ಕರೋನ ವೈರಸ್ ಸೊಂಕು ಈಗಾಗಲೇ ದೇಶ ವ್ಯಾಪ್ತಿ ಹರಡಿ ನಮ್ಮ ರಾಜ್ಯಕ್ಕೂ ವ್ಯಾಪಿಸಿದೆ.ಇನ್ನೂ ಇದಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಿಲ್ಲ, ಆದಕಾರಣ ಜನರು ಭಯಭೀತರಾಗಿದ್ದಾರೆ.ಈ ಸೋಂಕು ತಗುಲದ ಹಾಗೆ ರಾಜ್ಯ ಸರ್ಕಾರ ಹೈ ಅಲರ್ಟ ಘೋಷಣೆ ಮಾಡಿದೆ,ರಾಜ್ಯಾದ್ಯಂತ ಪಟ್ಟಣಗಳು ಜನರಿಲ್ಲದೆ ಭಿಕೊ ಎನ್ನುತ್ತಿವೆ..ಈ ಕರೋನ ಸೋಂಕಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಆಯುರ್ವೇದ ಮೂಲಿಕೆಯಿಂದ ಸೊಂಕು ಬರದ ಹಾಗೆ ರಕ್ಷಣೆ ಪಡೆಯ ಬಹುದಾಗಿದೆ.
ಹೌದು ಸಮಾಜ ಸೇವಕಿ,ಹಾಗೂ ಬಾಜಪ ಪಕ್ಷದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುಖಂಡರಾಗಿರುವ ಕಾಶೀಬಾಯಿ ಎಸ್ ರಾಂಪೂರ ಅವರು ಕೆಲವೊಂದು ಔಷಧೀಯಗಳನ್ನು ಜನರಿಗೆ ನೀಡುತ್ತಿದ್ದಾರೆ ಅಲ್ಲದೆ ಮಾಹಿತಿಯನ್ನು ಕೂಡ ನೀಡುತ್ತಿದ್ದಾರೆ.
ಪಾರಿಜಾತದ ಹೂವನ್ನು ತಂದು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಈ ಸೋಂಕಿನಿಂದ ರಕ್ಷಣೆ ಪಡೆಯಬಹುದಾಗಿದೆ,ಈಗಾಗಲೇ ಅವರ ಹತ್ತಿರ ಇರುವ ಪಾರಿಜಾತ ಹೂವನ್ನು ಜನರಿಗೆ ನೀಡುತ್ತಿದ್ದಾರೆ.
ಹಾಗೆ ಹಾಲಿನಲ್ಲಿ ಅರಿಶಿನ ಪುಡಿ ಹಾಕಿಕೊಂಡು ಕುಡಿಯುವುದು, ಬೆಳ್ಳುಳ್ಳಿ ನೀರಿನಲ್ಲಿ ಕುದಿಸಿ ಅದರ ನೀರನ್ನು ಕುಡಿದರೆ ಈ ಸೋಂಕು ಬರದಂತೆ ತಡೆ ಬಹುದಾಗಿದೆ ಎಂದು ಶ್ರೀಮತಿ ಕಾಶೀಬಾಯಿ ಎಸ್ ರಾಂಪೂರ ನಮ್ಮೊಂದಿಗೆ ಸಂಪರ್ಕಿಸಿ ಜನರಿಗೆ ತಿಳಿಸುವಂತೆ ಹೇಳಿದ್ದಾರೆ.
