ವಿಜಯಪುರ ಜಿಲ್ಲೆಯ ತಾಲ್ಲೂಕು ಹಾಗೂ ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದ ತಾಳಿಕೋಟಿ ಪಟ್ಟಣದಲ್ಲಿ ಕೋವಿಡ್-19 ಸಲುವಾಗಿ ಬಡಜನರಿಗಾಗಿ ಅಹಾರ ಪದಾರ್ಥಗಳ ಕಿಟ್ ಗಳನ್ನು ಸಿದ್ದತೆ ಮಾಡುವುದರಲ್ಲಿ ಶಾಸಕ ಎ ಎಸ್ ಪಾಟೀಲ ರ ಧರ್ಮಪತ್ನಿ ಮಹಾದೇವಿ ಎ ಪಾಟೀಲ ನಡಹಳ್ಳಿ ಅವರು ಸ್ವತಃ ತಾವೇ ನಿರತರಾಗಿದ್ದಾರೆ.ನಂತರ
ಕಾರ್ಮಿಕರಿಗೆ ಹಾಗೂ ಕಾರ್ಯಕರ್ತರಿಗೆ ಊಟ ಬಡಿಸುವ ಮೂಲಕ ಮಾನವೀಯತೆ ಮೆರೆದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಾಗಿ ಸಂಪರ್ಕಿಸಿ-8792900064
ವಿಜಯಪುರ:ಕೋವಿಡ್-19 ಸಲುವಾಗಿ ಕೆಲಸ ವಿಲ್ಲದೆ ಕಷ್ಟಪಡುತ್ತಿರುವ ಬಡವರಿಗೆ ಅವರ ಕುಟುಂಬಕ್ಕೆ ಆಹಾರ ಧಾನ್ಯಗಳನ್ನು ವಿತರಿಸುವಲ್ಲಿ ಮಾನವೀಯತೆ ಮೆರೆದ ಕಾಶೀಬಾಯಿ ರಾಂಪೂರ ಅವರು.
ಹೌದು ಈ ರೀತಿಯ ಲಾಕ್ ಡೌನ್ ನಲ್ಲಿ ಬಡವರು ಪರದಾಡುತ್ತಿರುವ ಕಷ್ಟಕ್ಕೆ ಸ್ಪಂದಿಸಿದ್ದಾರೆ,ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಪಂಚಮಸಾಲಿ ಸಮಾಜದ ಮಹಿಳಾ ಅಧ್ಯಕ್ಷರು ಹಾಗೂ ಮತ ಕ್ಷೇತ್ರದ ಮಹಿಳಾ ಬಾಜಪ ಪಕ್ಷದ ಮುಖಂಡರಾದ ಶ್ರೀಮತಿ ಕಾಶೀಬಾಯಿ ಶಿವಯೋಗಪ್ಪ ರಾಂಪೂರ ಅವರು ಲಾಕ್ ಡೌನ್ ಆದ ಕಾರಣ ಬಾಗಲಕೋಟೆ ಯಲ್ಲಿ ಇದ್ದರು ಅವರ ಹಿತೈಷಿಗಳಿಗೆ ಹೇಳಿ ಆಹಾರ ಧಾನ್ಯಗಳನ್ನು ವಿತರಿಸಲು ಹೇಳಿದರು. ಅವರ ಮಾತಿನಂತೆ ಮುದ್ದೇಬಿಹಾಳ ತಾಲ್ಲೂಕಿನ ನಾಲತ್ತವಾಡ ಪಟ್ಟಣದಲ್ಲಿ ಅನೇಕ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವರದಿ:ಸಾಗರ
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನ ಸಭಾ ವ್ಯಾಪ್ತಿಯ ತಾಳಿಕೋಟಿ ಪಟ್ಟಣದಲ್ಲಿ ಕೋವಿಡ್-19 ಸಲುವಾಗಿ ಮುಂಜಾಗ್ರತಾ ಸಲುವಾಗಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಮಾಸ್ಕ್ ವಿತರಣೆ ಮಾಡಿದರು.
