ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ತುಮಕೂರ : ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಲಿಂಗೈಕ್ಯ ಕಲಿಯುಗ ದೇವ ಡಾ.ಶಿವಕುಮಾರ ಗದ್ದುಗೆಯ ದರ್ಶನವನ್ನು ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಠದಲ್ಲಿ ಇರುವಂತಹ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪಾಕಿಸ್ತಾನದಿಂದ ಸಿಖ್ಖರು, ಜೈನರು, ಪಾರ್ಸಿಗಳು ತೊಂದರೆಗೆ ಒಳಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಅಂತವರ ರಕ್ಷಣೆಗೆ ಮುಂದಾದರೆ ಕೆಲವರು ಅದರ ವಿರುದ್ಧ ಹೋರಾಡುತ್ತಿದ್ದಾರೆ. ಸಂಕಷ್ಟದಲ್ಲಿದ್ದವರನ್ನು ರಕ್ಷಿಸುವುದು ಸರಿ ಅಲ್ಲವೇ ಎಂದು ಪ್ರಶ್ನಿಸಿದರು.

ಇತ್ತಿಚಿನ ದಿನಗಳಲ್ಲಿ ಧರ್ಮದ ಆಧಾರಾದ ಮೇಲೆ ದಬ್ಬಾಳಿಕೆಗೆ ಗುರಿಯಾದವರನ್ನು ರಕ್ಷಿಸಲು ನಾವು ಕಾನೂನು ತಂದಿದ್ದೇವೆ. ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಂತವರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಆದರೆ ಕೆಲವರು ಸಂಸತ್ ನಿರ್ಣಯದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಪಕ್ಷದವರು ಸಂಸತ್ ನಿರ್ಣಗಳ ವಿರುದ್ಧ ದೇಶದಲ್ಲಿ ಹೋರಾಟ, ಪ್ರತಿಭಟನೆಗಳನ್ನು ಮಾಡುವ ಬದಲು ಪಾಕಿಸ್ತಾನದಲ್ಲಿ ದಬ್ಬಾಳಿಕೆ ಮಾಡುತ್ತಿರುವವರ ವಿರುದ್ಧ ಹೋರಾಡಿ. ಪಾಕ್ ನ 70 ವರ್ಷಾಗಳ ಕರಾಳ ಕಾರ್ಯದ ವಿರುದ್ಧ ಹೋರಾಡಿ. ವಿಪಕ್ಷಗಳು ದೇಶದ ಜನರ ದಾರಿಯನ್ನು ತಪ್ಪಿಸುವ ಕಾರ್ಯ ಮಾಡುತ್ತ ಪ್ರತಿಭಟನೆಗಳಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತ ಬರುತ್ತಿವೆ ಅದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಭಾರತದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನಮಟ್ಟವನ್ನು ಅಭಿವೃದ್ಧಿ ಪಡಿಸುವತ್ತ ನಮ್ಮ ಸರ್ಕಾರ ಕೆಲಸಮಾಡುತ್ತಿದೆ.ಅಲ್ಲದೆ ದೇಶದಲ್ಲಿ ಆರೋಗ್ಯ ವಿಮೆ, ಗ್ಯಾಸ್ ಸಂಪರ್ಕ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಬಡವರಿಗೆ ನೀಡುವುದು ನಮ್ಮ ಸರ್ಕಾರದ ಕೆಲಸವಾಗಿದೆ. ಇದರಲ್ಲಿ ಜನರು ಬದಲಾವಣೆಗಾಗಿ ನನಗೆ ಆಶೀರ್ವಾದಿಸಿದ್ದಾರೆ. ದೇಶದಲ್ಲಿನ ಬಡತನವನ್ನು ನಿರ್ಮೂಲನೆ ಮಾಡೋನ. ಭಯೋತ್ಪಾದನೆ ವಿರುದ್ಧ ಭಾರತದ ನೀತಿಯಲ್ಲಿ ಬದಲಾವಣೆಯಾಗಿದೆ ಎಂಬುದಕ್ಕೆ ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಸಾಕ್ಷಿಯಾಗಿದೆ. ರಾಮ ಮಂದಿರ ನಿರ್ಮಿಸುವುದಕ್ಕೆ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದವರು ಹಾಗೂ ಅವರ ಸಹಚರರು ಸಂವಿಧಾನಾದ ವಿರುದ್ಧವಾಗಿದ್ದಾರೆ.

ಈ ಹಿಂದೆ 2014 ರಲ್ಲಿ ಸ್ವಚ್ಛ ಭಾರತ ಮಾಡುವುದರಲ್ಲಿ ನೀವು ಭಾಗಿಗಳಾಗಿ ಎಂದು ವಿನಂತಿಸಿದ್ದೇವು.ಆದರೆ ಈಗ ಬಯಲು ಮುಕ್ತ ಶೌಚಾಲಯದತ್ತ ಪಣ ತೊಟ್ಟಿದ್ದು 21ನೇ ಶತಮಾನದ 3 ನೇ ದಶಕದಲ್ಲಿ ನವಭಾರತ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕುತ್ತಿದ್ದೇವೆ ಹಾಗೂ ಪ್ರಕೃತಿ, ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಮುಕ್ತ ಮಾಡೋಣ ಈಗಾಗಲೇ ಅದು ಜಾರಿಯಲ್ಲಿದೆ ಅದಕ್ಕೆ ಸಹಕರಿಸಿ. ನೀರು ಅತ್ಯಂತ ಅವಶ್ಯವಾದದ್ದು ಅದನ್ನು ಸಂರಕ್ಷಣೆಗೆ ಜನಾ ಜಾಗೃತಿ ಆಂದೋಲನ ಮಾಡೋಣ ವೆಂದು ಹೇಳಿದರು.

ಆದರೆ ನಾನು ಸಿದ್ದಗಂಗಾ ಮಠಕ್ಕೆ ಅಗಮಿಸಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಆದರೆ ಇಲ್ಲಿ ಪರಮಪೂಜ್ಯ ಶಿವಕುಮಾರ ಸ್ವಾಮಿಗಳು ಇಲ್ಲ ಎಂಬ ಮೌನ ಆವರಿಸುತ್ತಿದೆ. ಶ್ರೀಗಳ ಬೌತಿಕ ಅನುಪಸ್ಥಿತಿ ನಮ್ಮನ್ನು ಕಾಡುತ್ತಿದೆ ಎಂದರು. ನಂತರ ಇಲ್ಲಿರುವ ವಸ್ತುಸಂಗ್ರಹಾಲಯಕ್ಕೆ ಶಿಲನ್ಯಾಸ ಮಾಡುವುದು ಅದು ನನ್ನ ಸೌಭಾಗ್ಯ ಎಂದ ಪ್ರಧಾನ ಮಂತ್ರಿ ಮೋದಿಜೀ ಹೇಳಿದರು. ಕರ್ನಾಟಕದ ಇನ್ನೊಬ್ಬ ಸಂತ ಪೇಜಾವರ ಶ್ರೀಗಳು ನಮ್ಮನ್ನು ಅಗಲಿರುವುದು ಅತೀವ್ರವಾದ ದು:ಖ ವೆನಿಸುತ್ತಿದೆ ಎಂದು ಮಾತನಾಡಿದರು.

-ರಾಯಲ್ ಟಿವಿ ನ್ಯೂಸ್

ಮಕ್ಕಳೊಂದಿಗೆ ಹೊಸ ವರ್ಷಾಚರಣೆ ಮಾಡಿದ ಶಾಲಾ ಶಿಕ್ಷಕರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಎಮ್ ಎಸ್ ಗಡ್ಡೆ ಕುಡಚಿ ಗ್ರಾಮಿನ ಭಾಗದ ಶಾಲೆಯಲ್ಲಿ ಶಿಕ್ಷಕಿ ರೇಖಾ ಗುಪ್ತೆ ನೇತೃತ್ವದಲ್ಲಿ ಹಾಗೂ ಶಿಕ್ಷಕರಾದ ಪಟೇಲ್ ಸೇರಿಕೊಂಡು ಮಕ್ಕಳ ಜೊತೆ ವಿಶೇಷವಾಗಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾಚರಣೆ ಆಚರಣೆ ಮಾಡಿದರು.ಮಕ್ಕಳು ಶಿಕ್ಷಕರೊಂದಿಗೆ ಬೆರೆತು ಸಂತೋಷದಿಂದ ಆಚರಿಸಿದರು.