ಒಟ್ಟಿನಲ್ಲಿ ಜನರು ಸೋಂಕು ತಗುಲದ ಹಾಗೆ ಇಂತಹ ಕ್ರಮಗಳನ್ನು ಅನುಸರಿಸಿ ಎಚ್ಚರಿಕೆಯಿಂದ ಇರಬೇಕಾಗಿದೆ ನಿರ್ಲಕ್ಷ್ಯ ಮಾಡಬೇಡಿ ಜೀವ ಅಮೂಲ್ಯವಾದದ್ದು.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಮುದ್ದೇಬಿಹಾಳ: ಶಿಕ್ಷಣವು ಇಂದಿನ ದಿನಮಾನಗಳಲ್ಲಿ ವ್ಯಾಪಾರೀಕರಣವಾಗುತ್ತಿದೆ. ಅದು ಆಗಬಾರದು ಶಿಕ್ಷಣವನ್ನು ನೀಡುವುದು ಒಂದು ದೊಡ್ಡ ಸಾಧನೆ. ಮತ್ತು ಒಂದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ, ಶಿಕ್ಷಕರಾದವರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉನ್ನತವಾದ ವಿದ್ಯಾಭ್ಯಾಸವನ್ನು ನೀಡಬೇಕು, ಅಲ್ಲದೆ ಆ ವಿದ್ಯಾರ್ಥಿಯನ್ನು ಉತ್ತಮ ನಾಗರಿಕನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಅಂಜುಮನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭಾರತಿ ಪಬ್ಲಿಕ್ ಶಾಲೆಯ ಎರಡನೆಯ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಉತ್ತಮ ವಿದ್ಯಾಭ್ಯಾಸವನ್ನು ಪಾಲಕರು ನೋಡುತ್ತಿರಬೇಕು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದೇವೆ ಎಂದು ಮನೆಯಲ್ಲಿ ಕುಳಿತರೆ ಸಾಲದು ಅವರ ಪ್ರತಿ ನಿತ್ಯ ಚಟುವಟಿಕೆಯನ್ನು ಗಮನಿಸುತ್ತಿರಬೇಕು ಎಂದು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ನೀಡಿದರು, ವರದಿ ವಾಚನವನ್ನು ಶಾಲೆಯ ಕಾರ್ಯಾಧ್ಯಕ್ಷ ವೀರೇಶ್ ಗುರುಮಠ ಹೇಳಿದರು. ಸಾನಿಧ್ಯವನ್ನು ಸಂಗಯ್ಯ ಹಾಲ್ ಗಂಗಾಧರಮಠ ವಹಿಸಿಕೊಂಡಿದ್ದರು. ಎಚ್ಎಲ್ ಕರಡ್ಡಿ ಶರಣಯ್ಯ ಬೂದಿಹಾಳ ಮಠ ನೂರಂದಯ್ಯ ಹಿರೇಮಠ್ ಸುರೇಶ್ ಹಡಪದ್ ಎಚ್ ಎ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾವಿತ್ರಿ ಬಿರಾದಾರ ಸ್ವಾಗತಿಸಿದರು, ಗೋಪಾಲ್ ಹೂಗಾರ್ ನಿರೂಪಿಸಿದರು, ವೀರೇಶ್ ಗುರುಮಠ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಭಾರತ ಸರ್ಕಾರದ ಭಾರತೀಯ ಸಂಚಾರ ನಿಗಮ ನಿಯಮಿತ ದೂರವಾಣಿ ಸಲಹಾ ಸಮಿತಿಯ ಸದಸ್ಯರಾಗಿ ವಿಜಯಪುರ ಜಿಲ್ಲಾ NSUI ಘಟಕದ ಅಧ್ಯಕ್ಷರಾದ
ಸದ್ದಾಂ ಕುಂಟೋಜಿ ಅವರನ್ನು ರಾಜ್ಯಸಭೆಯ ಸದಸ್ಯರಾದ ಬಿ.ಕೆ ಹರಿಪ್ರಸಾದ ಅವರ ಶಿಪಾರಸಿನ ಮೇರೆಗೆ ಭಾರತ ಸರ್ಕಾರದ ದೂರವಾಣಿ ಸಚಿವಾಲಯ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇವರ ನೇಮಕಕ್ಕೆ ಮಾಜಿ ಸಚಿವರುಗಾಳಾದ ಎಂ ಬಿ.ಪಾಟೀಲ್. ಸಿ.ಎಸ್ ನಾಡಗೌಡ್ರ. ಶಿವಾನಂದ ಪಾಟೀಲ್ .ಶಾಸಕ ಯಶವಂತರಾಯಗೌಡ ಪಾಟೀಲ್ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಜು ಆಲಗೂರ .