ನಿಧನ ವಾರ್ತೆ

ವಿಜಯಪುರ ಜಿಲ್ಲೆಯ ಸುದ್ದಿ

ಮುದ್ದೇಬಿಹಾಳ ತಾಲ್ಲೂಕಿನ ಹಡಗಲಿ ಗ್ರಾಮದ ಬಸಮ್ಮಗೌಡತಿ.ದ್ಯಾಮನಗೌಡ.ಪಾಟೀಲ .ಸಾ.ಹಡಗಲಿ ಇವರು ಇಂದು 18,12.2019 ರಂದು ಮೃತಪಟ್ಟಿದ್ದಾರೆ ಅವರಿಗೆ 87 ವರ್ಷ ವಯಸ್ಸಾಗಿತ್ತು. 4 ಜನ ಗಂಡು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬೆಂಕಿ ತಗುಲಿ ಕಬ್ಬು ಬೆಳೆ ನಾಶ

ಅಥಣಿ ತಾಲೂಕಿನ ವರದಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಕಬ್ಬು ಬೆಳೆ ನಾಶವಾಗಿದೆ.

ಚಂದ್ರಕಲಾ ವಿಠ್ಠಲ ಮಾಚಕನೂರ ಎಂಬುವರಿಗೆ ಸೇರಿದ ಜಮೀನಿನ ರಿ.ಸ.ನಂ-98/4 ನಾಲ್ಕು ಎಕರೆ ಕಬ್ಬು ಬೆಂಕಿಗಾಹುತಿಯಾಗಿ ಸುಮಾರು 6 (ಆರು) ಲಕ್ಷ ರೂಪಾಯಿ ಹಾನಿ ಸಂಬವಿಸಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ತಾಲೂಕಾ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:ಸಚೀನ ಕಾಂಬಳೆ

ಮತದಾರರ ಪಟ್ಟಿ ಪ್ರಕಟ

ಬೆಳಗಾವಿ ಜಿಲ್ಲೆಯ ಅಥಣಿ ವರದಿ

ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಯಿತು.

ಸಪ್ತಸಾಗರ ಗ್ರಾಮದ ಮತದಾನ ಕೋಣೆ ಸಂಖ್ಯೆ 190,191,192 ಈ ವರ್ಷದ ಸೇರ್ಪಡೆಗೊಂಡ ಮತದಾರರ ಹೆಸರನ್ನು ಸೇರ್ಪಡಿಸಿ ಪಟ್ಟಿ ಪ್ರಕಟಿಸಲಾಯಿತು.

ಈ ವೇಳೆ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ ಕೆಲ ಮೃತರಾದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು ಹೊಸ ಮತದಾರರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಪ್ರಕಟಗೊಳಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಬಿ ಎಲ್ ಓ ಮಹಾಂತೇಶ ಘೂಳಪ್ಪನವರ,ಎ.ಕೆ.ಮುಲ್ಲಾ ಗ್ರಾಮ ಸೇವಕರಾದ ರಾವಸಾಬ ಮಾದರ ಉಪಸ್ಥಿತರಿದ್ದರು.

ವರದಿ:ಸಚೀನ ಕಾಂಬಳೆ

ಅಂದರ ಬಾಳಲ್ಲಿ ಬೆಳಕಾದ ಸಾಹಿತಿ ರವೀಂದ್ರ ಹೋಳ್ಕರ

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಸುದ್ದಿ:

ಹಾರೂಗೇರಿ:ಪಟ್ಟಣದಲ್ಲಿ ಇಂದು ದಿನಾಂಕ 15-12-2019 ರಂದು ಸಮಾಜ ಸೇವಕರು ಹಾಗೂ ಸಾಹಿತಿಗಳಾದ ಶ್ರೀಯುತ ರವೀಂದ್ರ ಹೋಳ್ಕರ ಅವರು ಬರೆದಿರುವ ಮೋಡಗಳ ಮರೆಯಲ್ಲಿ ಪುಸ್ತಕ ಮಾರಾಟ ಮಾಡಿದ ಹಾಗೂ ದೇಣಿಗೆಯಿಂದ ಬಂದಂತಹ 1 ಲಕ್ಷ ರೂಪಾಯಿ ಹಣವನ್ನು ಸಮಾಜಮುಖಿ ಸೇವೆಯಾರ್ಥ ಅಂದರಿಗೆ ದಾನವಾಗಿ ನೀಡಿದ್ದಾರೆ.ರವೀಂದ್ರ ಹೋಳ್ಕರ ಅವರ ಆತ್ಮೀಯ ಸ್ನೇಹಿತರು ಹಾಗೂ ಗುರುಹಿರಿಯರ ಸಮ್ಮುಖದಲ್ಲಿ ಹಾರೂಗೇರಿ ಪಟ್ಟಣದ ಅಂದ ಅಣ್ಣ-ತಂಗಿಯಾದ ರವಿ ನಾವಿ ಹಾಗೂ ಶೋಭಾ ನಾವಿ ಅವರಿಗೆ ಜೀವನಕ್ಕೆ ಉಪಯೋಗವಾಗಲೇಂದು ಕೊಟ್ಟರು. ಈ ಸಂದರ್ಭದಲ್ಲಿ ಅನೇಕ ಜನರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ- ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಅವರಿಗೆ ಮೊನ್ನೆಯದಿನ ಅಧಿಕ ರಕ್ತದೊತ್ತಡ ದಿಂದ ಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.ಇಂದು ಪರಮ ಪೂಜ್ಯ ಶ್ರೀ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆರೋಗ್ಯವನ್ನು ವಿಚಾರಿಸಿ, ಅವರು ಬೇಗ ಗುಣಮುಖರಾಗಿ ಬರಲಿ ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುದ್ದಿ

ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಮೃತ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ 16ನೇ ವಾರ್ಡನಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಕಿಶೋರ(8)ತಂದೆ ಗಡ್ಡಿವೀರೇಶ ಮೃತಪಟ್ಫಿದ್ದಾನೆ.

ಬಾಲಕ ತಿಂಗಳಿಂದ ವಿಪರೀತವಾಗಿ ಜ್ವರದಿಂದ ಬಳಲುತಿದ್ದು.ಸ್ಥಳೀಯ ಹಾಗೂ ಹೊಸಪೇಟೆ.ಬಳ್ಳಾರಿ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ.ತಿಂಗಳಾದರೂ ಛೇತರಿಸಿಕೊಳ್ಳದ ಹಿನ್ನಲೆಯಲ್ಲಿ ಹಲವು ದಿನಗಳ ಹಿಂದೆಯೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ವಿಪರೀತ ಜ್ವರ ಹಾಗೂ ಅತಿಸಾರ ಬೇದಿಯಿಂದ ಬಳಲುತಿದ್ದ.ಡೆಂಗ್ಯೂ ಜ್ವರದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಬಾಲಕ ತೀರಾ ಅಸ್ವಸ್ಥ ನಾಗಿದ್ದನು.

ಕಾರಣ ಬಾಲಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಚಿಕಿತ್ಸೆಯಿಂದ ಛೇತರಿಸಿಕೊಳ್ಳದ ಬಾಲಕ ಕಿಶೋರ ಶನಿವಾರದಂದು ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ವರದಿ: ವೃಷಭೇಂದ್ರ ಕೂಡ್ಲಿಗಿ

ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಮಾಡು ಇಲ್ಲವೇ ಮಡಿ ಹೋರಾಟ

ಪಿಂಚಣಿಗಾಗಿ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹೋರಾಟ

ತಾಲ್ಲೂಕು ಕೇಂದ್ರಗಳಲ್ಲಿ ಮಾನ್ಯ ತಹಶೀಲ್ದಾರ್ ರವರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಅಂತಿಮ ಮನವಿ ಪತ್ರದೊಂದಿಗೆ ಗಡುವು ನೀಡುವ ಹೋರಾಟ ದಿನಾಂಕ 21-12-2019 ರ ಶನಿವಾರದಂದು.