ವರದಿ:ಸಾಗರ ಉಕ್ಕಲಿ

ಬಾಲ ಮಂದಿರ ಮಕ್ಕಳೊಂದಿಗೆ ಹೊಸ ವರ್ಷಾಚರಣೆ ಮಾಡಿದ ಜಿಲ್ಲಾ ಅಧಿಕಾರಿ ವೈ ಎಸ್ ಪಾಟೀಲ

ವಿಜಯಪುರ ಜಿಲ್ಲೆಯ ಸುದ್ದಿ:

ವಿಜಯಪುರ: ಮಾನ್ಯ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಹಾಗೂ ಉಪವಿಭಾಗಾಧಿಕಾರಿಗಳಾದ ಮಾನ್ಯ ಸೋಮಲಿಂಗ ಗೆಣ್ಣೂರು ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಬಾಲಮಂದಿರಗಳ 142 ಮಕ್ಕಳೊಂದಿಗೆ ಹೊಸ ವರ್ಷಾಚರಣೆ ಮಾಡಿ ಸಂಭ್ರಮಿಸಿದರು. ಅಲ್ಲದೇ ಕಂಪ್ಯೂಟರ್ ಲ್ಯಾಬ್ ಹಾಗೂ ಗ್ರಂಥಾಲಯ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಬಾಲ ಮಂದಿರಗಳಿಗೆ ದೇಣಿಗೆ ನೀಡಿದ ದಾನಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸನ್ಮಾನಿಸಿದರು.
ಜಿಲ್ಲಾಧಿಕಾರಿಗಳು ತಮ್ಮ ಕೆಲಸದ ಒತ್ತಡದಲ್ಲೂ 2 ಘಂಟೆಗಳವರೆಗೆ ಕಾಲ ಬಾಲಮಂದಿರದ ಮಕ್ಕಳ ಜೊತೆ ಕಾಲಕಳೆದು ಅವರ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ ಎಸ ಪಾಟೀಲ,ಜಿಲ್ಲಾ ಉಪವಿಭಾಗಾಧಿಕಾರಿ ಸೋಮಲಿಂಗ ಗೆನ್ನೂರ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ನಿರ್ಮಲಾ ಸುರಪುರ, ಹಾಗೂ ಆಡಳಿತ ಮಂಡಳಿ ಬಾಲ ಮಂದಿರದ ಮಕ್ಕಳು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ಮದುವೆಯ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿಗಳು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದು ವೃತ್ತಿಯಲ್ಲಿ ಇಂಜಿನಿಯರ್ ಆದ ಗಂಗಾಮತಸ್ಥ ಸಮಾಜದ ಬಸವರಾಜ ಬಾರಕೇರ ಹಾಗೂ ರೇಖಾ ಬಾರಕೇರ ದಂಪತಿಗಳ ಇಪ್ಪತ್ತ ಐದನೇಯ ವರ್ಷದ ಮದುವೆಯ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು.

ಆಚಾರ್ಯ ಶ್ರೀನಿವಾಸ ಗಜೇಂದ್ರಗಡ ಅವರ ಮಾರ್ಗದರ್ಶನದಲ್ಲಿ ಮಂತ್ರ ಪಟನೆಯ ಮೂಲಕ ದಂಪತಿಗಳಿಗೆ ಆಶಿರ್ವದಿಸಿದರು.

