ಕಾಗವಾಡ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮೂರನೇ ಸುತ್ತಿನ ಎಣಿಕೆಯಲ್ಲಿ 14479 ಮತ ಪಡೆದಿದ್ದು ಇನ್ನೂ ಕಾಂಗ್ರೆಸ್ ನ ರಾಜು ಕಾಗೆ 9774 ಪಡೆಇದ್ದು. ಇನ್ನೂ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ 4705 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಥಣಿ
ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ 11033 ಮತಗಳನ್ನು ಪಡೆದಿದ್ದು ಇನ್ನೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಜಾನನ ಮಂಗಸೂಳಿ 5369 ಪಡೆದಿದ್ದು. ಇದರಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ 5884 ಮತಗಳ ಅಂತರದಿಂದ ಮುನ್ನಡೆ.
ಬಾಗಲಕೋಟ ಜನವರಿ 14-15, 2020 ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ನಡೆಯುವ ಜಾತ್ರೆಯ ನಿಮಿತ್ತ ಪೂಜ್ಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳು ಜಿಲ್ಲಾ ಪ್ರವಾಸ ಪ್ರಯುಕ್ತ ಪೂಜ್ಯರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಅನೇಕ ಪಟ್ಟಣಗಳಾದ ಮುದೋಳ, ಜಮಖಂಡಿ, ಬೀಳಗಿ, ಹುನಗುಂದ, ಬಾದಾಮಿ, ಬಾಗಲಕೋಟ ತಾಲ್ಲೂಕಿನ ಎಲ್ಲ ಸಮಾಜ ಭಾಂದವರು ಆಗಮಿಸಿ ಪೂಜ್ಯ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡರು. ಬರುವ ಜಾತ್ರೆಗೆ ಎಲ್ಲರು ತನು ಮನ ಧನದಿಂದ ಸೇವೆ ಸಲ್ಲಿಸುವುದಾಗಿ ಹೇಳಿದರು.
ಜನವರಿ 14-15, 2020 ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ನಡೆಯುವ ಜಾತ್ರೆಯ ನಿಮಿತ್ತ ಪೂಜ್ಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳು ಜಿಲ್ಲಾ ಪ್ರವಾಸ ಪ್ರಯುಕ್ತ ಪೂಜ್ಯರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಅನೇಕ ಪಟ್ಟಣಗಳಾದ ಮುದೋಳ, ಜಮಖಂಡಿ, ಬೀಳಗಿ, ಹುನಗುಂದ, ಬಾದಾಮಿ, ಬಾಗಲಕೋಟ ತಾಲ್ಲೂಕಿನ ಎಲ್ಲ ಸಮಾಜ ಭಾಂದವರು ಆಗಮಿಸಿ ಪೂಜ್ಯ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡರು. ಬರುವ ಜಾತ್ರೆಗೆ ಎಲ್ಲರು ತನು ಮನ ಧನದಿಂದ ಸೇವೆ ಸಲ್ಲಿಸುವುದಾಗಿ ಹೇಳಿದರು.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಇದೆ ಡಿಸೆಂಬರ್ 14 ರಂದು ನಡೆಯುವ ರಾಷ್ಟ್ರೀಯ ಮೀನುಗಾರರ ಬೃಹತ್ ಸ್ವಾಭಿಮಾನಿ ವಿಕಾಸ ಸಮಾವೇಶದ ಪ್ರಯುಕ್ತ ದಿನಾಂಕ 11-12-2019 ಬುಧವಾರ ರಂದು ಸಮಯ ಬೆಳಿಗ್ಗೆ 11:30 ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ಮಾಡಲು ನಿರ್ಧರಿಸಿದ್ದಾರೆ.