ಇದಕ್ಕೆ ಸರ್ಕಾರ ಸ್ಪಂದಿಸಿ, ಜನೇವರಿ 9ನೇ ತಾರೀಕಿನೊಳಗೆ ಪಿಂಚಣಿ ಸೌಲಭ್ಯ ನೀಡದಿದ್ದಲ್ಲಿ ಜನೇವರಿ 10 ರಿಂದ “ಅಂತಿಮ ಮಾಡು ಇಲ್ಲವೇ ಮಡಿ ಹೋರಾಟ” ಬೆಂಗಳೂರಿನಲ್ಲಿ.

ದಿನಾಂಕ:1-4-2006 ರ ನಂತರ ನಿಯಮಾನುಸಾರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ನೌಕರರಿಗೆ NPS ಅಥವಾ OPS ಎರಡೂ ಸೌಲಭ್ಯಗಳು ಇಲ್ಲ ನಾವು 15-20 ವರ್ಷಗಳ ಕಾಲ ವಿದ್ಯಾಬ್ಯಾಸ ಮಾಡಿ, ಸಂಬಳದ ಜೊತೆ ಪಿಂಚಣಿ ಇದೆ ಅನ್ನೋ ಕಾರಣಕ್ಕಾಗಿಯೇ ಅನುದಾನಿತ ಸಂಸ್ಥೆಗಳಲ್ಲಿ ಸೇವೆಗೆ ಸೇರಿರುವುದು. ಪಿಂಚಣಿ ನಮ್ಮ ಹಕ್ಕು.

ಹಿಂದೆ ಪಿಂಚಣಿ ಯನ್ನು ಸರ್ಕಾರವೇ ನೀಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಸರ್ಕಾರಗಳೇ ಪಿಂಚಣಿ ನೀಡುತ್ತಿವೆ. ಈಗಾಗಲೇ ಅನೇಕರು ಬರಿಗೈಯಲ್ಲಿ ನಿವೃತ್ತಿ ಆಗಿದ್ದಾರೆ. ಕೆಲವರು ಅಕಾಲಿಕ ಮರಣವನ್ನೂ ಹೊಂದಿದ್ದಾರೆ. *ನಾಳೆ ನಾವೆಲ್ಲರೂ ಬರಿಗೈಯಲ್ಲಿ ನಿವೃತ್ತರಾಗಿ ಕೊರಗುವುದು ಬೇಡ. ಎಲ್ಲರೂ ಕೈಜೋಡಿಸಿ ಹೋರಾಡಿದರೆ ಗೆಲುವು ಸಾಧ್ಯ. ತಾತ್ಸರ ಬಿಡಿ, ಸ್ವಯಂ ಪ್ರೇರಣೆಯಿಂದ ತಮ್ಮ ತಮ್ಮ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ರೂಪಿಸಿ ಪಾಲ್ಗೊಳ್ಳಿ ಎಂದು ಹೇಳಿದ್ದಾರೆ.