ದಂಪತಿಗಳು ಪರಸ್ಪರ ಹೂವಿನ ಹಾರವನ್ನು ಹಾಕಿಕೊಳ್ಳುವ ಮೂಲಕ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.ಹಾಗೆಯೇ ಜಾನ್ಹವೀ ಪುಟಾಣಿಯ ಐದನೇಯ ವರ್ಷದ ಹುಟ್ಟು ಹಬ್ಬವನ್ನು ಈ ಸಂದರ್ಭದಲ್ಲಿ ಆಚರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹನುಮಂತ ಅಂಬಿಗೇರ, ನಿವೃತ್ತ ಪಿಎಸ್ಐ ಲಕ್ಕಪ್ಪ ಕೋಲಕಾರ, ಶಿವಪ್ಪ ಚಿಮ್ಮಲಗಿ,ನಿವೃತ್ತ ಎ ಎಸ ಐ ನಿಂಗಪ್ಪ ಕಟ್ಟಿಮನಿ, ಬಸವರಾಜ ರಾಮವಾಡಗಿ, ಸಂಗಪ್ಪ ಪ್ಯಾಟಿ,ಯಲ್ಲಪ್ಪ ಅಂಬಿಗೇರ,ಸೇರಿದಂತೆ ಮಹಿಳೆಯರು ಹಾಗೂ ಹಲವು ಸಮಾಜದ ಬಾಂಧವರು ಉಪಸ್ಥಿತರಿದ್ದರು. ಅಲ್ಲದೇ ಬಾರಕೇರ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತ ಸ್ನೇಹಿತ ವಲಯದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವದಿಸಿದರು.

ವರದಿ:ಸಾಗರ ಉಕ್ಕಲಿ

ಮದುವೆಯ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿಗಳು

ಮದುವೆಯ ವಾರ್ಷಿಕೋತ್ಸವದ ಸಂಭ್ರಮ:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದು ವೃತ್ತಿಯಲ್ಲಿ ಇಂಜಿನಿಯರ್ ಆದ ಗಂಗಾಮತಸ್ಥ ಸಮಾಜದ ಬಸವರಾಜ ಬಾರಕೇರ ಹಾಗೂ ರೇಖಾ ಬಾರಕೇರ ದಂಪತಿಗಳ ಇಪ್ಪತ್ತ ಐದನೇಯ ವರ್ಷದ ಮದುವೆಯ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು.

ಆಚಾರ್ಯ ಶ್ರೀನಿವಾಸ ಗಜೇಂದ್ರಗಡ ಅವರ ಮಾರ್ಗದರ್ಶನದಲ್ಲಿ ಮಂತ್ರ ಪಟನೆಯ ಮೂಲಕ ದಂಪತಿಗಳಿಗೆ ಆಶಿರ್ವದಿಸಿದರು.

ದಂಪತಿಗಳು ಪರಸ್ಪರ ಹೂವಿನ ಹಾರವನ್ನು ಹಾಕಿಕೊಳ್ಳುವ ಮೂಲಕ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.ಹಾಗೆಯೇ ಜಾನ್ಹವೀ ಪುಟಾಣಿಯ ಐದನೇಯ ವರ್ಷದ ಹುಟ್ಟು ಹಬ್ಬವನ್ನು ಈ ಸಂದರ್ಭದಲ್ಲಿ ಆಚರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹನುಮಂತ ಅಂಬಿಗೇರ, ನಿವೃತ್ತ ಪಿಎಸ್ಐ ಲಕ್ಕಪ್ಪ ಕೋಲಕಾರ, ಶಿವಪ್ಪ ಚಿಮ್ಮಲಗಿ,ನಿವೃತ್ತ ಎ ಎಸ ಐ ನಿಂಗಪ್ಪ ಕಟ್ಟಿಮನಿ, ಬಸವರಾಜ ರಾಮವಾಡಗಿ, ಸಂಗಪ್ಪ ಪ್ಯಾಟಿ,ಯಲ್ಲಪ್ಪ ಅಂಬಿಗೇರ,ಸೇರಿದಂತೆ ಮಹಿಳೆಯರು ಹಾಗೂ ಹಲವು ಸಮಾಜದ ಬಾಂಧವರು ಉಪಸ್ಥಿತರಿದ್ದರು. ಅಲ್ಲದೇ ಬಾರಕೇರ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತ ಸ್ನೇಹಿತ ವಲಯದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವದಿಸಿದರು.