ದಿನ ನಿತ್ಯ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸುದ್ದಿಗಾಗಿ ಶ್ರಮಿಸುವ ಪತ್ರಕರ್ತರಿಗೆ ಮಾಸ್ಕ್ ವಿತರಿಸಿದರು ಹಾಗೂ ವೈದ್ಯರಿಗೆ,ಪಿ ಪಿ ಕಿಟ್ ಎನ್-95 ಮಾಸ್ಕ್ ಗಳನ್ನು ವಿತರಣೆ ಮಾಡಿದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕೋವಿಡ್-19 ಸಲುವಾಗಿ ನಡೆಸಲಾದ ಲಾಕ್ ಡೌನ್ ನಿಂದ ಅನೇಕ ಜನತೆ ಕೆಲಸ ವಿಲ್ಲದೆ ಊಟಕ್ಕೆ ಕಷ್ಟ ಪಡುವ ಪರಿಸ್ಥಿತಿಯು ಎದುರಾಗಿದೆ ಈ ಹಿನ್ನೆಲೆ ಮತ ಕ್ಷೇತ್ರದ ನಾಲತವಾಡ ಪಟ್ಟಣದಲ್ಲಿ ಸಿ ಎಸ್ ನಾಡಗೌಡ ಅಪ್ಪಾಜೀ ಮಾಜಿ ಸಚಿವರ ಅಭಿಮಾನಿ ಬಳಗದವರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ
ಹೃದಯವಂತರಾದ ರಾಯನಗೌಡ ತಾತರೆಡ್ಡಿ ಗುತ್ತಿಗೆದಾರರು ಅವರು ತಾಲ್ಲೂಕಿನ ಕಪನೂರ, ಬಂಗಾರಗುಂಡ, ಹಾಗೂ ಅಯ್ಯನಗುಡಿ, ಗ್ರಾಮದಲ್ಲಿ ನೆಲಿಸಿರುವ ಮೀನುಗಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ:ಪ್ರಧಾನಮಂತ್ರಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಮತ್ತು ಮಾನ್ಯ ಶಾಸಕರಾದ ಎ ಎಸ್ ಪಾಟಿಲ್ ನಡಹಳ್ಳಿ ಅವರ ಮಾರ್ಗದರ್ಶನದಂತೆ ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ ಮಹಿಳಾ ಮಂಡಳದ ಅಧ್ಯಕ್ಷರಾದ ಗೌರಮ್ಮ ಹುನಗುಂದ ಹಾಗೂ SC ಮೊರ್ಚಾದ ಮಹಿಳಾ ಅದ್ಯಕ್ಷರಾದ ನಿಲಮ್ಮ ಚಲವಾದಿ ಅವರು ಸ್ವತಃ ತಯಾರಿಸಿದ ಮಾಸ್ಕಗಳನ್ನು ಇಂದು ಮುದ್ದೇಬಿಹಾಳ ಪುರಸಭೆಯ 100 ಕ್ಕೊ ಹೆಚ್ಚು ಪೌರ ಕಾರ್ಮಿಕರಿಗೆ ವಿತರಿಸುವ ಮೂಲಕ ಕರೋನ ವಿರುದ್ಧ ಹೋರಾಡುತ್ತಿರುವವರ ನಿಮ್ಮ ಜೊತೆಗೆ ನಾವು ಇದ್ದೆವೆ ಎಂಬ ಸಂದೇಶ ನಿಡಿದರು.