ಕಾರಣ ದಯಮಾಡಿ ಎಲ್ಲ ಸಮಾಜದ ಬಾಂಧವರು ಮುಂಚಿತವಾಗಿಯೇ ಅಂದರೆ ಸರಿಯಾಗಿ ಬೆಳಿಗ್ಗೆ 10 : 30 ರ ಕ್ಕೆ ಪ್ರೆಸ್ ಕ್ಲಬ್ ಗೆ ಆಗಮಿಸಬೇಕೆಂದು ಗಣ್ಯಮಾನ್ಯರಲ್ಲಿ ವಿನಂತಿ ಮಾಡಿದ್ದಾರೆ.
ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸುವವರು
ಪರಮಪೂಜ್ಯ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು
ನಾಡೋಜ. ಜಿ.ಶಂಕರ್ ಜೀ.
ಅನಂದ್ ಸಿ ಕುಂದರ್.
ಬಾಬುರಾವ್ ಚಿಂಚನಸೂರ್.
ಲಾಲಾಜಿ ಆರ್ ಮೆಂಡನ್.
ಪ್ರಮೋದ್ ಮದ್ವರಾಜ್.
ಬಿ.ನಾರಾಯಣ್ ರಾವ್.
ತಿಪ್ಪಣ್ಣ ಕಮಕನೂರ್
ಎನ್. ರವಿಕುಮಾರ್
ಯು.ಆರ್.ಸಭಾಪತಿ
ಡಾ:ದೇವಿಪ್ರಸಾದ್
ಪ್ರೊ: ವಸಂತಮ್ಮ.
ಬಿ.ಮೌಲಾಲಿ.
ಎ.ಎಚ್.ಪ್ರಶಾಂತ್
ಬಾಬುರಾವ್ ಜಮಾದಾರ್.
ಲಿಂಗರಾಜು.
ಜೆ.ಟಿ.ವೆಂಕಟೇಶ್
ಸುಮಿತ್ರಾ ಸಿದ್ದಪ್ಪ.
ಭಾವನಾ,ರಾಮಣ್ಣ.
ಚೇತನ್. ಜಿ. ಮೊಗವೀರ
ಬಿ.ಡಿ.ರವಿಕುಮಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಬಿ.ಡಿ.ರವಿಕುಮಾರ ರಾಮೀಸಂ – ಕರ್ನಾಟಕ ಬೆಂಗಳೂರು ಅವರು ತಿಳಿಸಿದ್ದಾರೆ.
ಕಲಬುರ್ಗಿ ನಗರಕ್ಕೆ ಶ್ರೀ ಅಂಬಿಗರ ಚೌಡಯ್ಯನ ಪೀಠಾಧಿಪತಿಗಳಾದ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ರವರು ಹಾವೇರಿ ಜಿಲ್ಲೆಯ( ಚೌಡದಾನಪುರ )ನರಸೀಪುರದಲ್ಲಿ ನಡೆಯಲಿರುವ ಚೌಡಯ್ಯನವರ ಜಾತ್ರೆ ಹಾಗೂ ವಿವಿಧ ಕಾರ್ಯಕ್ರಮದ ಸಮಾವೇಶ ಇದೆ ಜನೆವರಿ 14 ಮತ್ತು 15 ನೆಯ ತಾರೀಖಿನಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರು ಮತ್ತು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ತಿಪ್ಪಣಪ್ಪ ಕಮಕನೂರ ರವರು ಸಭೆಯ ಅಧ್ಯಕ್ಷ ವಯಿಸಿ ಮಾತನಾಡಿದರು ಮತ್ತು ಸಮಾಜದ ಹಿರಿಯ ಮುಖಂಡರುಗಳು ಯುವಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಲಬುರ್ಗಿ ನಗರಕ್ಕೆ ಶ್ರೀ ಅಂಬಿಗರ ಚೌಡಯ್ಯನ ಪೀಠಾಧಿಪತಿಗಳಾದ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ರವರು ಹಾವೇರಿ ಜಿಲ್ಲೆಯ( ಚೌಡದಾನಪುರ )ನರಸೀಪುರದಲ್ಲಿ ನಡೆಯಲಿರುವ ಚೌಡಯ್ಯನವರ ಜಾತ್ರೆ ಹಾಗೂ ವಿವಿಧ ಕಾರ್ಯಕ್ರಮದ ಸಮಾವೇಶ ಇದೆ ಜನೆವರಿ 14 ಮತ್ತು 15 ನೆಯ ತಾರೀಖಿನಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರು ಮತ್ತು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ತಿಪ್ಪಣಪ್ಪ ಕಮಕನೂರ ರವರು ಸಭೆಯ ಅಧ್ಯಕ್ಷ ವಯಿಸಿ ಮಾತನಾಡಿದರು ಮತ್ತು ಸಮಾಜದ ಹಿರಿಯ ಮುಖಂಡರುಗಳು ಯುವಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಆಡಳಿತ ಮುದ್ದೇಬಿಹಾಳ ಇವರ ನೇತೃತ್ವದಲ್ಲಿ ಬಸರಕೋಡ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನೆರವೇರಿತು, ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆತ್ಮೀಯರು ಜಿಲ್ಲಾ ಉಪವಿಭಾಗ ಅಧಿಕಾರಿ ಸೋಮಲಿಂಗ ಗೆಣ್ಣೂರ ಅಧಿಕಾರಿ ಅವರಿಗೆ ಗ್ರಾಮದ ಪರವಾಗಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ನಾಗರಾಜ ತಂಗಡಗಿ ಪಿಡಿಓ ಹಿರೇಮಠ ಹಾಗೂ ಊರಿನ ಮುಖಂಡರು ಇದ್ದರು.
ಡಿಸಿ ಎಮ್ ಮತ್ತು ರಾಜು ಕಾಗೆ ಜುಗಲ್-ಬಂದೀ,ನಗೆಯ ಕಡಲಲ್ಲಿ ತೇಲಿದ ಸಾರ್ವಜನಿಕರು
ಕೃಷಿ ಪತ್ತಿನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಡಿಸಿಎಮ್ ಲಕ್ಷ್ಮಣ ಸವದಿ ತಮ್ಮ ಪಕ್ಷ ತೊರೆದಿರುವ ರಾಜು ಕಾಗೆಗೆ ಟಾಂಗ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಕಾಗವಾಡ ಮತಕ್ಷೇತ್ರದ ಅಬ್ಯರ್ಥಿ ಆಗಿ ಬಿಜೆಪಿಯ ರಾಜು ಕಾಗೆಗೆ ಸೆಡ್ಡು ಹೊಡೆದಿದ್ದ ರಾಜು ಕಾಗೆಗೆ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ ಡಿಸಿಎಮ್ ಲಕ್ಷ್ಮಣ ಸವದಿ ಮಾತು ಸದ್ಯ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದ್ದು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರಾಜು ಕಾಗೆಗೆ ನೀನು ಸಹಕಾರಿ ರಂಗಕ್ಕೆ ಬರಬಬೇಡ.ಬೆಕಿದ್ದರೆ ಮೂರು ವರ್ಷದ ಬಳಿಕ ಇತ್ತ ಮಹೇಶ ಕುಮಠಳ್ಳಿ ಅತ್ತ ಶ್ರೀಮಂತ ಪಾಟೀಲ ಇಬ್ಬರೂ ಇರ್ತಾರೆ ಅವರ ಜೊತೆ ನಿನಗೂ ಒಂದು ಹುದ್ದೆ ತೆಗೆದಿರಿಸುತ್ತೆನೆ ಬಂದು ಬಿಡು..ಎಂದು ಡಿಸಿಎಮ್ ಲಕ್ಷ್ಮಣ ಸವದಿ ಹೇಳುತ್ತಿದ್ದಂತೆಯೇ ಸಭೆಯಲ್ಲಿ ನಗೆಯ ಅಲೆ ಎದ್ದಿದೆ ಇದೇ ವೇಳೆ ರಾಜು ಕಾಗೆ ಆರಿಸಿ ಬರುವದಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ ಲಕ್ಷ್ಮಣ ಸವದಿ ರಾಜಕಾರಣದಲ್ಲಿ ಯಾವುದು ಶಾಸ್ವತವಲ್ಲ ನಾವು ಒಂದೆ ಕುಟುಂಬದ ಸದಸ್ಯರಿದ್ದಂತೆ.ಮೂರು ವರ್ಷ ಮನೆಯಲ್ಲಿ ಇರು ನಂತರ ನಿನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ಒಂದು ಸ್ಥಾನ ಕೊಡ್ತಿನಿ ಅಂದಿದ್ದಾರೆ.