ವರದಿ:ಸಾಗರ ಉಕ್ಕಲಿ

ಮದುವೆಯ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿಗಳು

ಮದುವೆಯ ವಾರ್ಷಿಕೋತ್ಸವದ ಸಂಭ್ರಮ:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದು ವೃತ್ತಿಯಲ್ಲಿ ಇಂಜಿನಿಯರ್ ಆದ ಗಂಗಾಮತಸ್ಥ ಸಮಾಜದ ಬಸವರಾಜ ಬಾರಕೇರ ಹಾಗೂ ರೇಖಾ ಬಾರಕೇರ ದಂಪತಿಗಳ ಇಪ್ಪತ್ತ ಐದನೇಯ ವರ್ಷದ ಮದುವೆಯ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು.

ಆಚಾರ್ಯ ಶ್ರೀನಿವಾಸ ಗಜೇಂದ್ರಗಡ ಅವರ ಮಾರ್ಗದರ್ಶನದಲ್ಲಿ ಮಂತ್ರ ಪಟನೆಯ ಮೂಲಕ ದಂಪತಿಗಳಿಗೆ ಆಶಿರ್ವದಿಸಿದರು.

ದಂಪತಿಗಳು ಪರಸ್ಪರ ಹೂವಿನ ಹಾರವನ್ನು ಹಾಕಿಕೊಳ್ಳುವ ಮೂಲಕ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.ಹಾಗೆಯೇ ಜಾನ್ಹವೀ ಪುಟಾಣಿಯ ಐದನೇಯ ವರ್ಷದ ಹುಟ್ಟು ಹಬ್ಬವನ್ನು ಈ ಸಂದರ್ಭದಲ್ಲಿ ಆಚರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹನುಮಂತ ಅಂಬಿಗೇರ, ನಿವೃತ್ತ ಪಿಎಸ್ಐ ಲಕ್ಕಪ್ಪ ಕೋಲಕಾರ, ಶಿವಪ್ಪ ಚಿಮ್ಮಲಗಿ,ನಿವೃತ್ತ ಎ ಎಸ ಐ ನಿಂಗಪ್ಪ ಕಟ್ಟಿಮನಿ, ಬಸವರಾಜ ರಾಮವಾಡಗಿ, ಸಂಗಪ್ಪ ಪ್ಯಾಟಿ,ಯಲ್ಲಪ್ಪ ಅಂಬಿಗೇರ,ಸೇರಿದಂತೆ ಮಹಿಳೆಯರು ಹಾಗೂ ಹಲವು ಸಮಾಜದ ಬಾಂಧವರು ಉಪಸ್ಥಿತರಿದ್ದರು. ಅಲ್ಲದೇ ಬಾರಕೇರ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತ ಸ್ನೇಹಿತ ವಲಯದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವದಿಸಿದರು.