ಈ ಸಂಧರ್ಭದಲ್ಲಿ ಪ್ರಮುಖರಾದ ರಾಜು ಬಳ್ಳೊಳ್ಳಿ,ರಾಜು ಮ್ಯಾಗೇರಿ, ಸಂಜೀವ ಬಾಗೇವಾಡಿ, ಹಣಮಂತ ಕಲ್ಯಾಣಿ, ಶೇಖರ ಢವಳಗಿ, ರಾಜಶೇಖರ ಹೊಳಿ ಹಾಗೂ ಪುನೀತ್ ಹಿಪ್ಪರಗಿ ಇದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಸಮೀಪದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿಯವರು ಶುಕ್ರವಾರ ದಂದು ಘಟಪ್ರಭಾ ಪಿ ಜಿ ಮಲ್ಲಾಪುರ ಗ್ರಾಮದಲ್ಲಿ ವಾಸವಿರುವ ಸಹಸ್ರಾರು ಅಲೆಮಾರಿ ಜನ ಹಾಗೂ ಬಡವರಿಗೆ ಊಟಕ್ಕೆ ಪಾಯಸಾ, ರೊಟ್ಟಿ, ಅನ್ನ ಸಾಂಬಾರು ಹಾಲು ಕಾಯಿಪಲ್ಲೆ ಸೇರಿದಂತೆ ಊಟದ ವ್ಯವಸ್ಥೆ ಮಾಡಿದರು.
ಲಾಕ್ ಡೌನ್ ಜಾರಿಯಾದಾಗಿನಿಂದಲೂ ದಿನಾಲು ಸಾವಿರಾರು ಜನರಿಗೆ ಅನ್ನದಾಸೋಹ ನಡಿಸುತ್ತಿದ್ದಾರೆ. ಲಾಕ್ ಡೌನ್ ಇರುವದರಿಂದ ಎಷ್ಟೋ ಅಲೆಮಾರಿ ಜನರು, ಬಡವರು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದ್ದು. ಮನುಷ್ಯನ ಜೀವನದಲ್ಲಿ ಯಾವದು ಶಾಶ್ವತವಲ್ಲ ನಾವು ಮಾಡಿದ ದಾನ ಧರ್ಮ ಶಾಶ್ವತ ಎಂಬುದು ಸಮಾಜಕ್ಕೆ ತೋರಿಸಿಕೊಟ್ಟು ಹಸಿವುನ್ನು ನಿಗಿಸಿ ಹಸಿದವರಿಗೆ ಅನ್ನದಾಸೋಹವನ್ನು ಸ್ವಂತ ಮಠದಿಂದಲೇ ಅಡುಗೆಯನ್ನು ಮಾಡಿಸಿ ಕೊರೋನಾ ವೈರಸ್ ರೋಗ ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ಸಾವಿರಾರು ಪೊಲೀಸ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ,ಆರೋಗ್ಯ ಇಲಾಖೆಯವರಿಗೆ, ಕಂದಾಯ ಇಲಾಖೆ, ಪತ್ರಕರ್ತರಿಗೆ,ಹಾಗೂ ಕೊರೋನಾ ಸೈನಿಕರಿಗೆ, ಅಲೆಮಾರಿ, ಬಡವ ಜನರಿದ್ದಲ್ಲಿಯೇ ಬಂದು ದಾಸೋಹ ನಡಿಸುತ್ತಿದ್ದಾರೆ. ಅನ್ನದಾನಕ್ಕೆ ಹೆಸರು ವಾಸಿಯಾದ ದಾನೇಶ್ವರ ದಾಸೋಹ ಕಾರ್ಯ ನಿಜಕ್ಕೂ ಮೆಚ್ಚುವಂತಹದು. ದಾಸೋಹ ಸೇವೆಯಲ್ಲಿ ಬಂಡಿಗಣಿ ಮಠದ ಭಕ್ತರು ಭಕ್ತಿ ಸೇವೆಯನ್ನು ಮಾಡುತ್ತಿದ್ದಾರೆ.