ಶ್ರೀಕೃಷ್ಣ ವಿ ಮಾಗಣಗೇರಿ ರಾಜ್ಯ ಗೌರವಾಧ್ಯಕ್ಷರು

9845138299

ಜಿ. ಹನುಮಂತಪ್ಪ ರಾಜ್ಯಾಧ್ಯಕ್ಷರು

9611135225

ಶಶಿಧರ ಸಿ. ಎಂ ರಾಜ್ಯ ಕಾರ್ಯಾಧ್ಯಕ್ಷರು

9845803774

ಮುತ್ತುರಾಜ್ ಮತ್ತಿಕೊಪ್ಪ. _ರಾಜ್ಯ ಪ್ರಧಾನ ಕಾರ್ಯದರ್ಶಿಗಳು

8904342531

ಬಿ. ಜಿ. ಕೊರಗ _ರಾಜ್ಯ ಕೋಶಾಧ್ಯಕ್ಷರು_

7259530924

ವಿರುಪಾಕ್ಷಪ್ಪ ಮಂತ್ರೋಡಿ ರಾಜ್ಯ ಸಂಚಾಲಕರು

9741566565

ಮಂಜುನಾಥ್ ಬತ್ತದ ರಾಜ್ಯ ಸಹ ಸಂಚಾಲಕರು 9964121863

ರಾಜ್ಯ ಉಪಾಧ್ಯಕ್ಷರು

1) ಶ್ರೀ ಬಿ. ಎಸ್ ಉಮೇಶ್ (ಬೆಂಗಳೂರು ದಕ್ಷಿಣ) 9740715756
2) ಶ್ರೀ ಪಂಪಾಪತೆಪ್ಪ (ರಾಯಚೂರು) 8550852774
3) ಶ್ರೀ ಸಿ. ಡಿ ರವಿ (ತುಮಕೂರು) 9972001810
4) ಈರಣ್ಣ ಹಾದಿಮನಿ (ಗದಗ) 9916890404
5) ಅಜಮೀರ್ ನಂದಾಪೂರ (ಕೊಪ್ಪಳ) 9449705672
6) ಚಂದಪ್ಪ ಯಾದವ್ (ಯಾದಗಿರಿ) 9972559930
7) ಗಣೇಶ್ ಶಟ್ಟಿಗಾರ (ಉಡುಪಿ) 9964713838
8) ಪುಟ್ಟಲಿಂಗೇಗೌಡರು (ಹಾಸನ) 9880731496

ರಾಜ್ಯ ಸಹ ಕಾರ್ಯದರ್ಶಿಗಳು.

1) ವೆಂಕಟಾಚಲ (ಮಧುಗಿರಿ) 9902860746 2) ಗಿರೀಶ್ ಯಾದವಾಡ್ (ಚಿಕ್ಕೋಡಿ) 9008281109
3) ಝಡ್. ಎಂ ಖಾಜಿ. (ಗದಗ) 9448540346
4) ಪ್ರಭುಕುಮಾರ (ಕೊಡಗು) 9449763809
5) ಶಿವಣ್ಣ ಮಂಗಳ (ಮಂಡ್ಯ) 9036721000
6) ಶಿವಕುಮಾರ್ ಎಂ. ಎಲ್ (ಶಿವಮೊಗ್ಗ) 9743186047
7) ಕ್ಯಾನ್ಸರ್ ರಮೇಶ್ (ಮೈಸೂರು) 8197230626
8) ಸೋಮಣ್ಣ ಮುಡೆಣ್ಣನವರ (ಶಿರಸಿ) 9980959108
9) ವರದರಾಜ (ಬಳ್ಳಾರಿ) 7349759235
10) ಕೃಷ್ಣಮೂರ್ತಿ (ಬೆಂಗಳೂರು) 9845939312

ರಾಜ್ಯ ಸಂಘಟನಾ ಕಾರ್ಯದರ್ಶಿಗಳು

01) ಉಮೇಶ್ ಭಟ್ (ಕಾರವಾರ) 8197948421
02) ಎಸ್. ಕೆ. ಮಾಲಗಾಂವೆ (ಚಿಕ್ಕೋಡಿ) 9844330287
03) ನವೀನಕುಮಾರ ಎನ್. ಎಚ್ (ಹಾಸನ) 8861471611
04) ಪ್ರಕಾಶ್ ಎನ್. ಒ (ಚಿತ್ರದುರ್ಗ) 9902718341
05) ಮಲ್ಲಿಕಾರ್ಜುನ ಬಿರಾದಾರ (ಬಾಗಲಕೋಟೆ) 9902134398
06) ಬಸಯ್ಯ ಹಿರೇಮಠ (ವಿಜಯಪುರ) 9945422236
07) ಅಂತೆಪ್ಪ ಬಿರಾದಾರ (ಬೀದರ್) 9611868434
08) ಅಶೋಕ್ ನಾಯಕ (ಕೋಲಾರ) 8884373084
09) ಜಗದೀಶ್ (ದಕ್ಷಿಣ ಕನ್ನಡ) 9743289598
10) ದೃವ ಹೊಂಕಳದ (ಬೆಂಗಳೂರು ಉತ್ತರ) 9741423124
11) ಶಾಂತರಾಜು (ಚಾಮರಾಜನಗರ) 9986053008
12) ನಾಗರಾಜ್ ಎನ್. ಎಸ್ (ಚಿಕ್ಕಬಳ್ಳಾಪುರ) 9448320355

ರಾಜ್ಯ ಘಟಕದ ಮಹಿಳಾ ಪ್ರತಿನಿಧಿಗಳು

01) ಡಾ. ಸರ್ವಮಂಗಳ ಕುದರಿ (ಧಾರವಾಡ) 7411372556
02) ಶ್ರೀಮತಿ ಹೇಮಾ ಎ. ಕೆ (ಬೆಂಗಳೂರು) 9481902011
03) ಶ್ರೀಮತಿ ಸುಜಾತಾ (ಬೆಂಗಳೂರು) 9916995220
04) ಶ್ರೀಮತಿ ಶಾಂತಲಾದೇವಿ ಎಂ. (ದಾವಣಗೆರೆ) 9481360714
05) ಶ್ರೀಮತಿ ಸರೋಜಾ ಎಚ್ ಪೂಜಾರ (ದಕ್ಷಿಣ ಕನ್ನಡ) 9113268075

ವರದಿ:ಸಾಗರ ಉಕ್ಕಲಿ

ಜಿ.ಪಂಚಾಯತ ವ್ಯಾಪ್ತಿಯಲ್ಲಿನ ಉಚಿತ ಸರಬರಾಜು ಯೋಜನೆ ಅಡಿ ಉಪಕರಣಗಳನ್ನು ನೀಡಿದ ಜಿ.ಪ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ

ಸರ್ಕಾರದ ಸಹಯೋಗದಲ್ಲಿ ಉಪ ನಿರ್ದೇಶಕರು (ಖಾಗ್ರಾ) ಜಿ.ಪಂ ಕೈಗಾರಿಕಾ ವಿಭಾಗ ಇಲಾಖೆಯಲ್ಲಿ ಸನ್ 2018-19 ನೇ ಸಾಲಿನ ಉಚಿತ_ಉಪಕರಣಗಳ ಸರಬರಾಜು ಯೋಜನೆಯ ಅಡಿಯಲ್ಲಿ ಬಸರಕೋಡ ಜಿ.ಪಂ ವ್ಯಾಪ್ತಿಯಲ್ಲಿ ವಿವಿಧ ವೃತ್ತಿಯ ಕುಶಲ ಕರ್ಮಿಗಳಿಗೆ ಉಚಿತ ಉಪಕರಣಗಳನ್ನು ನೀಡಿದರು.

ವಿಜಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಪ್ರಭುಗೌಡ ಚ ದೇಸಾಯಿ ಅವರು ಇಂದು ಮುದ್ದೇಬಿಹಾಳದ ತಾಲ್ಲೂಕು ಪಂಚಾಯತ ನಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಶಿಕಾಂತ ಶಿವಪೂರೆ, ತಾಲೂಕಾ ಕೈಗಾರಿಕಾ ಅಧಿಕಾರಿಗಳಾದ ಎಸ್ ಎಸ್ ಸಜ್ಜನ, ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಎಮ್ ಡಿ ಕುಂಬಾರ, ಢವಳಗಿ ಗ್ರಾ.ಪಂ ಸದಸ್ಯರಾದ ಸುರೇಶ ಪಾಟೀಲ, ಪ್ರಕಾಶ ಹೂಗಾರ, ಆದೇಶ ಕೊಳೂರ ಬಿದರಕುಂದಿ ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ ವಿಜಯಪುರ

ರಾಷ್ಟ್ರೀಯ ಮೀನುಗಾರರ ಸಮಾವೇಶಕ್ಕೆ ಚಿತ್ರನಟಿ ಹಾಗೂ ಸಮಾಜದವರಾದ ಭಾವನಾ ಅವರಿಗೆ ಆಹ್ವಾನ

ರಾಜ್ಯ ಪ್ರಶಸ್ತಿ ವಿಜೇತೆ ಖ್ಯಾತ ಚಿತ್ರನಟಿ ಭಾವನಾ ರಾಷ್ಟ್ರೀಯ ಮೀನುಗಾರರ ಸಮಾವೇಶಕ್ಕೆ ಆಗಮಿಸಲಿದ್ದಾರೆ.