ವರದಿ:ಸಾಗರ ಉಕ್ಕಲಿ

ನೊಂದ ಶಿಕ್ಷಕಿಯಿಂದ ದಯಾಮರಣ ಕೋರಿ ರಾಜ್ಯಪಾಲರಗಿ ಮನವಿ

ನೊಂದ ಶಿಕ್ಷಕಿ ಭೂದೇವಿ ಹುನಗುಂದ ದಯಾಮರಣ ಕೋರಿ ರಾಜ್ಯಪಾಲರಿಗೆ ಅರ್ಜಿ:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯಲ್ಲಿರುವ ಶ್ರೀ ಬಸವ ಬಾಲ ಭಾರತಿ ಪ್ರಾಥಮಿಕ ಶಾಲೆ ಢವಳಗಿ ಯಲ್ಲಿ ಸುಮಾರು 11 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ಭೂದೇವಿ ಹುನಗುಂದ ಇವರನ್ನು ಹೊರತು ಪಡಿಸಿ ಆಡಳಿತ ಮಂಡಳಿಯವರ ಸಂಬಂಧಿಕನನ್ನು ಶಿಕ್ಷಕರನ್ನಾಗಿ ಸೇರಿಸಿಕೊಂಡು ಅನುದಾನ ಪಡೆದಿದ್ದು ನೊಂದ ಶಿಕ್ಷಕಿ ಸದರೀ ಶಾಲೆಯ ಅನುಮೋದನೆಯನ್ನು ರದ್ದುಪಡಿಸಬೇಕೆಂದು ಸುಮಾರು ಅರ್ಜಿಗಳನ್ನು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಕಾರಣ ರಾಜ್ಯಪಾಲರಿಗೆ ದಯಾಮಾರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸನ್ 2005 ರಿಂದ ಸುಮಾರು ವರ್ಷಗಳ ಕಾಲ ಶಾಲೆ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟಿದ್ದು ಶಿಕ್ಷಣ ಇಲಾಖೆಗೆ ಲಂಚನೀಡಿ ಶಾಲೆಗೆ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ. ಅನುದಾನ ತಡೆಹಿಡಿಯುವಂತೆ ಜನೆವರಿ 2019 ರಲ್ಲಿ ಧರಣೀಸತ್ಯಾಗ್ರವನ್ನು ಕೂಡ ನಡೆಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮಲ್ಲಿ ದಾಖಲೆಗಳು ಇಲ್ಲ ಎಂದು ಹೇಳಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಿಕ್ಷಕಿಯ ರುಜು ಇರುವ ಅಂಕಪಟ್ಟಿಯನ್ನು ಒದಗಿದರೂ ಯಾವುದೇ ಕ್ರಮ ಕೈಗೊಳ್ಳದೇ ಶಾಲೆಯ ಶಿಕ್ಷಕರ ಪ್ರಥಮ ವೇತನವನ್ನೂ ಬಿಡುಗಡೆ ಮಾಡಿದ್ದು ಪ್ರಭಾವೀ ಆಡಳಿತ ಮಂಡಳಿಯವರ ವಿರುದ್ದ ಎಷ್ಟೇ ದೂರುಗಳನ್ನು ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕಾರಣ ನಮ್ಮ ನೋವಿಗೆ ಕಷ್ಟಕ್ಕೆ ಇಲ್ಲಿ ಯಾರು ಸ್ಪಂದಿಸುತ್ತಿಲ್ಲ ಆದ್ದರಿಂದ ದಯಾಮರಣ ಕರುಣಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವರದಿ:ಸಾಗರ ಉಕ್ಕಲಿ

ಚಾಲಕನ ಮಗ ಕೆಎಎಸ್ ಅಧಿಕಾರಿ ಪ್ರಯತ್ನಕ್ಕೆ ಸಿಕ್ಕ ಫಲ

ಚಾಲಕನ ಪುತ್ರ ಇಂದು ಎ.ಸಿ. ಹುದ್ದೆಗೆ ಆಯ್ಕೆ

ಚಿಕ್ಕೋಡಿ :

ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಅನ್ನುವದನ್ನ ಚಾಲಕನ‌ ಮಗ ಇಂದು ಸಾಧನೆ ಮಾಡುವುದರ ಮೂಲಕ ಆ ಗ್ರಾಮದ ಹೆಮ್ಮೆಯ ಜೊತೆಗೆ ತಂದೆ ತಾಯಿಯ ಗೌರವವನ್ನು ಹೆಚ್ಚಿಸಿದ್ದಾನೆ ಜಗದೀಶ ಅಡಹಳ್ಳಿ. ಈತ ಮಧ್ಯಮ ವರ್ಗದ ಶ್ರೀಕಾಂತ ಹಾಗೂ ಸುಮಿತ್ರಾ ಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ ಕಿರಿಯ ಪುತ್ರ. 28 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಗ್ರಾಮ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಜಗದೀಶ ಅಡಹಳ್ಳಿ ಅವರು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಜಗದೀಶ, ಶೇ80.06 ಅಂಕ ಗಳಿಸಿದ್ದರು. ಪಿಯುಸಿ ಅಥಣಿ ತಾಲ್ಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 89 ಅಂಕ ಪಡೆದಿದ್ದರು. ಪದವಿಯನ್ನು ಇಲ್ಲಿನ ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಶೇ 87 ಅಂಕಗಳೊಂದಿಗೆ ಪದಿಯಲ್ಲಿ ತೇರ್ಗಡೆಯಾಗಿ 2014 ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.