ವಿಜಯಪುರ ಕಾಂಗ್ರೆಸ್ ಮುಖಂಡರು ಹಮೀದ್ ಮುಶ್ರಿಪ್.ಕಾಂಗ್ರೆಸ್ ಯುವ ಮುಖಂಡರಾದ ರಜತ ಉಳ್ಳಾಗಡ್ಡಿಮಠ & ಮುದ್ದೇಬಿಹಾಳ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ ಮಕಾನದಾರ ರವರು ಅಭಿನಂದನೆಗಳು ಸಲ್ಲಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಬೆಂಗಳೂರು: ಶನಿವಾರ ದಿನಾಂಕ 14ನೇ ಮಾರ್ಚ್ 2020 ರಂದು ಬೆಂಗಳೂರಿನಲ್ಲಿ ಸನ್ಮಾನ್ಯ ಶ್ರೀ ಶಂಕರಗೌಡ ಆಯ್ ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳು ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರು ಭಾಜಪ ಕಿಸಾನ್ ಮೋರ್ಚಾ ನವದೆಹಲಿ ಇವರು ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಮುದ್ದೇಬಿಹಾಳ & ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ ಇವರನ್ನು ಸನ್ಮಾನ್ಯ ಶ್ರೀ ಜೆ. ಪಿ. ನಡ್ಡಾ ರಾಷ್ಟ್ರೀಯ ಅಧ್ಯಕ್ಷರು ಭಾಜಪ ನವದೆಹಲಿ ಇವರೊಂದಿಗೆ ಭೇಟಿಯಾಗಿ ಇಂದಿನ ವಿಚಾರಗಳ ಕುರಿತು ಚರ್ಚಿಸಿದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ ,ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064
ರಾಜ್ಯದಲ್ಲಿ ಕೊರೋನ ವೈರಸ್ ಭೀತಿ ಹೆಚ್ಚಾಗಿರುವುದರಿಂದ ವಿಜಯಪುರದಲ್ಲಿ ಜಗತ್ಪ್ರಸಿದ್ಧ ಗೋಳಗುಮ್ಮಟ ಸೇರಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಸರ್ಕಾರದ ಆದೇಶದಂತೆ ನಿಷೇಧ ಹೇರಲಾಗಿದೆ. ವಿಜಯಪುರದ ಐತಿಹಾಸಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ವಿಜಯಪುರದ ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ್, ಉಪ್ಪಲಿಬುರ್ಜ್ ವೀಕ್ಷಣೆಗೆ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ವೈ ಎಸ್ ಪಾಟೀಲರ ಆದೇಶವನ್ನು ಭಾರತೀಯ ಪುರಾತತ್ವ ಇಲಾಖೆ ಪುರಸ್ಕರಿಸಿ ಒಂದು ವಾರಗಳ ಕಾಲ ಪ್ರವೇಶ ನಿಷೇಧಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ ಎಸ್ ಈಶ್ವರಪ್ಪ ಅವರಿಂದ ಅನಾವರಣಗೊಳ್ಳಲು ಸಿದ್ದವಾಗಿದ್ದ, ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಕಾರ್ಯಕ್ರಮ ಮುಂದೂಡಲಾಗಿದೆ. ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದ್ದಾರೆ.ಇನ್ನೂ ಈ ಕಾರ್ಯಕ್ರಮದ ಸಿದ್ದತೆಗೆ ತಗುಲಿದ ವೆಚ್ಚದಲ್ಲಿ ಸುಮಾರು ಐದು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಿದರು.