ಚಿತ್ರ ತಾರೆ ಭಾವನಾ ಮೀನುಗಾರರ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಲಕ್ಷಾಂತರ

ಅಭಿಮಾನಿಗಳನ್ನು ಹೊಂದಿದಂತಹ ಖ್ಯಾತ ಚಿತ್ರನಟಿ ಭಾವನಾ ಅವರನ್ನು ರಾಜ್ಯ ರಾಮೀಸಂ ಅಧ್ಯಕ್ಷರಾದ ಡಾಕ್ಟರ್ ದೇವಿಪ್ರಸಾದ್ ,ಪ್ರಧಾನ ಕಾರ್ಯದರ್ಶಿ ಬಿ ಡಿ ರವಿಕುಮಾರ್ ,ಬೆಂಗಳೂರು ವಿಭಾಗದ ಉಪಾಧ್ಯಕ್ಷರಾದ ಜಯಲಕ್ಷ್ಮಿ ಪುತ್ರನ್ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಅಶೋಕ ಗಣಪುರ ,ಜಂಟಿ ಕಾರ್ಯದರ್ಶಿ ಸುಜಯ್ ನಾಗ್ ,ರಾಜ್ಯ ಮುಖಂಡರಾದ ಡಿಪಿ ಕೋಲಿ,ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ವೆಂಕಟೇಶ ಛಂದಳ್ಳಿ ಎಲ್ಲ ಸಮಾಜದ ಬಾಂಧವರು ಕೂಡಿಕೊಂಡು ಕಾರ್ಯಕ್ರಮ ಅಹ್ವಾನಿಸಿದರು.

ವರದಿ:ಸಾಗರ ಉಕ್ಕಲಿ

ಕಿತ್ತೂರು ಚೆನ್ನಮ್ಮ ಜಯಂತಿ ನಿಮಿತ್ತ ಪೂರ್ವ ಬಾವಿ ಸಭೆ

ವಿಜಯಪುರ: ಇಂದು ವಿಜಾಪುರ ನಗರದ ಹಳಕಟ್ಟಿ ಸಭಾಭವನದಲ್ಲಿ ಡಿಸೆಂಬರ್ 29 ರಂದು ನಡೆಯಲಿರುವ ಚೆನ್ನಮ್ಮಾಜಿಯ ವಿಜಯೋತ್ಸವದ ತಯಾರಿ ಕುರಿತು ಕಾರ್ಯಕ್ರಮ ಯಶಸ್ವಿಗೊಳಿಸಲು ಚರ್ಚಿಸಿದರು.

ಸಭೆಯಲ್ಲಿ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ:

1005 ತಾಯಂದಿರು ಬುತ್ತಿ ರೊಟ್ಟಿ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿದ್ದು ಮೆರವಣಿಗೆ ಸಿದ್ದೇಶ್ವರ ಗುಡಿಯಿಂದ ಪ್ರಾರಂಭವಾಗಿ ಐಶ್ವರ್ಯ ನಗರದ ಕಿತ್ತೂರರಾಣಿ ಚೆನ್ನಮ್ಮ ಸಭಾಭವನ ತಲುಪುವುದು ಕಾರ್ಯಕ್ರಮ ಕೇ ನಮ್ಮ ಸಮಾಜದ ಸಚಿವರು ಶಾಸಕರು ಸಂಸದರು ಮಾಜಿ ಶಾಸಕರು/ ಸಂಸದರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧ್ಯಕ್ಷರಾದ ಬಿ ಎಂ ಪಾಟೀಲ್ ಮಾತನಾಡಿ:

ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರು ಯುವ ಘಟಕ ಮಹಿಳಾ ಘಟಕ ನೌಕರರ ಘಟಕಗಳನ್ನು ಮಾಡಲಾಗಿದ್ದು ಸಮಾಜ ಬಂಧುಗಳು ತನು-ಮನ ಧನದಿಂದ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಬೇಕೆಂದು ಹೇಳಿದರು.