ಲಕ್ಷ್ಮಣ ಸವದಿ ಮಾತನಾಡಿ:
ಇದಕ್ಕೆ ಪ್ರತಿಯಾಗಿ ಮತದಾರರು ನನಗೆ ತಾಕೀತು ಮಾಡಿ ಮತ ನೀಡಿದ್ದಾರೆ ಎಂದು ರಾಜು ಕಾಗೆ ಉತ್ತರಿಸಿದ್ದಾರೆ. ರಾಜು ಕಾಗೆ ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಅಬ್ಯರ್ಥಿಯಾಗಿದ್ದು ಕಳೆದ ಬಾರಿ ಬಿಜೆಪಿಯಿಂದ ಪರಾಜಿತ ಮಾಜಿ ಶಾಸಕರೂ ಹೌದು ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆದು
ಕಾಂಗ್ರೆಸ್ ನಿಂದ ಸ್ಪರ್ದಿಸಿರುವ ರಾಜು ಕಾಗೆಗೆ ಬಹಿರಂಗವಾಗಿ ಲಕ್ಷ್ಮಣ ಸವದಿ ಆಹ್ವಾನ ನಿಡಿದ್ದು ಸದ್ಯ ಸಾರ್ವಜನಿಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅತಿ ಘೋರವಾದ ರೈತರಿಗೆ ಮೋಸ ಮಾಡಿದಂತ ತಾಲೂಕು ಅಧಿಕಾರಿಗಳು ತೋಟಗಾರಿಕೆ ಬಗ್ಗೆ ರೈತರಿಗೆ ಮಾಹಿತಿ ಹೇಳದೆ ಇರುವುದು ಬಹುದೊಡ್ಡ ದುರಂತ ಎಂದು ಹೇಳಬಹುದು. ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದು ಕೆಲಸವನ್ನು ದೊರೆತಿಲ್ಲ ಉಪಯೋಗ ಕೂಡ ಆಗಿಲ್ಲ ಎಂದು ಹೇಳಬಹುದು.
ಕುದುರಿ ಸಾಲವಾಡಗಿ ತೋಟಗಾರಿಕೆ ಇಲಾಖೆಯಲ್ಲಿ ಎರಡು ವರ್ಷ ಆದರೂ ಕೂಡ ಬಾರದ ಅಧಿಕಾರಿಗಳು ಮತ್ತು ರೈತರಿಗೆ ತೋಟಗಾರಿಕೆ ಬಗ್ಗೆ ಮಾಹಿತಿ ಕೊಡದೆ ರೈತರಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮುಂದೇಟು ಹಾಕಿದ್ದಾರೆ ಎಂದು ಹೇಳಬಹುದು. ಔಷಧಿಗಳು ಉಪಯೋಗಕ್ಕೆ ಬಾರದ ರೀತಿಯಲ್ಲಿ ಹಾಳಾಗಿದ್ದು ರೈತರಿಗೆ ದೊಡ್ಡ ಆತಂಕ ಉಂಟು ಮಾಡುವಂತಹ ರೀತಿಯಲ್ಲಿ ತೋಟಗಾರಿಕೆ ಇಲಾಖೆ ಕುದರಿ ಸಾಲವಾಡಗಿ ಗ್ರಾಮದಲ್ಲಿ ಬಂದು ವಿಚಾರಣೆ ಮಾಡಬಹುದು.