ವರದಿ:ಮುರಗೆಪ್ಪ ಮಾಲಗಾರ
ರಾಯಲ್ ಟಿವಿ ನ್ಯೂಸ್ ಬೆಳಗಾವಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064
ವಿಜಯಪುರ:ಜಿಲ್ಲೆಯಲ್ಲಿ ಕೊರೋನ ಕೇಸ್ ನ ಪಾಸಿಟಿವ್ ಪ್ರಕರಣಗಳು ಇವತ್ತು ಒಂದೇ ದಿನದಲ್ಲಿ 3 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಜಿಲ್ಲೆಯಲ್ಲಿ 10 ಜನರಿಗೆ ಈ ಸೋಂಕು ದೃಢಪಟ್ಟಿದೆ.ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾದಂತಾಗಿದೆ.
ಕರೋನ ರೋಗಿ ರೋಗಿ 221 ರ ಸಂಪರ್ಕದಲ್ಲಿದ್ದ 28 ವರ್ಷದ ಮಹಿಳೆಗೂ ಹಾಗೂ 33 ವರ್ಷದ ಮಹಿಳೆ ಮತ್ತು 26 ವರ್ಷದ ಪುರುಷನಿಗೆ ಈ ಸೋಂಕು ಪಾಸಿಟಿವ್ ಇದೆ ಎಂದು ಸಂಜೆ ಖಚಿತವಾಗಿದೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 129 ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರು ಶ್ರೀ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಇದೇ ಸಮಯದಲ್ಲಿ ಕಾಗವಾಡ ಪಟ್ಟಣದಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಸುಮಾರು 2000 ಬಡಜನರಿಗೆ, ದಿನನಿತ್ಯ ಉಪಯೋಗವಾಗುವ ತರಕಾರಿಗಳನ್ನು ವಿತರಿಸಿ ಕರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಕ್ಷೇತ್ರದ ಸಾರ್ವಜನಿಕರಿಗೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿದ್ದು ಯಾರು ಮನೆಯಿಂದ ಹೊರಗೆ ಬರದ ಹಾಗೆ ಸಹಕರಿಸಿ, ಸರ್ಕಾರದ ಆಜ್ಞೆಯನ್ನು ತಪ್ಪದೆ ಪಾಲಿಸಿ ನಾವು ಹಾಗೂ ನಮ್ಮ ಸರಕಾರ ಸದಾ ನಿಮ್ಮೊಂದಿಗಿದೆ ಎಂದರು.
ಈ ಸಂದರ್ಭದಲ್ಲಿ ಕಾಗವಾಡ ತಹಸಿಲ್ದಾರ್ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಶ್ರೀದೇವಿ ಚೌಗಲಾ, ತಾಲೂಕು ಪಂಚಾಯತ ಸದಸ್ಯರಾದ ದೇವನೆ, ಕಾಗವಾಡ ತಾಲ್ಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಾದ ಇರನಗೌಡಾ ಎಗನಗೌಡರ, ಕಾಗವಾಡ ಪಿಎಸ್ಐ ಹನುಮಂತ ಶಿರಹಟ್ಟಿ, ಗ್ರಾಮದ ಹಿರಿಯರಾದ ಸುಭಾಸ ಕಠಾರೆ, ಶೀತಲಗೌಡಾ ಪಾಟೀಲ, ಭರತ ಪಾಟೀಲ, ಬಾಳು ಕಾಂಬಳೆ, ಪ್ರಕಾಶ ಚೌಗಲೆ, ಸಚಿನ ಕವಟಗೆ, ವಿಠ್ಠಲ ಪವಾರ, ರಾಜು ವಡ್ಡರ, ಶ್ರೀ ವಿಲಾಸ ಚಿಪ್ಪರಗೆ, ದೀಪಕ ಕಾಂಬಳೆ, ಪ್ರಕಾಶ ದೊಂಡಾರೆ, ವಿಜಯ ಸಂಬಾಳೆ, ಜೀತು ಕಾಂಬಳೆ, ಹಾಗೂ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥರಿದ್ದರು.