ರಾಜ್ಯಕ್ಕೂ ವ್ಯಾಪಿಸಿರುವ ಕರೋನಾ ವೈರಸ್ ನಿಂದ ಹೆಚ್ಚಿನ ಅಪಾಯ ತಪ್ಪಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ತುರ್ತಾಗಿ ರಾಜ್ಯದಲ್ಲಿ ಜನದಟ್ಟಣೆಯ ಸಭೆ ಸಮಾರಂಭಗಳನ್ನು ನಡೆಸದಂತೆ ಆದೇಶ ಹೊರಡಿಸಿದ್ದಾರೆ.ಈ ಕಾರಣಕ್ಕಾಗಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಹೇಳಿದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ, ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ : ರಾಷ್ಟ್ರೀಯ ಮಹಿಳಾ ಸಂಘಟನಾ ಸೇವಾ ಸಂಸ್ಥೆ ವಿಜಯಪುರ ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ದಿನಾಂಕ 14-03-2020 ರಂದು ಬೆಳಿಗ್ಗೆ 9:00 ಘಂಟೆಗೆ ವಿಜಯಪುರದ ವೀರಶೈವ ಲಿಂಗಾಯತ ಸಮುದಾಯ ಭವನ ಬಂಜಾರಾ ಕ್ರಾಸ್ ಸೊಲ್ಲಾಪುರ ರಸ್ತೆ,ಯಲ್ಲಿ ಕಾರ್ಯಕ್ರಮ ನಡೆಯಬೇಕಾಗಿತ್ತು ,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋರೊನ ವೈರಸ್ ರೋಗದ ಮುನ್ನೆಚ್ಚರಿಕೆ ಕ್ರಮಕ್ಕೆ ಎಲ್ಲ ಸಮಾರಂಭ ರದ್ದು ಮಾಡಬೇಕೆಂಬ ರಾಜ್ಯಾಧ್ಯಂತ ಆದೇಶ ಹೊರಡಿಸಿದ ಹಿನ್ನೆಲ್ಲೆ ಈ ಮಹಿಳಾ ದಿನಾಚರಣೆಯನ್ನು ಮುಂದುಡಲಾಗಿದೆ.ಮುಂದೆ ನಡೆಯುವ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ ನಾಯಕ ಹೇಳಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064
ಕಂಭ ಸ್ಥಾಪನೆಯಾದ 15 ದಿನಗಳ ಪೂಜಾ ಕಾರ್ಯದ ನಂತರ ಜರುಗುವ ರಥೋತ್ಸವ
ಮಂಡ್ಯ ಜಿಲ್ಲೆಯ ನಾಗಮಂಗಲ: ದೇವಾಲಯಗಳ ನಾಡು ನಾಗಮಂಗಲ ತಾಲ್ಲೂಕಿನ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ನೇರಲೆಕೆರಮ್ಮ ದೇವಿಯ ರಥೋತ್ಸವ ಮಾ.14 ರಂದು ವೈಭವದಿಂದ ಜರುಗಲಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಪಡುವಲ ನೇರಲೆಕೆರೆ ಗ್ರಾಮದಲ್ಲಿರುವ ಗ್ರಾಮ ದೇವತೆಯಾದ ನೇರಲೆಕೆರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ 15 ದಿನಗಳ ಮುಂಚೆಯೇ ಹೊಂಬಾಳೆ ತಂದು ದೇವರಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಕ್ಕೆ ತೆರಳಿ ಸಂಜೆ ವೇಳೆಗೆ ತಮಟೆ,ಡೋಲು,ವಾದ್ಯಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು ಮತ್ತು ಬೀಳ್ಗೊಡೆಯೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆಗೆ ಇಟ್ಟ ಹೊಂಬಾಳೆ ಒಡೆಯುವವರೆಗೆ ನಿರಂತರ ಪೂಜೆ ಸಲ್ಲಿಸಲಾಗುತ್ತದೆ.ಹೊಂಬಾಳೆ ಹೊಡೆದ ನಂತರ ಅದನ್ನು ಕೊಳದಲ್ಲಿ ಪೂಜೆ ಮಾಡಿ ಗ್ರಾಮದ ಮಧ್ಯೆ ಇರುವ ರಂಗದ ಹಟ್ಟಿಯಲ್ಲಿ ಸ್ಥಾಪಿಸಿ ಮಡಿಯಿಂದ ಪೂಜೆ ಸಲ್ಲಿಸುವ ಜೊತೆಗೆ ಜಾತ್ರೆಯವರೆಗೆ ಪ್ರತಿದಿನ ರಾತ್ರಿ ರಂಗ ಕುಣಿತ ಉತ್ಸವ ಜರುಗುತ್ತದೆ.
