿಗಳಾಗಲಿ ಉಚಿತ ಊಟ ಉಪಹಾರ ಆಹಾರ ಕಿಟ್ ಮತ್ತು ಪಡಿತರ ನೀಡಬಾರದು ಎಂದು ಸದ್ದಾಂ ಕುಂಟೋಜಿ ಹೇಳಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064

ವರ್ತಕರಿಂದ ತಾಲ್ಲೂಕು ಆಡಳಿತಕ್ಕೆ ಹೂವು ಚೆಲ್ಲುವ ಮೂಲಕ ಗೌರವ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಹಶಿಲ್ದಾರ ಕಛೇರಿಯಲ್ಲಿ ಮುಖ್ಯಮಂತ್ರಿಗಳ ನಿಯಮದ ಅನುಸಾರ ಅಂಗಡಿಕಾರರಿಗೆ ಸರ್ಕಾರದ ನಿಯಮ ಮುರಿಯದಂತೆ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಟ್ಟ

ತಾಲ್ಲೂಕು ಆಡಳಿತಕ್ಕೆ ವರ್ತಕರಿಂದ ಹೂಗಳನ್ನು ಚಲ್ಲುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಿದರು.

ತಹಶಿಲ್ದಾರ ಜಿ ಎಸ್ ಮಳಗಿ,ಸಿಪಿಐ ಆನಂದ ವಾಗ್ಮೋಡೆ,ಪಿಎಸ್ಐ ಮಲ್ಲಪ್ಪ ಮಡ್ಡಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064

ಸಂಯುಕ್ತ ಪಾಟೀಲ ಅಭಿಮಾನಿಗಳಿಂದ ಕಿಟ್ ವಿತರಣೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಮತಕ್ಷೇತ್ರದವರು ಹಾಗೂ ಡಿ ಸಿ ಸಿ ಬ್ಯಾಂಕ್ ನಿದೇರ್ಶಕರಾದ ವಿಜಯಪುರ ಜಿಲ್ಲೆಯ ಸಂಯುಕ್ತ ಎಸ್ ಪಾಟೀಲ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಹಂಚಿನಾಳ ಗ್ರಾಮದ ಸಂಯುಕ್ತ ಎಸ್ ಪಾಟೀಲ ಅಭಿಮಾನಿಗಳಾದ ರಾಜುಗೌಡ ಪಾಟೀಲ (ಪಿ ಕೆ ಪಿ ಎಸ್ ನಿದೇರ್ಶಕರು) ನೇತೃತ್ವದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ

ರಾಮನಗೌಡ ಬಿರಾದರ. ಕರಬಸು ಮಾದಿನಾಳ.ಎಚ್ ಆರ್ ವಡ್ಡರ.ರಮೇಶ ವಾಲಿಕಾರ.ಗೋಪಾಲ ಮಾದರ.ಶ್ರೀಕಾಂತ ಹಂಚಿನಾಳ.ಸಂಗನಗೌಡ ಬಿರಾದರ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಳಿಗಾಗಿ ಸಂಪರ್ಕಿಸಿ-8792900064

ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರಿಗೆ ಜೀವ ಹಾನಿಯಾದರೆ ಪರಿಹಾರ ಘೋಷಿಸಿದ ಸಿ ಎಂ ಯಡಿಯೂರಪ್ಪ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜೀವ ತೊರೆದು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೊರೋನಾ ಸೋಂಕು ತಗುಲಿ ಜೀವಹಾನಿಯಾದರೆ 30 ಲಕ್ಷ ರೂ.ಗಳ ಪರಿಹಾರಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು ಅನುಮೋದನೆ ನೀಡಿದ್ದಾರೆ.

ರಾಯಲ್ ಟಿವಿ ನ್ಯೂಸ್ ಬೆಂಗಳೂರು,ಸುದ್ದಿಗಾಗಿ ಸಂಪರ್ಕಿಸಿ-8792900064

ಜಿಲ್ಲೆಗಳಿಂದ ಬಂದ ಜನರಿಗೆ ಬಸ್ ನಿಲ್ದಾಣದಲ್ಲಿ ಊಟದ ವ್ಯವಸ್ಥೆ ಮಾಡಿದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಕೋವಿಡ್-19 ಸಲುವಾಗಿ ಲಾಕ್ ಡೌನ್ ಆದಕಾರಣ ಬೇರೆ ಜಿಲ್ಲೆಗಳಲ್ಲಿ ಇದ್ದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೂಲಿ ಕಾರ್ಮಿಕರಿಗೆ ಅವರ ಆರೋಗ್ಯವನ್ನು ವಿಚಾರಿಸಿ ಹಸಿವೆಯಿಂದ ಬಳಲುತ್ತಿದ್ದ ಅವರಿಗೆ ಸ್ಥಳದಲ್ಲಿಯೇ ಊಟದ ವ್ಯವಸ್ಥೆ ಮಾಡಿಸಿ ವೈದ್ಯಕೀಯ ತಪಾಸಣೆ ಮಾಡಿಸಿದರು. ನಂತರ ಅಹಾರ ಪದಾರ್ಥಗಳ ಕಿಟ್ ನೀಡಿ ಅವರ ಅವರ ಗ್ರಾಮಗಳಿಗೆ ಕಳುಹಿಸಿಕೊಟ್ಟ ಮಾನ್ಯ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಹಾಗೂ ಅವರ ಧರ್ಮಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಜಿ ಎಸ್ ಮಳಗಿ,ಪಿಎಸ್ಐ ಮಲ್ಲಪ್ಪ ಮಡ್ಡಿ, ಸಾರಿಗೆ ವ್ಯವಸ್ಥಾಪಕ ರಾಹುಲ್ ಹೊನಸೂರೆ,ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064

Design a site like this with WordPress.com
Get started