ವರದಿ:ಸಚೀನ ಕಾಂಬಳೆ
ರಾಯಲ್ ಟಿವಿ ನ್ಯೂಸ್ ಬೆಳಗಾವಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ನವದೆಹಲಿ:ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ ತಿಂಗಳ 3 ನೇ ತಾರೀಖಿನ ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಸಾವು-ನೋವು ಸಂಭವಿಸುತ್ತಿರುವ ಹಿನ್ನೆಲೆ ದೇಶದ ಜನತೆ ಆರ್ಥಿಕತೆಯನ್ನು ಲೆಕ್ಕಿ ಸಬಾರದು ದೇಶದ ಜನತೆಯ ಸಹಕಾರದಿಂದ 21ದಿನಗಳ ಲಾಕ್ ಡೌನ್ ಯಶಸ್ವಿ ಆಗಿದೆ ಅದಕ್ಕೆ ನಿಮ್ಮ ಸಹಕಾರವೇ ಕಾರಣ ಹಾಗೆ ಇನ್ನೂ ಮೂರು ವಾರಗಳ ಕಾಲ ನಿಮ್ಮ ಸಹಕಾರ ಇರಲಿ ಎಂದು ಹೇಳಿದರು. ರೈತರಿಗೆ ವಿನಾಯಿತಿ ನೀಡಲಾಗಿದೆ.ಇನ್ನೂ ಕೊರೋನ ಸೋಂಕು ಹರಡುವ ಕಡೆಗೆ ಕಠೋರವಾದ ನಿಯಮ ಜಾರಿಯಲ್ಲಿರುತ್ತದೆ. ಇನ್ನು ಮೂರು ವಾರಗಳ ಕಾಲ ದೇಶದ ಜನತೆ ಸಹಕಾರವನ್ನು ನೀಡಿ ಮನೆಯಲ್ಲಿ ಇರಿ ಈ ಸೋಂಕು ನಿಯಂತ್ರಣಕ್ಕೆ ಕೈಜೋಡಿಸಿ.ಎಂದು ಪ್ರಧಾನ ಮಂತ್ರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಯಲ್ ಟಿವಿ ನ್ಯೂಸ್ ನವದೆಹಲಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೋವಿಡ್-19 ಸಲುವಾಗಿ ಹಂಚಲು ಬಿಜೆಪಿ ಮಹಿಳಾ ಮಂಡಲದ ವತಿಯಿಂದ ಮಾಸ್ಕ ತಯಾರಿಸಿದರು.
ಈ ಸಂದರ್ಭದಲ್ಲಿ ಹಾಲಿ ಮಹಿಳಾ ಘಟಕದ ಅದ್ಯಕ್ಷರಾದ ಗೌರಮ್ಮ ಹುನಗುಂದ ಸ್ವತ: ಮಾಸ್ಕ ತಯಾರಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತೆಯರಾದ ಸರಸ್ವತಿ ಪಿರಾಪೂರ ಅವರು ಜೊತೆಗೂಡಿ ಮಾಸ್ಕ್ ಗಳನ್ನು ತೈಯಾರಿಸಿ ಅವಶ್ಯ ಇರುವ ಕಡೆ ಮಾಸ್ಕಗಳನ್ನು ವಿತರಣೆ ಮಾಡಿದರು. ಹಾಗೂ ಹಲವೆಡೆ ಮಹಿಳಾ ಮಂಡಲದ ಕಾರ್ಯಕರ್ತೆಯರು ಸಹ ಮಾಸ್ಕ್ ತೈಯಾರಿಸುತ್ತಿದ್ದಾರೆ.ಈ ಮಹಿಳೆಯರಿಂದ ಮಾಸ್ಕ ತಯಾರಿಸಿ ಕೋವಿಡ್-19 ವಿರುದ್ಧ ಶ್ರಮಿಸುತ್ತಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064