ಜಾತ್ರೆಯ ಪ್ರಾರಂಭದ ದಿನವಾದ ಮಾ.12 ರಂದು ಪಕ್ಕ ಕಡೇನಹಳ್ಳಿ ಗ್ರಾಮಸ್ಥರಿಂದ ತೇರಿಗೆ ಹಗ್ಗ ಬಿಗಿತ ,ರಥದ ಕಳಾಶಾರೋಹಣ,ವಿದ್ಯುತ್ ದೀಪಾಲಂಕಾರ,ರಂಗಕುಣಿತ ,ಕೋಲಾಟ,ವಿವಿಧ ವಿಮೋದಾವಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಮಾ.13 ರಂದು ನೇರಲೆಕೆರಮ್ಮ ದೇವಿಯ ಉಯ್ಯಾಲೋತ್ಸವ ,ಕುಂಭಾಭೀಷೇಕ ಮತ್ತು ರಥಾಲಂಕಾರ ಕಾರ್ಯಕ್ರಮಗಳು ಜರುಗುತ್ತವೆ.ರಥೋತ್ಸವದ ದಿನವಾದ ಮಾ.14ರ ಶನಿವಾರದಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ದೇವರನ್ನು ರಥದ ಮೇಲೆ ಕೂರಿಸಿ ತೇರಿಗೆ ಬಲಿಪೂಜೆ,ಎಡೆ ಪೂಜೆ ಸಲ್ಲಿಸಿ ರಥೋತ್ಸವ ಆರಂಭವಾಗುತ್ತದೆ. ಜೊತೆಗೆ ಭಕ್ತಾಧಿಗಳಿಂದ ಬಾಯಿಬೀಗ ,ಸೋಮನಕುಣಿತ, ಅರ್ಚಕರಿಂದ ಅಗ್ನಿಕೊಂಡ ಮತ್ತು ಕಡೇನಹಳ್ಳಿ ಗ್ರಾಮದಿಂದ ಮಡೆ ಆರತಿ ಬರುವ ಕಾರ್ಯಕ್ರಮಗಳ ಜೊತೆಗೆ ದೇವರ ಅಡ್ಡ ಪಲ್ಲಕ್ಕಿ ಉತ್ಸವ ಜರುಗುತ್ತದೆ.
ಅಲ್ಲದೇ ಜಾತ್ರೆಗೆ ಮಡಿಕೇರಿ, ಕೆ.ಆರ್.ನಗರ, ಕೆಆರ್.ಪೇಟೆ, ಊಟಿ, ತಮಿಳುನಾಡು,ಅರಕಲಗೋಡು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು ,ಬರುವ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಶುಕ್ರವಾರ ಮತ್ತು ಶನಿವಾರ ಅನ್ನಸಂತಾರ್ಪಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಆಯೋಜಿಸಿದ್ದಾರೆ.ಜನರು ಆಗಮಿಸಿ ದೇವರ ದರ್ಶನ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.
ನಾವು ಚಿಕ್ಕವರಿದಾಗಿನಿಂದಲೂ ನೋಡುವಂತೆ ಭಕ್ತರು ಸಮಸ್ಯೆಗಳನ್ನು ಹರಕೆ ಹೊತ್ತು ದೇವಾಲಯದ ಬಳಿ ಕುಳಿತು ಉತ್ಸವ ಮೂರ್ತಿಯನ್ನು ಅವರ ಮೇಲೆ ದಾಟಿಸಿದರೆ ಸಮಸ್ಯೆ ಶೀಘ್ರದಲ್ಲಿ ಬಗೆಹರಿದ ಉದಾಹರಣೆಗಳಿವೆ ಜೊತೆಗೆ ಚರ್ಮವರೋಗಗಳು ಸಹ ಹರಕೆ ಹೊತ್ತರೆ ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ ಎಂದು ಗ್ರಾಮದ ಯಜಮಾನ ಎನ್.ಎಂ.ನಾಗರಾಜು ಹೇಳುತ್ತಾರೆ.
ತಾಲ್ಲೂಕಿನ ಪಡುವಲ ನೇರಲೆಕೆರೆ ಗ್ರಾಮದಲ್ಲಿರುವ ನೇರಲೆಕೆರಮ್ಮ ದೇವಾಲಯ.
ರಾಯಲ್ ಟಿವಿ ನ್ಯೂಸ್- ಜಗದೀಶ ನಾಗಮಂಗಲ
ರಾಯಲ್ ಟಿವಿ ನ್ಯೂಸ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064
ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರನ್ನು ಹೈಕಮಾಂಡ ನೇಮಕ ಮಾಡಿದ ಹಿನ್ನೆಲೆ ಇತ್ತ ಕಾಂಗ್ರೆಸ್ ಪಕ್ಷದ ಅವರ ಅಭಿಮಾನಿ ಕಾರ್ಯಕರ್ತರ ಹರುಷ ಹೆಚ್ಚಾಗಿದೆ.