ಈಗ ಕೆಎಎಸ್ ಆಗಿರುವ ಜಗದೀಸ ಅವರ ಮನೆಗೆ ಗ್ರಾಮದ ಜನರು ಹಾಗೂ ವಿವಿಧ ಸಂಘಟನೆಗಳು ಬಂದು ಅವರಿಗೆ ಸತ್ಕಾರ ಮಾಡಿ ಅವರಿಗೆ ಶುಭಾಶಯ ಕೋರುತ್ತಿದ್ದು ಅವರ ಮನೆಯಲ್ಲಿ ಸಂತಸದ ಹಬ್ಬ ಮೂಡಿದೆ.

ಬಡವನಾಗಿ ಹುಟ್ಟಿದ ಜಗದೀಶ ಅವರು ತಂದೆ ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಿನ ಜಗದೀಶ ತನ್ನ ತಂದೆ ಶ್ರೀಕಾಂತ ಅವರ ಜೊತೆ ಕಾರ್ಖಾನೆಗೆ ಹೋದಾಗ 2013ರಲ್ಲಿ ವಿಧಾನಸಭೆ ಚುನಾವಣಾ ಕೆಲಸಕ್ಕೆ ತಂದೆ ಶ್ರೀಕಾಂತ ಚಾಲಕರಾಗಿ ನಿಯೋಜನೆಗೊಂಡಿದ್ದರು. ಆಗ ಐಎಎಸ್‌ ಅಧಿಕಾರಿಗಳು ಆಡುತ್ತಿದ್ದ ಮಾತುಗಳು ಅವರಿಗೆ ನೀಡುವ ಗೌರವ ನನಗೆ ಸ್ಫೂರ್ತಿ ನೀಡಿದವು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಪ್ರಯತ್ನ ಮಾಡಿದೆ ಆಗ ನನ್ನ ತಂದೆ ತಾಯಿ ದಿನನಿತ್ಯ ಕೂಲಿ ಮಾಡಿ ನನಗೆ ಓದಲು ಸಹಕಾರ ನೀಡಿದ್ದಾರೆ.

ನಾನು ಬಡವನಾಗಿರಬಹುದು ವಿದ್ಯೆ ಹಾಗೂ ಸತತ ಪ್ರಯತ್ನದಿಂದ ಏನಾದರೂ ಸಾಧಿಸಬಹುದು ಎನೊದಕ್ಕೆ ನಾನಾ ಉದಾಹರಣೆ. ಬಡವರು ಯಾರು ದೊಡ್ಡ ಹುದ್ದೆಗೆ ಹೋಗಬಾರದು ಎನ್ನುವ ಮಾತು ಯಾರಿಂದಲೂ ಬರಬಾರದು ಎಂದು ಕೆಎಎಸ್ ಓದುವ ಬಡ ಮಕ್ಕಳಿಗೆ ನಾನೆ ಉದಾಹರಣೆ ಎನ್ನುತ್ತಾರೆ ಜಗದೀಶ ಅಡಹಳ್ಳಿ.

– ಜಗದೀಶ ಅಡಹಳ್ಳಿ – ಕೆಎಎಸ್

2014ರಲ್ಲಿ ನವದೆಹಲಿಯಲ್ಲಿ ಐಎಎಸ್‌ ಕೋಚಿಂಗ್‌ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದ ಜಗದೀಶ, 5 ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನೂ ಬರೆದಿದ್ದಾರೆ. ಕೆಎಎಸ್‌ 2ನೇ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಐಎಎಸ್‌ ಪರೀಕ್ಷೆ ಎದುರಿಸಿದ ಅನುಭವವೂ ಇದಕ್ಕೆ ಸಹಾಯವಾಗಿದೆ.