ಮುದ್ದೇಬಿಹಾಳ್ ತಾಲೂಕ ಅಧ್ಯಕ್ಷ ಸಿದ್ದರಾಜ್ ಹೊಳಿ ಮಾತನಾಡಿ:

ಪ್ರತಿ ತಾಲೂಕಿನಿಂದ 2000 ಜನ ಬರಲು ವಿನಂತಿಸಿ ಜಿಲ್ಲೆಯಿಂದ ಸುಮಾರು 10000 ಮೇಲ್ಪಟ್ಟು ಜನರನ್ನು ಸೇರಿಸಲು ಪ್ರಯತ್ನಿಸೋಣ ಎಂದರು ಹಾಗೂ ರಾಜ್ಯದ ನಮ್ಮ ಸಮಾಜದ ಎಲ್ಲ ಶಾಸಕರು ಸಂಸದರನ್ನು ಈ ಕಾರ್ಯಕ್ರಮಕ್ಕೆ ಅವಾನಿಸಬೇಕೆಂದು ಹಾಗೂ ಯುವಕರು ಕೇಂದ್ರ ಬಸ್ ನಿಲ್ದಾಣ ಮುಂದುಗಡೆ ಇರುವ ಕಿತ್ತೂರ ಚನ್ನಮ್ಮ ಸರ್ಕಲ್ ನಿಂದ ಬೈಕ್ ರಾಲಿಯನ್ನು ಬೆಳಗ್ಗೆ 9 ಗಂಟೆಗೆ ಶ್ರೀಗಳು ಚಾಲನೆ ನೀಡಿದ ನಂತರ ಗಾಂಧಿ ಸರ್ಕಲ್ ಮಾರ್ಗವಾಗಿ ಸಿದ್ದೇಶ್ವರ ಗುಡಿ ತಲುಪುವುದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ ನಗರದ ಯುವಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸಮಾಜದ ಆದರ್ಶ ರಾಜಕಾರಣಿಗಳಾದ ದಿವಂಗತ ಶ್ರೀಮಂತ ಜಗದೇವರಾವ್ ದೇಶಮುಖ್ ಮಾಜಿ ಸಚಿವರು ಹಾಗೂ ದಿವಂಗತ ಶ್ರೀ ಬಿ ಎಸ್ ಪಾಟೀಲ್ ಮನಗೂಳಿ ಮಾಜಿ ಸಚಿವರು ಇವರ ಹೆಸರಲ್ಲಿ ನಮ್ಮ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮಾಡಲು ನಿರ್ಧಾರ ಕೈಗೊಂಡರು.

ಈ ಸಭೆಯಲ್ಲಿ ವಿಜಯಪುರ ನಗರ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಹಗರಟಗಿ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರಾದ ಲತಾ ಬಿರಾದಾರ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಮು ದೇವರ ಇಂಡಿ ವಿಜಯಪುರ ನಗರ ಯುವ ಘಟಕದ ಅಧ್ಯಕ್ಷ ಸದಾಶಿವ ಅರಳಿಗಿಡದ ವಿಜಯಪುರ ನಗರ ಘಟಕದ ಅಧ್ಯಕ್ಷರಾದ ಎಸ್ ಆರ್ ಬುಕಾಣಿ ಮಾಜಿ ಅಧ್ಯಕ್ಷರಾದ ರಮೇಶ್ ಕಮತ್ ಹಾಗೂ ತಾಲೂಕಿನ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ತಾಯಂದಿರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ ವಿಜಯಪುರ

Design a site like this with WordPress.com
Get started