ವಿಜಯಪುರ ಜಿಲ್ಲೆಯ ಎನ ಎಸ್ ಯೂ ಐ ನ ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ನೂತನ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ನಮ್ಮನ್ನು ಸಂಪರ್ಕಿಸಿ-8792900064
ಈ ದಿವಸ ದಿನಾಂಕ: 06-03-2020 ರಂದು ಯಲ್ಲವ್ವ ಗಂಡ: ಅಶೋಕ ಗುಡಗುಂಟಿ ವಯಾ: 44 ವರ್ಷ, ಸಾ: ವನಹಳ್ಳಿ ಹಾ/ವ ಮುದ್ದೇಬಿಹಾಳ ಹುಡ್ಕೋ ಕಾಲೋನಿ ಇವರು ಠಾಣೆಗೆ ಬಂದು ತನ್ನ ಪಿರ್ಯಾದಿ ನೀಡಿದ್ದರಲ್ಲಿ- ತನ್ನ ಗಂಡ ಅಶೋಕ ಗುಡಗುಂಟಿ ವಯಾ: 44 ವರ್ಷ ಇವರು ದೇವರ ಬಗ್ಗೆ ಶರಣ ಸಂತರ ಬಗ್ಗೆ ಅತೀಯಾದ ನಂಬಿಕೆ ಹಾಗೂ ಶ್ರದ್ದೇ ಉಳ್ಳವರು ಆಗಿದ್ದು, ಈ ಮೊದಲು 02-03 ಸಲ ದೊಡ್ಡ-ದೊಡ್ಡ ದೇವಸ್ಥಾನಗಳಿಗೆ ಹೋಗುವದಾಗಿ ಹೇಳಿ ಹೋಗಿ 02-03 ವರ್ಷ ಬಿಟ್ಟು ಮರಳಿ ಮನೆಗೆ ಬಂದಿದ್ದು, ಹೀಗಿರುವಾಗ ಸನ್- 2014 ನೇ ಸಾಲೀನ ಗಾಂಧಿ ಜಯಂತಿಯ ದಿವಸ ಸಾಯಂಕಾಲ 04:00 ಗಂಟೆಯ ಸುಮಾರಿಗೆ ತನ್ನ ಗಂಡ ತಮ್ಮ ಬಾಡಿಗೆ ಮನೆಯಿಂದಾ ಮುದ್ದೇಬಿಹಾಳದ ಬಜಾರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ಮರಳಿ ಮನೆಗೆ ಬರಲಿಲ್ಲ. ಹೀಗಾಗಿ ಅವರು ಮತ್ತೆ ದೇವಸ್ಥಾನಗಳಿಗೆ ತಿರುಗಲಿಕ್ಕೆ ಹೋಗಿದ್ದಾರೆ ಈ ಮೊದಲಿನಂತೆ ಮರಳಿ ಮನೆಗೆ ಇಂದಲ್ಲಾ ನಾಳೇ ಬರಬಹುದು ಅಂತಾ ಅನಕೊಂಡು ಸುಮ್ಮನಿದ್ದೇನು. ತನ್ನ ಗಂಡನು ಅಂದಾಜ 5 ಫೂಟ 6 ಇಂಚ ಎತ್ತರ, ಮೈಯಿಂದ ತೆಳ್ಳಗೆ ಸದೃಡ ಮೈಕಟ್ಟು, ಸಾದಗಪ್ಪು ಬಣ್ಣ, ಉದ್ದ ಮುಖದವನು ಇರುತ್ತಾನೆ. ಕಾಣೆಯಾದ ತನ್ನ ಗಂಡನಿಗೆ ಇಲ್ಲಿಯವರೆಗೆ ತುಳಜಾಪೂರ, ಪಂಡರಪೂರ, ಧರ್ಮಸ್ಥಳ, ಮಂತ್ರಾಲಯ ಮಂಗಳೂರ, ಬೆಂಗಳೂರ, ಹುಬ್ಬಳ್ಳಿ, ಗೋವಾ ವಗೈರೆ ಕಡೆಗೆ ಹುಡುಕಾಡಿದ್ದಲ್ಲದೆ ಅವನು ಇಂದಲ್ಲಾ ನಾಳೆ ಈ ಮೊದಲಿನಂತೆ ಮನೆಗೆ ಬಂದಾನು ಅಂತಾ ಇಲ್ಲಿಯವರೆಗೆ ಕಾಯ್ದಿದ್ದು ಅವನು ಬರುವ ಯಾವುದೆ ಲಕ್ಷಣಗಳು ಕಾಣಲಾರದ ಸಲುವಾಗಿ ಈಗ ಬಂದು ಪಿರ್ಯಾದಿ ನೀಡಿದ್ದು, ಕಾರಣ ಪಿರ್ಯಾದಿ ಕೊಡಲು ತಡವಾಗಿರುತ್ತದೆ ಅಂತಾ ನಮೂದಿಸಿದ ಪಿರ್ಯಾದಿಯನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಯ ಗುನ್ನೆ ನಂಬರ: 41/2020 ಕಲಂ: ಮನಷ್ಯ ಕಾಣೆ ನೆದ್ದಕ್ಕೆ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಕಾಣೆಯಾದ ವ್ಯಕ್ತಿಯ ವಿವರ
ಕಾಣೆಯಾದ ವ್ಯಕ್ತಿಯ ಭಾವಚಿತ್ರ ಹೆಸರು & ವಿಳಾಸ
ಅಶೋಕ ತಂದೆ: ಬಸಪ್ಪ ಗುಡಗುಂಟಿ ವಯಾ: 44 ವರ್ಷ, ಜಾತಿ: ಹಿಂದು ಬೇಡರ, ಉದ್ಯೋಗ: ಕೂಲಿ ಕೆಲಸ ಸಾ: ವನಹಳ್ಳಿ ಹಾ/ವ ಮುದ್ದೇಬಿಹಾಳ ಹುಡ್ಕೋ ಕಾಲೋನಿ
ತಂದೆಯ ಹೆಸರು
ಬಸಪ್ಪ ಗುಡಗುಂಟಿ
ಎತ್ತರ
5 ಫೂಟ 6 ಇಂಚ
ಮೈಕಟ್ಟು
ಮೈಯಿಂದ ತೆಳ್ಳಗೆ
ಉದ್ಯೋಗ
ಕೂಲಿ ಕೆಲಸ
ಮುಖ
ಉದ್ದ ಮುಖ
ಬಣ್ಣ
ಸಾದಗಪ್ಪು ಬಣ್ಣ
ಧರಿಸಿರುವ ಬಟ್ಟೆ
ನೀಲಿ ಬಣ್ಣದ ಪೂರ್ತಿ ತೋಳಿನ ಶರ್ಟ ಮತ್ತು ಕಪ್ಪು ಪ್ಯಾಂಟ
ಮಾತನಾಡುವ ಭಾಷೆ
ಕನ್ನಡ, ಹಿಂದಿ, ಕೊಂಕಣಿ, ಮರಾಠಿ.
ಈ ಮೇಲಿನ ಚಹರೆ ಉಳ್ಳ ವ್ಯಕ್ತಿಯ ಬಗ್ಗೆ ತಮ್ಮ ಠಾಣಾ ಸರಹದ್ದಿಯಲ್ಲಿ ಪತ್ತೆಯಾದಲ್ಲಿ ಆರಕ್ಷಕ ಉಪ ನಿರೀಕ್ಷಕರು ಮುದ್ದೇಬಿಹಾಳ ಪೊಲೀಸ ಠಾಣೆ, ಆರಕ್ಷಕ ವೃತ್ತ ನಿರೀಕ್ಷಕರು ಮುದ್ದೇಬಿಹಾಳ ವೃತ್ತ ಆರಕ್ಷಕ ಉಪಾಧೀಕ್ಷಕರು ಬಸವನ ಬಾಗೇವಾಡಿ ಉಪ-ವಿಭಾಗ, ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ ಜಿಲ್ಲೆ ರವರನ್ನು ಸಂಪರ್ಕಿಸಲು ಕೊರಲಾಗಿದೆ.