ನನ್ನ ಮಗ ಕೆಎಎಸ್ ಹುದ್ದೆಗೆ ಆಯ್ಕೆಯಾಗಿದ್ದಾನೆ ನನಗೆ ತುಂಬಾ ಖುಷಿಯಾಗಿದೆ. ನಾನು ಒಬ್ಬ ಸಾಧಾರಣ ಚಾಲಕ ಈಗ ನನ್ನ ಮಗ ಕೆಎಎಸ್ ಅಧಿಕಾರಿ ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ಸಂತೋಷದ ವಿಷಯ ನಮ್ಮ ಕೃಷ್ಣಾ ಸಕ್ಕರೆ ಕಾರ್ಖಾನೆಯವರ ಸಲಹೆ ಪಡೆದುಕೊಂಡು ನಾನು ನನ್ನ ಮಗನಿಗೆ ವಿದ್ಯಾಭ್ಯಾಸ ನೀಡಿದ್ದೇನೆ ಈಗ ನಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದು ನಮ್ಮಗೆ ಹೆಮ್ಮೆಯ ವಿಷಯ ಅನ್ನುತ್ತಾರೆ ಜಗದೀಶ ಅವರ ತಂದೆ ಶ್ರೀಕಾಂತ

– ಶ್ರೀಕಾಂತ ಅಡಹಳ್ಳಿ – ಜಗದೀಶ ತಂದೆ.

ಜಗದೀಶನ ಪ್ರತಿಫಲಕ್ಕೆ ಇಂದು ನನ್ನ ಮಗನಿಗೆ ಪ್ರತಿಫಲ ಸಿಕ್ಕಿದೆ ಇಂದು ನಮ್ಮ ಅಡಹಳ್ಳಿ‌ ಮನೆತನದ ಗೌರವ ಹೆಚ್ಚಿಸಿದ್ದಾನೆ. ಆತ ಶಾಲೆ ಕಲಿಯಬೇಕೆದರೆ ಕಾಲಿನಲ್ಲಿ ಚಪ್ಪಲಿ ಇಲ್ಲದೇ ಸರಿಯಾದ ಉಡುಗೆಗಳಿಲ್ಲದ ಶಾಲೆ ಕಲೆತು ಇಂದು ಕೆಎಎಸ್ ಪಾಸ ಮಾಡಿ‌ದ್ದಾನೆ ನಮ್ಮ ಗೌರವ ಹೆಚ್ಚಿಸಿದ್ದಾನೆ ಎಂದು ಆಗದ ಸಂತೋಷ ಈಗ ನಮ್ಮಗಾಗಿದೆ ಎನ್ನುತ್ತಾಳೆ ಜಗದೀಶನ ತಾಯಿ ಸುಮಿತ್ರಾ

– ಸುಮಿತ್ರಾ – ಜಗದೀಶನ ತಾಯಿ

ಒಟ್ಟಾರೆಯಾಗಿ ಇಂದಿನ ಅಧುನಿಕ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಛಲವಿದ್ದರೆ ಸತತ ಓದು ಮತ್ತು ಪರಿಶ್ರಮ ನಮ್ಮ ಕನಸುಗಳನ್ನು ನನಸು ಮಾಡುವದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕೆ ಜಗದೀಶ ಅಡಹಳ್ಳಿ ಮಾದರಿಯಾಗಿದ್ದಾರೆ.

ಐಎಎಸ್ ಕೆಎಎಸ್ ಕನಸು ಕಾಣುತ್ತಿರುವ ಬಡ ಮಕ್ಕಳಿಗೆ ಇಂದು ಚಾಲಕನ ಮಗ ಮಾದರಿಯಾಗಿದ್ದು ದಿನವೂ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ಜಗದೀಶ ಈಗ ಇನ್ನಷ್ಟು ಬಡ ಮಕ್ಕಳು ಉತ್ತಮ ಹುದ್ದೆಗಳನ್ನು ಅಲಂಕರಿಸಿ ತಮ್ಮ ಉದಾತ್ತ ಕೊಡುಗೆಯನ್ನು ಸಮಾಜಕ್ಕೆ ನೀಡುವಂತಾಗಲಿ ಅನ್ನುವದು ನಮ್ಮ ಆಶಯ.

ವರದಿ:ಸಚೀನ ಕಾಂಬಳೆ

Design a site like this with WordPress.com
Get started